News Kannada
Sunday, December 10 2023
ಉತ್ತರಕನ್ನಡ

ಪ್ರತಿ ಜಿಲ್ಲೆಗಳಲ್ಲಿ ಸಿ ಎನ್ ಜಿ ಬಸ್ ಸಂಚಾರ : ಸಚಿವ ಬಿ. ಶ್ರೀರಾಮುಲು

Untitled 1 10
Photo Credit :

ಕಾರವಾರ: ಪ್ರತಿ ಜಿಲ್ಲೆಯಲ್ಲಿ 5 ಸಿ.ಎನ್.ಜಿ. ಬಸ್ ಗಳ ಪ್ರಾಯೋಗಿಕ ಸಂಚಾರಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ಕುಮಟಾದ ಆವಾರದಲ್ಲಿ ಸಾರಿಗೆ ಸಂಸ್ಥೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಾರಿಗೆ ಸಂಸ್ಥೆಗೆ ಪ್ರತಿದಿನ ಡೀಸೆಲ್ ಗೆ 3 ಕೋಟಿ ರೂಪಾಯಿಯಷ್ಟು ಖರ್ಚಾಗುತ್ತಿದೆ.

ಡೀಸೆಲ್ ಹೊರೆ ತಪ್ಪಿಸಲು ಸಿ.ಎನ್.ಜಿ. ಬಸ್ ಸಂಚಾರ ಆರಂಭಿಸಲಿದ್ದು, ಪ್ರಾಯೋಗಿಕವಾಗಿ ಪ್ರತಿ ಜಿಲ್ಲೆಯಲ್ಲಿ ಐದು ಬಸ್ ಗಳ ಸಂಚಾರ ಆರಂಭಿಸಲು ಚಿಂತನೆ ನಡೆದಿದೆ ಎಂದರು.

ರಾಜ್ಯದ ಸಾರಿಗೆ ನಿಗಮದ ನಾಲ್ಕು ವಿಭಾಗಗಳಲ್ಲಿ 45,000 ಬಸ್ ಗಳಿದ್ದು, ಹಳೆಯ ಬಸ್ ಗಳನ್ನು ಬದಲಿಸಿ ಎಲೆಕ್ಟ್ರಿಕ್ ಬಸ್ ಗಳನ್ನು ಬಳಸಲಾಗುವುದು. ಮೆಕಾನಿಕ್ ವಿಭಾಗದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಲಾಗುವುದು. ಪ್ರಯಾಣಿಕರ ಹಿತದೃಷ್ಟಿಯಿಂದ 4 -5 ಸಾವಿರ ಹೊಸ ಬಸ್ ಖರೀದಿಸುವ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

See also  ಐಷಾರಾಮಿ ಕಾರುಗಳ ತೆರಿಗೆ ವಂಚನೆ ಪ್ರಕರಣಗಳು ಸಿಐಡಿ ತನಿಖೆಗೆ: ಶ್ರೀರಾಮುಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು