News Kannada
Thursday, March 30 2023

ಉತ್ತರಕನ್ನಡ

ಕಾರವಾರ: ಬಸ್ ನಿರ್ವಾಹಕನಿಂದ ವಿದ್ಯಾರ್ಥಿನಿ ಮೇಲೆ ದರ್ಪ

Bus conductor thrashes student
Photo Credit : News Kannada

ಕಾರವಾರ: ನಿರ್ವಾಹಕರೊಬ್ಬರು ಅತಿರೇಕದ ವರ್ತನೆ ತೋರಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೋರ್ವಳು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.

ಮುದಗಾದಿಂದ ಕಾರವಾರಕ್ಕೆ ಬರುವ ಬಸ್ಸಿನಲ್ಲಿ ನಗರದಲ್ಲಿ ಕಾಲೇಜೊಂದರಲ್ಲಿ ಪಿಯು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೋರ್ವಳು ಐಸ್ಪ್ಲಾಟ್ ಚೆಂಡಿಯಾ ಬಳಿ ಬಸ್ ಹತ್ತಿದ್ದಾಳೆ. ಬಸ್ ಹತ್ತಿದ ಸಂದರ್ಭದಲ್ಲಿ ನಿರ್ವಾಹಕರು ಮುಂದೆ ಹೋಗುವಂತೆ ದೂಡಿದ್ದಾರೆ. ನಿರ್ವಾಹಕರು ದೂಡಿದ್ದರಿಂದ ವಿದ್ಯಾರ್ಥಿನಿ ಮುಂದಕ್ಕೆ ಮುಗ್ಗರಿಸಿದ್ದಾಳೆ. ಈ ಸಂದರ್ಭದಲ್ಲಿ ಅವರ ಐಡಿ ಕಾರ್ಡ್ ಸಹ ಕೆಳಗೆ ಬಿದ್ದಿದೆ. ಇನ್ನೇನು ನಿಯಂತ್ರಣ ಮಾಡದಿದ್ದರೆ ಬಸ್ಸಿನಲ್ಲಿ ಬಿಳುವ ಸಂದರ್ಭ ಇತ್ತು. ಈ ಘಟನೆ ವಿದ್ಯಾರ್ಥಿನಿಗೆ ಮುಜುಗರ ತಂದಿತು. ಬಸ್ ನಿಲ್ದಾಣಕ್ಕೆ ಬಂದ ಬಳಿಕ ವಿದ್ಯಾರ್ಥಿನಿ ಬಸ್ಸಿನಲ್ಲಿ ನಡೆದ ಘಟನೆಯ ಕುರಿತು ನಿರ್ವಾಹಕನನ್ನು ಪ್ರಶ್ನಿಸಿದ್ದಾಳೆ. ಈ ಸಂದರ್ಭದಲ್ಲಿ ನಿರ್ವಾಹಕ ವಿದ್ಯಾರ್ಥಿನಿಯ ಮನವಿಯನ್ನು ಸರಿಯಾಗಿ ಆಲಿಸದೆ ಅತಿರೇಕದಿಂದ ಮಾತನಾಡಿದ್ದಾರೆ.

ನಿರ್ವಾಹಕರ ಈ ಮಾತುಗಳಿಂದ ವಿದ್ಯಾರ್ಥಿ ನೊಂದು ತನ್ನ ಸಹಪಾಠಿಗಳು ಮತ್ತು ವಿದ್ಯಾರ್ಥಿ ಒಕ್ಕೂಟದ ಮುಖಂಡ ರಾಘು ನಾಯ್ಕ ಅವರಿಗೆ ಕರೆ ಮಾಡಿದ್ದಾಳೆ. ಸ್ಥಳಕ್ಕೆ ಬಂದ ರಾಘು ನಾಯ್ಕ ಅವರು ನಡೆದ ಘಟನೆಯ ಬಗ್ಗೆ ನಿರ್ವಾಹಕರ ಬಳಿ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ನಿರ್ವಾಹಕರ ಮಧ್ಯೆ ವಾಗ್ವಾದ ನಡೆಯಿತು. ನಡೆದ ಘಟನೆಯ ಬಗ್ಗೆ ನಿರ್ವಾಹಕರು ಕ್ಷಮೆ ಕೇಳಿದ ನಂತರ ವಿದ್ಯಾರ್ಥಿಗಳು ಅಲ್ಲಿಂದ ತೆರಳಿದರು.

See also  ಕಾರವಾರ: ಮೀನುಗಾರರ ಅಭಿವೃದ್ಧಿಗೆ ಕ್ರಮ- ಎಸ್. ಅಂಗಾರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು