ಉಡುಪಿ: ಚುನಾವಣೆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ತಮಗೆ ಭತ್ಯೆ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಹೋಮ್ ಗಾರ್ಡ್ ಸುರೇಶ್ ಪೂಜಾರಿ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭ ಉಡುಪಿ ಜಿಲ್ಲೆಯಲ್ಲಿ ಒಟ್ಟು 300 ಹೋಮ್ ಗಾರ್ಡ್ಗಳು ಕರ್ತವ್ಯ ನಿರ್ವಹಿಸಿದ್ದೆವು. ಇದಕ್ಕಾಗಿ ಭತ್ಯೆ ನೀಡುವುದಾಗಿ ಎಸ್ಪಿ ಹೇಳಿದ್ದರು. ಆದರೆ, ಚುನಾವಣೆ ಮುಗಿದು ಇಷ್ಟು ದಿನ ಕಳೆದರೂ ಭತ್ಯೆ ನೀಡದೇ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಹೋಮ್ ಗಾರ್ಡ್ ಕಮಾಂಡೆಂಟ್ ಅವರಿಗೆ ಕೇಳಿದ್ರೆ, ನಿಮಗೆ ಭತ್ಯೆ ನೀಡಲು ಆಗುವುದಿಲ್ಲ ಅಂತ ಹೇಳಿದ್ದಾರೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಪೊಲೀಸರಿಗೆ 500 ರೂ.ನಂತೆ ಐದು ದಿನಗಳ 2500 ಹಣ ಬಂದಿದ್ದು, ನಮಗೆ 250ರಂತೆ 1250 ರೂ. ಬರಬೇಕಿತ್ತು. ಆದ್ರೆ ನಮಗೆ ನ್ಯಾಯಯುತವಾಗಿ ಸಿಗಬೇಕಾದ ಹಣ ನೀಡದೇ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ