News Karnataka Kannada
Wednesday, April 24 2024
Cricket
ಉತ್ತರಕನ್ನಡ

ನಿಯಂತ್ರಣ ತಪ್ಪಿ ಕಂಟೇನರ್‌ ಲಾರಿಗೆ ಅಪ್ಪಳಿಸಿದ ಟ್ರಾಲಿ!

Woman killed in accident, son Ashwin and husband critically injured
Photo Credit : News Kannada

ಅಂಕೋಲಾ:  ನಿಯಂತ್ರಣ ತಪ್ಪಿದ ಟ್ರಾಲಿ ವಾಹನವೊಂದು ಕಂಟೇನರ್ ಲಾರಿಯೊಂದಕ್ಕೆ ಅಪ್ಪಳಿಸಿ ಬಳಿಕ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ತಾಲೂಕಿನ ರಾಮನಗುಳಿ ದುಗ್ಗನಬೈಲ್ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಭವಿಸಿದೆ.

ಕಂಟೇನರ್ ಲಾರಿ ಚಾಲಕ ರಾಮನಗರ ಜಿಲ್ಲೆ ಮಾಗಡಿ ನಿವಾಸಿ ರಘು ಶ್ರೀನಿವಾಸ (22), ಟ್ರಾಲಿ ಲಾರಿ ಚಾಲಕ ಸಾಂಗ್ಲಿ ಮಹಾರಾಷ್ಟ್ರ ನಿವಾಸಿ ಮಾರುತಿ ಕಿಶನ್ ಶಲಕೆ (27) ಮತ್ತು ಸಹಾಯಕ ಚಾಲಕ ತುಕಾರಾಮ ಗೋವಿಂದ ಶೇದಾಳ(60) ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಟ್ರಾಲಿ ಲಾರಿ ಚಾಲಕನ ಮೇಲೆ ನಿರ್ಲಕ್ಷ್ಯದ ಚಾಲನೆಯ ದೂರು ದಾಖಲಿಸಲಾಗಿದ್ದು, ಪ್ರಕರಣ ದಾಖಲಿಸಿದ ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು