News Karnataka Kannada
Wednesday, April 24 2024
Cricket
ಉಡುಪಿ

ಉಡುಪಿ: ಚುನಾವಣಾ ಭತ್ಯೆ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ- ಸುರೇಶ್ ಪೂಜಾರಿ ಆರೋಪ

Suresh Poojary alleges that officials are harassing him by not paying election allowance
Photo Credit : News Kannada

ಉಡುಪಿ: ಚುನಾವಣೆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ತಮಗೆ ಭತ್ಯೆ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಹೋಮ್ ಗಾರ್ಡ್‌ ಸುರೇಶ್ ಪೂಜಾರಿ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭ ಉಡುಪಿ ಜಿಲ್ಲೆಯಲ್ಲಿ ಒಟ್ಟು 300 ಹೋಮ್ ಗಾರ್ಡ್‌ಗಳು  ಕರ್ತವ್ಯ ನಿರ್ವಹಿಸಿದ್ದೆವು. ಇದಕ್ಕಾಗಿ ಭತ್ಯೆ ನೀಡುವುದಾಗಿ ಎಸ್‌ಪಿ ಹೇಳಿದ್ದರು. ಆದರೆ, ಚುನಾವಣೆ ಮುಗಿದು ಇಷ್ಟು ದಿನ ಕಳೆದರೂ ಭತ್ಯೆ ನೀಡದೇ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಹೋಮ್ ಗಾರ್ಡ್ ಕಮಾಂಡೆಂಟ್ ಅವರಿಗೆ ಕೇಳಿದ್ರೆ, ನಿಮಗೆ ಭತ್ಯೆ ನೀಡಲು ಆಗುವುದಿಲ್ಲ ಅಂತ ಹೇಳಿದ್ದಾರೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಪೊಲೀಸರಿಗೆ 500 ರೂ.ನಂತೆ ಐದು ದಿನಗಳ 2500 ಹಣ ಬಂದಿದ್ದು, ನಮಗೆ 250ರಂತೆ 1250 ರೂ. ಬರಬೇಕಿತ್ತು. ಆದ್ರೆ ನಮಗೆ ನ್ಯಾಯಯುತವಾಗಿ ಸಿಗಬೇಕಾದ ಹಣ ನೀಡದೇ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು