News Karnataka Kannada
Friday, March 29 2024
Cricket
ಉಡುಪಿ

ಉಡುಪಿ: ಪುತ್ತಿಗೆ ಮಠದಲ್ಲಿ ಅಕ್ಕಿ ಮುಹೂರ್ತ ಸಂಪನ್ನ

Rice Muhurat Sampanna at Puttige Mutt
Photo Credit : News Kannada

ಉಡುಪಿ: ಮುಂದಿನ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ನಡೆಯುವ ಮುಹೂರ್ತಗಳಲ್ಲಿ ಒಂದಾದ ಅಕ್ಕಿ ಮುಹೂರ್ತ ಇಂದು ಪುತ್ತಿಗೆ ಮಠದಲ್ಲಿ ಸುಗುಣೇಂದ್ರತೀರ್ಥ ಸ್ವಾಮೀಜಿಯ ನೇತೃತ್ವದಲ್ಲಿ ನೆರವೇರಿತು.

ಅಷ್ಠಮಠಗಳಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದಿರುವ ಪರ್ಯಾಯ ಮಹೋತ್ಸವದ ಪೂರ್ವಭಾವಿ ಸಂಪ್ರದಾಯದಂತೆ ಅಕ್ಕಿಮೂಹೂರ್ತ ನಡೆಯಿತು.

ಬೆಳಿಗ್ಗೆ ಪುತ್ತಿಗೆ ಮಠದಲ್ಲಿ ಪಟ್ಟದ ದೇವರಾದ ಪೂಜೆಯ ಅನಂತರ ನವಗ್ರಹ ಪೂಜೆ ನಡೆಯಿತು. ಪ್ರಾರ್ಥನೆ ನಡೆದ ಬಳಿಕ ಅಕ್ಕಿ ಮುಡಿಯನ್ನು ಸುವರ್ಣ ಪಾಲಕಿಯಲ್ಲಿರಿಸಿಕೊಂಡು ಚಂದ್ರಮೌಳೀಶ್ವರ, ಅನಂತೇಶ್ವರ ದೇವಸ್ಥಾನ, ಕೃಷ್ಣಮಠಕ್ಕೆ ತೆರಳಿ ಪ್ರಾರ್ಥನೆ ನಡೆಸಿದ ಬಳಿಕ ಪುತ್ತಿಗೆ ಮಠಕ್ಕೆ ಮೆರವಣಿಗೆಯಲ್ಲಿ ಬಂದು ಚಿನ್ನದ ಮಂಟಪದಲ್ಲಿರಿಸಿ ಪೂಜಿಸಿ ಅಕ್ಕಿ ಮುಹೂರ್ತ ನಡೆಸಲಾಯಿತು.

ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಪುತ್ತಿಗೆ ಸುಗುಣೇಂದ್ರತೀರ್ಥ ಸ್ವಾಮೀಜಿ ಹಾಗೂ ಕಿರಿಯ ಯತಿ ಸುಶೀಂದ್ರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು