ಉಡುಪಿ: ಉದ್ಯಾವರದ ಪಿತ್ರೋಡಿಯ ಕಲಾಯಿ ಬೈಲ್ ನ ಬಳಿ ಶಿಲಾಶಾಸನವೊಂದು ಪತ್ತೆಯಾಗಿದೆ. ಶಾಸನದಲ್ಲಿ ಎಡ ಹಾಗೂ ಬಲದಲ್ಲಿ ಸೂರ್ಯ, ಚಂದ್ರನ ಆಕೃತಿ ಇದೆ. ಅದರ ಮಧ್ಯದಲ್ಲಿ ಲಿಂಗದ ಮೇಲೆ ಕುಳಿತ ಬಸವನ ಚಿತ್ರವಿದೆ.
ಕೆಳಗಡೆ ಬರಹ ಇರುವುದು ಕಂಡುಬಂದಿದೆ. ಎರಡು ಫೀಟ್ ಅಗಲ, ಐದು ಫೀಟು ಎತ್ತರದ ಈ ಶಾಸನ ನೆಲದಲ್ಲಿ ಹುದುಗಿದೆ. ಇದರ ಪಕ್ಕದಲ್ಲಿ ಎರಡು ನಾಗಬನ ಇದೆ. ಶಾಸನದ ಎದುರುಗಡೆ ವಿಶಾಲವಾದ “ಪೇರಳೆ” ನಾಮಾಂಕಿತ ಡೊಡ್ಡಕೆರೆ ಇದೆ.
ದತ್ತಾತ್ರೇಯಯ ಭಜನಾ ಮಂಡಳಿಯ ವಾರ್ಷಿಕೋತ್ಸವದಂದು ಓಕುಳಿಯಾಡಿ ಈ ಪೇರಳೆ ಕೆರೆಯಲ್ಲಿ ಸ್ನಾನ ಮಾಡುವುದು ಇಲ್ಲಿನ ವಾಡಿಕೆ. ನಾಗಬನದಲ್ಲಿ ಸೌರ ಮಾನಯುಗಾದಿಯಂದು ಸ್ಥಳೀಯರು ಬಂದು ಪೂಜೆ ಮಾಡುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.