News Kannada
Sunday, October 01 2023
ಉತ್ತರಕನ್ನಡ

ಕಾರವಾರ: ಜೆಸಿಬಿಯಿಂದ ಗುಡಿಸಲಿಗೆ ಹಾನಿ

Karwar: JCB damages hut
Photo Credit : By Author

ಕಾರವಾರ: ಅನಾಥ ಶವಗಳಿಗೆ ಮುಕ್ತಿ ನೀಡುವ ಇಲ್ಲಿನ ಕೋಡಿಬಾಗದ ದೇವಿದಾಸ ಕಲಗುಟ್ಕರ ಅವರ ಗುಡಿಸಲಿನ ಮೇಲೆ ಜೆಸಿಬಿ ಮೂಲಕ ಪ್ರಹಾರ ನಡೆಸಲಾಗಿದೆ. ಗುಡಿಸಲಿನಲ್ಲಿ ಅಡುಗೆ ಮಾಡುವ ತಯಾರಿಯಲ್ಲಿದ್ದಾಗಲೇ ಜೆಸಿಬಿಯೊಂದಿಗೆ ಬಂದ ಖಾಸಗಿ ವ್ಯಕ್ತಿಗಳು, ಶವ ಸುಡಲು ಸಂಗ್ರಹಿಸಿಟ್ಟುಕೊಂಡಿದ್ದ ಕಟ್ಟಿಗೆಯನ್ನೂ ಹಳ್ಳಕ್ಕೆ ಎಸೆದಿದ್ದಾರೆ. ಮನೆ ಕಟ್ಟುವ ಕಲ್ಲುಗಳನ್ನೂ ನಷ್ಟ ಮಾಡಿದ್ದಾರೆ. ಗುಡಿಸಲಿನ ಛಾವಣಿಗೂ ಹಾನಿ ಮಾಡಿದ್ದಾರೆ.

ಲಕ್ಷಾಂತರ ರೂ. ನಷ್ಟ ಆಗಿದೆ. ೧೫ ವರ್ಷಗಳಿಂದ ಇದೇ ಸ್ಥಳದಲ್ಲಿ ವಾಸವಿದ್ದೆ. ದೇವಿದಾಸ ಅವರು ಸಮುದ್ರ, ಹಳ್ಳದಲ್ಲಿ ಸಿಗುವ ಶವಗಳನ್ನು ಎತ್ತಲು, ಅಪರಿಚಿತ ಶವಗಳ ಸಂಸ್ಕಾರ ಮಾಡಲು ಪೊಲೀಸ್ ಇಲಾಖೆಗೆ ನೆರವಾಗುತ್ತಿದ್ದಾರೆ. ಇತ್ತಿಚೇಗೆ ವಿವಿಧ ಸಂಘಟನೆಗಳು ಅವರನ್ನು ಸನ್ಮಾನಿಸಿ ಗೌರವಿಸಿತ್ತು. ಈಗ ನಗರಸಭೆ ಮಾಜಿ ಸದಸ್ಯ ರಂಜು ಮಾಳ್ಸೇಕರ ಅವರೇ ತಮ್ಮ ಗುಡಿಸಲು, ಆಸ್ತಿ ಹಾನಿ ಮಾಡಿದ್ದಾರೆ ಎಂದು ದೇವಿದಾಸ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಂಜು ಮಾಳ್ಸೇಕರ್, ಜೆಸಿಬಿಯೊಂದಿಗೆ ಹೋಗಿದ್ದು ನಿಜ. ಆದರೆ, ಗುಡಿಸಲು ಕೆಡವಿಲ್ಲ. ಅವ ಗುಡಿಸಲು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದೆ. ಆ ಗುಡಿಸಲಿನಲ್ಲಿ ಮದ್ಯ ಮಾರಾಟವೂ ಮಾಡುತ್ತಾರೆ. ನಾವು ಅದರ ಪಕ್ಕದ ನಮ್ಮ ಜಾಗ ಸರಿ ಮಾಡಿಕೊಂಡಿದ್ದೇವೆ ಎಂದು ಪ್ರತಿಕ್ರಿಯಿಸಿದರು. ಗುಡಿಸಲು ಇರುವ ಸಮೀಪದ ಜಾಗದ ಮಾಲೀಕರಿಂದ ೧೦ ವರ್ಷಗಳಿಂದಲೂ ಅಗ್ರಿಮೆಂಟ್ ಮಾಡಿಕೊಂಡಿದ್ದೇನೆ. ಮಾಲೀಕರು, ನಾವು ಸೇರಿ ಜಾಗ ಸರಿಮಾಡಿ ಬೇಲಿ ಹಾಕಿಕೊಂಡಿದ್ದೇವೆ ಎಂದು ರಂಜು ಮಾಳ್ಸೇಕರ್ ತಿಳಿಸಿದರು.

See also  ಗೋಕರ್ಣ: ಕೋಪಕ್ಕೆ ತಾಳ್ಮೆಯೇ ಮದ್ದು ಎಂದ ರಾಘವೇಶ್ವರ ಶ್ರೀ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು