ಉಡುಪಿ: ಮುಂದಿನ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ನಡೆಯುವ ಮುಹೂರ್ತಗಳಲ್ಲಿ ಒಂದಾದ ಅಕ್ಕಿ ಮುಹೂರ್ತ ಇಂದು ಪುತ್ತಿಗೆ ಮಠದಲ್ಲಿ ಸುಗುಣೇಂದ್ರತೀರ್ಥ ಸ್ವಾಮೀಜಿಯ ನೇತೃತ್ವದಲ್ಲಿ ನೆರವೇರಿತು.
ಅಷ್ಠಮಠಗಳಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದಿರುವ ಪರ್ಯಾಯ ಮಹೋತ್ಸವದ ಪೂರ್ವಭಾವಿ ಸಂಪ್ರದಾಯದಂತೆ ಅಕ್ಕಿಮೂಹೂರ್ತ ನಡೆಯಿತು.
ಬೆಳಿಗ್ಗೆ ಪುತ್ತಿಗೆ ಮಠದಲ್ಲಿ ಪಟ್ಟದ ದೇವರಾದ ಪೂಜೆಯ ಅನಂತರ ನವಗ್ರಹ ಪೂಜೆ ನಡೆಯಿತು. ಪ್ರಾರ್ಥನೆ ನಡೆದ ಬಳಿಕ ಅಕ್ಕಿ ಮುಡಿಯನ್ನು ಸುವರ್ಣ ಪಾಲಕಿಯಲ್ಲಿರಿಸಿಕೊಂಡು ಚಂದ್ರಮೌಳೀಶ್ವರ, ಅನಂತೇಶ್ವರ ದೇವಸ್ಥಾನ, ಕೃಷ್ಣಮಠಕ್ಕೆ ತೆರಳಿ ಪ್ರಾರ್ಥನೆ ನಡೆಸಿದ ಬಳಿಕ ಪುತ್ತಿಗೆ ಮಠಕ್ಕೆ ಮೆರವಣಿಗೆಯಲ್ಲಿ ಬಂದು ಚಿನ್ನದ ಮಂಟಪದಲ್ಲಿರಿಸಿ ಪೂಜಿಸಿ ಅಕ್ಕಿ ಮುಹೂರ್ತ ನಡೆಸಲಾಯಿತು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಪುತ್ತಿಗೆ ಸುಗುಣೇಂದ್ರತೀರ್ಥ ಸ್ವಾಮೀಜಿ ಹಾಗೂ ಕಿರಿಯ ಯತಿ ಸುಶೀಂದ್ರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.