News Kannada
Wednesday, June 07 2023
ಉತ್ತರಕನ್ನಡ

ಕಾರವಾರ: ಅಂಚೆ ನೌಕರರಿಂದ ಪ್ರತಿಭಟನೆ

Karwar: Postal employees stage protest
Photo Credit : By Author

ಕಾರವಾರ: ಕೇಂದ್ರ ಸರಕಾರವು ಅಂಚೆ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ನಿಲುವನ್ನು ವಿರೋಧಿಸಿ ಕಾರವಾರ ವಿಭಾಗದ ಅಂಚೆ ನೌಕರರು ಮುಖ್ಯ ಅಂಚೆ ಕಚೇರಿ ಎದುರು ಬುಧವಾರ ಒಂದು ದಿನದ ಮುಷ್ಕರ ನಡೆಸಿದರು.

ಎನ್‌ಎಫ್‌ಪಿಇ ಸಂಘಟನೆಯು ದೇಶಾದ್ಯಂತ ಅಂಚೆ ನೌಕರರ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆ ಕಾರವಾರದ ಅಂಚೆ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಯಿತು. ಕಾರವಾರ ವಿಭಾಗದ ಸುಮಾರು ಅಂಚೆ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದರು. ವಿವಿಧ ಘೋಷವಾಖ್ಯಗಳ ಫಲಕ ಹಿಡಿದು ಅಂಚೆ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಇದರೊಂದಿಗೆ 2004 ರ ನಂತರ ಅಂಚೆ ಇಲಾಖೆಯಲ್ಲಿ ಭರ್ತಿಗೊಂಡ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಸೌಲಭ್ಯ ಸಿಗುತ್ತಿಲ್ಲ ಹೀಗಾಗಿ ಈಗಿರುವ ಎನ್‌ಪಿಎಸ್ ಪಿಂಚಣಿ ವ್ಯವಸ್ಥೆ ತೆಗೆದು ಹಳೆಯ ಪಿಂಚಣಿಯನ್ನೇ ಮುಂದುವರಿಸಬೇಕು. ಜತೆಗೆ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿಮಾಡಬೇಕು ಎಂದು ಆಗ್ರಹಿಸಿದರು. ಕಾರವಾರ ವಿಭಾಗದಿಂದ ಅವಿನಾಷ ಕಂಬಳಿ ಹಾಗೂ ಇನ್ನಿತರು ಇದ್ದರು.

See also  ಅಣ್ವಸ್ತ್ರ ಸಾಮರ್ಥ್ಯದ ಕ್ಷಿಪಣಿಗಳನ್ನು ಬೆಲಾರಸ್ ಗೆ ವರ್ಗಾಯಿಸಲಿರುವ ರಷ್ಯಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು