News Karnataka Kannada
Tuesday, April 23 2024
Cricket
ಉಡುಪಿ

ಉಡುಪಿ: ಪಿತ್ರೋಡಿಯ ಕಲಾಯಿ ಬೈಲ್ ನ ಬಳಿ ಶಿಲಾಶಾಸನ ಪತ್ತೆ

An inscription has been found near Kalayi Bail in Pitrodi, Udyavara
Photo Credit : News Kannada

ಉಡುಪಿ: ಉದ್ಯಾವರದ ಪಿತ್ರೋಡಿಯ ಕಲಾಯಿ ಬೈಲ್ ನ ಬಳಿ ಶಿಲಾಶಾಸನವೊಂದು ಪತ್ತೆಯಾಗಿದೆ. ಶಾಸನದಲ್ಲಿ ಎಡ ಹಾಗೂ ಬಲದಲ್ಲಿ ಸೂರ್ಯ, ಚಂದ್ರನ ಆಕೃತಿ ಇದೆ. ಅದರ ಮಧ್ಯದಲ್ಲಿ ಲಿಂಗದ ಮೇಲೆ ಕುಳಿತ ಬಸವನ ಚಿತ್ರವಿದೆ.

ಕೆಳಗಡೆ ಬರಹ ಇರುವುದು ಕಂಡುಬಂದಿದೆ. ಎರಡು ಫೀಟ್ ಅಗಲ, ಐದು ಫೀಟು ಎತ್ತರದ ಈ ಶಾಸನ ನೆಲದಲ್ಲಿ ಹುದುಗಿದೆ. ಇದರ ಪಕ್ಕದಲ್ಲಿ ಎರಡು ನಾಗಬನ ಇದೆ. ಶಾಸನದ ಎದುರುಗಡೆ ವಿಶಾಲವಾದ “ಪೇರಳೆ” ನಾಮಾಂಕಿತ ಡೊಡ್ಡಕೆರೆ ಇದೆ.

ದತ್ತಾತ್ರೇಯಯ ಭಜನಾ ಮಂಡಳಿಯ ವಾರ್ಷಿಕೋತ್ಸವದಂದು ಓಕುಳಿಯಾಡಿ ಈ ಪೇರಳೆ ಕೆರೆಯಲ್ಲಿ ಸ್ನಾನ ಮಾಡುವುದು ಇಲ್ಲಿನ ವಾಡಿಕೆ. ನಾಗಬನದಲ್ಲಿ ಸೌರ ಮಾನಯುಗಾದಿಯಂದು ಸ್ಥಳೀಯರು ಬಂದು ಪೂಜೆ ಮಾಡುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು