News Kannada
Wednesday, March 22 2023

ಉತ್ತರಕನ್ನಡ

ಕಾರವಾರ: ಭಾರತೀಯ ಸೇನೆಯಿಂದ ನಿವೃತ್ತಿಯಾಗಿ ಬಂದ ಯೋಧನಿಗೆ ಅದ್ದೂರಿ ಸ್ವಾಗತ

A retired Soldier from the Indian Army was accorded a grand welcome.
Photo Credit : By Author

ಕಾರವಾರ: ಕಳೆದ 25 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ದೇಶಕ್ಕಾಗಿ ದುಡಿದಿದ್ದ ಯೋಧ, ಇದೀಗ ಸೇವಾನಿವೃತ್ತಿ ಪಡೆದುಕೊಂಡು ತನ್ನೂರಿಗೆ ವಾಪಸ್ಸಾಗಿದ್ದು, ಸೇನೆಯಲ್ಲಿ ಸೇವೆ ಸಲ್ಲಿಸಿ ಊರಿಗೆ ಮರಳಿದ ವೀರಯೋಧನಿಗೆ ಗ್ರಾಮಸ್ಥರು ಹಾರ ಹಾಕಿ, ಸನ್ಮಾನಿಸಿ, ಜೈಕಾರ ಹಾಕುವ ಮೂಲಕ ಅದ್ದೂರಿ ಸ್ವಾಗತ ಕೋರಿದರು.

ಕಾರವಾರ ತಾಲ್ಲೂಕಿನ ಕಡವಾಡದ ಭೋವಿವಾಡ ನಿವಾಸಿ, ಭಾರತೀಯ ಗಡಿ ಭದ್ರತಾ ಪಡೆಯ ಯೋಧ ಬಾಲಕೃಷ್ಣ ಭೋವಿ ಸುದೀರ್ಘ ಇಪ್ಪತ್ತೈದು ವರ್ಷಗಳನ್ನ ಸೇನೆಯಲ್ಲಿ ದೇಶ ಸೇವೆಗೆ ಮುಡಿಪಾಗಿಟ್ಟಿದ್ದರು. 1997ರಲ್ಲಿ ಬಿಎಸ್ಎಫ್ ಸೇರಿದ ಬಾಲಕೃಷ್ಣ, ಬಳಿಕ ಬೆಂಗಳೂರಿನಲ್ಲಿ ಖಾಯಂಮಾತಿ ಆದ ಬಳಿಕ ಇಂದೋರ್‌ನಲ್ಲಿ ತರಬೇತಿ ಪಡೆದುಕೊಂಡಿದ್ದರು.

ತರಬೇತಿ ಬಳಿಕ ಪಶ್ಚಿಮ ಬಂಗಾಳ, ಶಿಲ್ಲಾಂಗ್, ಜಮ್ಮುಕಾಶ್ಮೀರ, ಗುಜರಾತ್, ಪಂಜಾಬ್, ಛತ್ತೀಸ್‌ಗಢ್ ದಲ್ಲಿ ಸೇವೆಯನ್ನ ಸಲ್ಲಿಸಿದ್ದರು. ಅಲ್ಲದೇ 1999ರಲ್ಲಿ ನಡೆದಿದ್ದ ಕಾರ್ಗಿಲ್ ಯುದ್ಧದಲ್ಲಿಯೂ ಸಹ ಯೋಧ ಬಾಲಕೃಷ್ಣ ಭಾಗಿಯಾಗಿದ್ದು, ಧೈರ್ಯದಿಂದ ಹೋರಾಟ ನಡೆಸಿದ್ದರು.

ಇದೀಗ ಸೇವಾ ನಿವೃತ್ತಿಯನ್ನ ಪಡೆದು ಊರಿಗೆ ಮರಳಿದ್ದು ಅವರನ್ನ ರೈಲ್ವೇ ನಿಲ್ದಾಣದಲ್ಲಿಯೇ ಹೂವಿನ ಹಾರ ಹಾಕಿ ಸ್ವಾಗತಿಸುವ ಮೂಲಕ ಗ್ರಾಮಸ್ಥರು ಬರಮಾಡಿಕೊಂಡರು. ಸಿನೆಮಾ ನಟರು, ರಾಜಕಾರಣಿಗಳಿಗೆ ಸಿಗುವಂತಹ ಅದ್ಧೂರಿ ಸ್ವಾಗತ ತಮ್ಮ ಊರಿನಲ್ಲಿ ಸಿಕ್ಕಿದ್ದನ್ನ ಕಂಡು ನಿವೃತ್ತ ಯೋಧ ಬಾಲಕೃಷ್ಣ ಸಂತಸ ವ್ಯಕ್ತಪಡಿಸಿದ್ದಾರೆ.

See also  ಕಾರವಾರ: 26 ಲಕ್ಷ ರೂ. ಮೌಲ್ಯದ ಅಕ್ರಮ ಗೋವಾ ಮದ್ಯ ವಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು