News Kannada
Sunday, October 01 2023
ಉತ್ತರಕನ್ನಡ

ಕಾರವಾರ: ನೂತನ ಪಡ್ತಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ

Foundation stone laid for construction of new Padti Community Hall at Nandanagadda
Photo Credit : By Author

ಕಾರವಾರ: ಸಮಾಜದ ಏಳಿಗೆಗೆ ಯಾವುದೇ ಸಹಕಾರ ಬೇಕಿದ್ದರೂ ನಾನು ಸದಾ ನಿಮ್ಮೊಟ್ಟಿಗೆ ಇರುತ್ತೇನೆ  ಶಿಕ್ಷಣ, ಕ್ರೀಡೆಯಲ್ಲಿ ಸಾಧನೆ ಮಾಡುವ ಪ್ರತಿಭಾನ್ವಿತರಿಗೆ ನನ್ನ ಸಹಕಾರ ಇರುತ್ತದೆ ಎಂದು ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದರು.

ಕಾರವಾರದ ನಂದನಗದ್ದಾದಲ್ಲಿ ನೂತನ ಪಡ್ತಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಪಡ್ತಿ ಸಮಾಜದ ಸಮುದಾಯ ಭವನವು 60.43 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಅದರಲ್ಲಿ ಏನೇನು ಅವಶ್ಯಕತೆ ಇದೆಯೋ ಅದೆಲ್ಲ ಸೌಲಭ್ಯಗಳು ಲಭಿಸುವಂತಾಗಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಈ ಸೌಲಭ್ಯ ತಲುಪಬೇಕು. ಸಮಾಜ ಒಗ್ಗಟ್ಟಾಗಿರಬೇಕು. ಯಾವುದೇ ರಾಜಕೀಯ  ಮಾಡಬಾರದು ಎಂದರು.  ನಮ್ಮ ಯುವಕರಿಗೆ ಉದ್ಯೋಗ ಸೌಲಭ್ಯಕ್ಕಾಗಿ ಕಾರವಾರದ ಮುಡಗೇರಿಯಲ್ಲಿ ಕೈಗಾರಿಕೆ ಸ್ಥಾಪನೆಯಾಗಲಿದೆ.

ಸ್ಥಳೀಯರಿಗೆ ಉದ್ಯೋಗ ಸಿಗಲಿದೆ. ಅಲ್ಲದೇ, ಮುಡಗೇರಿ ಭೂಸ್ವಾಧೀನವಾಗಿ ದಶಕಗಳೇ ಕಳೆದಿದೆ. ಅದರ ಪರಿಹಾರ ಸರಿಯಾಗಿಲ್ಲದ ಕಾರಣ ರೈತರು ಪರಿಹಾರವನ್ನು ಸ್ವೀಕರಿಸಿಲ್ಲ. ಆದರೆ, ಅಧಿವೇಶನದಲ್ಲಿ ಕೈಗಾರಿಕೆ ಸಚಿವರಾದ ಶ್ರಿ ಮುರಗೇಶ್ ನಿರಾಣಿ ಅವರೊಂದಿಗೆ ಮಾತನಾಡಿ ಹೆಚ್ಚುವರಿ ಪರಿಹಾರಕ್ಕೆ ಮನವಿಯನ್ನು ಮಾಡಿದ್ದು, ಅವರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿ ಮೂರು ಪಟ್ಟು ಹೆಚ್ಚುವರಿ ಪರಿಹಾರ ನೀಡುವುದಾಗಿ ಹೇಳಿದ್ದಾರೆ ಎಂದರು.

ಪಡ್ತಿ ಸಮಾಜದ ಅಧ್ಯಕ್ಷರಾಗಿದ್ದ ದಿ.ಕೃಷ್ಣ ಕೋಚರೇಕರ ಅವರ ಆತ್ಮಕ್ಕೆ  ಮೌನಾಚರಣೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷರಾದ ನಾಗೇಶ್‌ಕುರ್ಡೇಕರ, ನಗರ ಸಭೆ ಸದಸ್ಯರಾದ ನಂದಾ ನಾಯ್ಕ, ಸಂದೀಪ ತಳೇಕರ, ಸಮಾಜದ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಗ್ರಾಮ ಪಂಚಾಯತ್ ಜನ ಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

See also  ಮಂಗಳೂರು: ಅ.6ರಿಂದ ರಾಮಕೃಷ್ಣ ಮಠದಲ್ಲಿ ಯೋಗಾಸನ ಶಿಬಿರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು