News Kannada
Monday, September 25 2023
ಉತ್ತರಕನ್ನಡ

ಕಾರವಾರ: ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ

Karwar: Karnataka Dalit Sangarsh Samiti staged a protest
Photo Credit :

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪರಿಶಿಷ್ಟ ಜಾತಿ/ವರ್ಗ ದವರಲ್ಲದವರಿಗೆ ಎಸ್.ಸಿ. ಎಸ್.ಟಿ. ಪ್ರಮಾಣ ಪತ್ರ ನೀಡದಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಅಂಬೇಡ್ಕರ ಸರ್ಕಲ್ ಬಳಿಯಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಸಮಿತಿಯ ಪದಾಧಿಕಾರಿಗಳು ಕೊನೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ಉತ್ತರ ಕನ್ನಡದಲ್ಲಿ ಪ್ರವರ್ಗ-1 ರಲ್ಲಿ ಬರುವ ಮೀನುಗಾರ ವೃತ್ತಿಯ ಮೊಗವೀರ ಹಾಗೂ ಮೊಗೇರರು ನೈಜ ಪರಿಶಿಷ್ಟ ಜಾತಿಯವರಲ್ಲ. ಆದರೂ ಕ್ಷೇತ್ರ ನಿರ್ಬಂಧ ತೆಗೆದು ಹಾಕಿದ ಕಾರಣದಿಂದ ಅವರಿಗೆ ಈ ಹಿಂದೆ ಎಸ್.ಸಿ. ಪ್ರಮಾಣ ಪತ್ರವನ್ನು ಸರಕಾರ ನೀಡಿತ್ತು.

ಆದರೆ ಆ ಬಳಿಕ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಲಾಗಿದೆ. ಇನ್ನು ಜಿಲ್ಲೆಯಲ್ಲಿ ಗ್ರಾಮ ಒಕ್ಕಲಿಗ, ಗ್ರಾಮ ಗೊಂಡ, ಗೌಡ, ಪಟಗಾರ ಮುಂತಾದ ಹಿಂದೂಳಿದ ವರ್ಗ 1 ರಲ್ಲಿ ಬರುವ ಕೆಲವರು ಸುಳ್ಳು ದಾಖಲಾತಿ ಸೃಷ್ಟಿಸಿ ಗೊಂಡ ಜನಾಂಗದವರು ಪಡೆಯುವ ಪರಿಶಿಷ್ಟ ವರ್ಗ ಪ್ರಮಾಣ ಪತ್ರವನ್ನು ಪಡೆದಿದ್ದು ಆ ಬಳಿಕ ಸರಕಾರ ವಿಷಯವನ್ನು ಮನಗಂಡು ಅದನ್ನು ನಿಲ್ಲಿಸಿದೆ. ಇನ್ನು ಮುಂದೆಯೂ ಇದೇ ರೀತಿ ಯಾವುದೇ ಕಾರಣಕ್ಕೆ ಅವರಿಗೆ ಎಸ್ ಅಥವಾ ಎಸ್. ಪ್ರಮಾಣ ಪತ್ರ ನೀಡಕೂಡದು.

ಈಗಾಗಲೇ  ಈ ರೀತಿ ಸುಳ್ಳು ಪ್ರಮಾಣ ಪತ್ರ ಪಡೆದಿರುವ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು ಇದು ಮುಂದುವರಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತೆ ಎಂದು ಎಚ್ಚರಿಸಿದರು. ಬಳಿಕ ತಮ್ಮ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ರವಾನಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಶಿವಾನಂದ, ಮಂಜುನಾಥ, ಬಸವರಾಜ, ಫಕೀರಪ್ಪ ಸೇರಿದಂತೆ ಹಲವಾರು ಮಂದಿ ಇದ್ದರು.

See also  ನವದೆಹಲಿ: ದೇಶದಲ್ಲಿ 10,725 ಹೊಸ ಕೋವಿಡ್ ಪ್ರಕರಣಗಳು ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು