News Kannada
Wednesday, May 31 2023
ಉತ್ತರಕನ್ನಡ

ಕಾರವಾರ: ಕಾಂಗ್ರೆಸ್ ಏನೇ ಘೋಷಣೆ ಮಾಡಿದರು ಜನ ನಂಬುವುದಿಲ್ಲ – ಕೋಟ ಶ್ರೀನಿವಾಸ ಪೂಜಾರಿ

Karwar: People won't believe whatever Congress announces: Kota Srinivas Poojary
Photo Credit : By Author

ಕಾರವಾರ: ಕಾಂಗ್ರೆಸ್ ಏನೇ ಘೋಷಣೆ ಮಾಡಿದರೂ ಸಹ ಜನರು ಅದನ್ನು ನಂಬುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸುಭದ್ರ ಸರಕಾರ ಬರಬೇಕಾದರೆ ಜನ ಸುಳ್ಳು ಭರವಸೆಗಳನ್ನು ನಂಬುವುದಿಲ್ಲ. ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಭರವಸೆ ವ್ಯಕ್ತಪಿಡಿದರು. ಕಾಂಗ್ರೆಸ್ನವರು ಆಡುವ ಮಾತಿಗೂ, ಮಾಡುವ ಕೆಲಸಕ್ಕೂ ವಿಶ್ವಾಸವನ್ನು ಉಳಿಸಿಕೊಂಡಿಲ್ಲ. ಹಾಗಾಗಿ ಅವರ ಮಾತುಗಳನ್ನು ಜನ ನಂಬುವುದಿಲ್ಲ ಎಂದರು. ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿ ಅವರನ್ನು ಜರಿದ ಅವರು, ನೀವು ಅಪ್ಪಟ ಹಿಂದೂ ಎಂದು ಹೇಳುತ್ತೀರಿ. ಅದನ್ನು ಗೌರವಿಸುತ್ತೇವೆ. ಆದರೆ, ಮತಾಂತರ ನಿಷೇಧ ಕಾಯ್ದೆಯನ್ನು ಯಾಕೆ ವಿರೋಧಿಸಿದ್ದೀರಿ. ಗೋಹತ್ಯೆ ನಿಷೇಧ ಕಾಯ್ದೆ ತಂದಾಗ ಯಾಕೆ ವಿರೋಧಿಸಿದ್ದೀರಿ ಎನ್ನುವುದನ್ನು ಸಾರ್ವಜನಿಕರಿಗೆ ಹೇಳಬೇಕು ಎಂದು ಆಗ್ರಹಿಸಿದರು.

ಅಲ್ಲದೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಗಳೆಲ್ಲವೂ ಚುನಾವಣೆ ಪ್ರೇರಿತ ಎಂದರು. ರಾಜಸ್ಥಾನ ಚುನಾವಣೆ ಪ್ರಚಾರ ಸಭೆಯಲ್ಲಿ ಅಧಿಕಾರಕ್ಕೆ ಬಂದ 10 ದಿನದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಣೆ ಮಾಡಿದ್ದರು. ಹೇಳುವಾಗ ಏಕ್, ದೋನ್, ತೀನ್, ಚಾರ್.. ಎಂದು ಎಣಿಕೆ ಮಾಡಿ 10 ದಿನದಲ್ಲಿ ಮನ್ನಾ ಮಾಡುತ್ತೇವೆ ಎಂದಿದ್ದರು. ಇನ್ನೂ ಏಕ್, ದೋನ್, ತೀನ್… ಆಗಲಿಲ್ಲವೇ ಎಂದು ಟೀಕಿಸಿದರು.

ಮೂಡಬಿದರೆಯಲ್ಲಿ ಪ್ರಸಾದ ಪೂಜಾರಿಯನ್ನು ಬಸ್ ನಿಲ್ದಾಣದಲ್ಲಿ ಕೊಚ್ಚಿ ಕೊಂದಾಗ ಪರಿಹಾರ ಕೊಡಲಿಲ್ಲ. ಗಣವೇಶಧಾರಿ ರುದ್ರೇಶ, ಶರತ ಮಡಿವಾಳ ಅವರನ್ನು ಕೊಲೆ ಮಾಡಿದಾಗ ನೀವು (ಕಾಂಗ್ರೆಸ್) ಏನೂ ಮಾಡಿಲ್ಲ. ಹಿಂದುಗಳು ನಿಮ್ಮನ್ನು ವಿರೋಧವಾಗಿದ್ದಾರೆ, ಹಿಂದುತ್ವವನ್ನು ನೀವು ವಿರೋಧಿಸುತ್ತೀರಿ ಎನ್ನುವ ಕಾರಣಕ್ಕೆ ಕರಾವಳಿ ಭಾಗದ ಹಿಂದೂಗಳು ಸೆಟೆದು ನಿಲ್ಲಬಾರದು, ಬಿಜೆಪಿಯನ್ನು ಬೆಂಬಲಿಸಬಾರದು ಎಂದು ಹೊಸ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದೀರಿ ಜನ ಅದನ್ನು ನಂಬುವುದಿಲ್ಲ ಎಂದು ಕಾಂಗ್ರೆಸ್ ಅನ್ನು ಟೀಕಿಸಿದರು.

See also  ಕಾರವಾರ: ಧೋಬಿಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು