News Kannada
Wednesday, October 04 2023
ಉತ್ತರಕನ್ನಡ

ಕಾರವಾರ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೈಕಲ್ ರ‍್ಯಾಲಿ

Karwar: Cycle rally for equality
Photo Credit : News Kannada

ಕಾರವಾರ: ಮಾ.8ರಂದು ನಡೆಯಲಿರುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ರವೀಂದ್ರನಾಥ ಕಡಲತೀರದ ಮಯೂರವರ್ಮ ವೇದಿಕೆಯ ಹಿಂಭಾಗದಲ್ಲಿ ಸಮಾನತೆಗಾಗಿ ಎನ್ನುವ ಉದ್ದೇಶದಿಂದ ಕಾರವಾರ ಬೈಸಿಕಲ್ ಕ್ಲಬ್ ವತಿಯಿಂದ ಸೈಕಲ್ ರ‍್ಯಾಲಿಗೆ ರವಿವಾರ ನಡೆಯಿತು.

ಪುರುಷರಂತೆ ಮಹಿಳೆಯರನ್ನು ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮಾನತೆ ಧ್ಯೇಯದೊಂದಿಗೆ ಸೈಕಲ್ ಜಾಗೃತಿಗೆ ಲ್ಯಾಂಡ್ ನ ಮೂಲದ ಸಮಾಜ ಸೇವಾ ಕ್ಷೇತ್ರದಲ್ಲಿ ಗೋವಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಜುಡಿತ್, ನೌಕಾನೆಲೆಯ ಮಹಿಳಾ ಅಧಿಕಾರಿ ನವರೂಪ್ ಕೌರ್, ಡಾ. ಅರ್ಚನಾ ಪಿಕಳೆ, ಅಥ್ಲೆಟಿಕ್ ಓಟಗಾರ್ತಿ ಅರ್ಚನಾ ನಾಯಕ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಸೈಕಲ್ ರ‍್ಯಾಲಿಗೆ ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ ಅವರು ಚಾಲನೆ ನೀಡಿದರು. ನೂರಾರು ಜನರು ಸೈಕಲ್ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ನಗರದ ಮಯೂರ ವರ್ಮ ವೇದಿಕೆಯ ಹಿಂಭಾಗದಲ್ಲಿ ಆರಂಭಿಸಿದ ರ‍್ಯಾಲಿ ಕೋಡಿಭಾಗದ ಕಾಳಿ ರಿವರ್ ಗಾರ್ಡ್ ನ ಬಳಿ ಮುಕ್ತಾಯಗೊಂಡಿದರು. ಈ ಸಂದರ್ಭದಲ್ಲಿ ಕಾರವಾರ ಬೈಸಿಕಲ್ ಕ್ಲಬ್ ನ ಅಧ್ಯಕ್ಷ ಅಧ್ಯಕ್ಷ ಡಾ.ಸುರೇಶ್ ಭಟ್, ಕಾರ್ಯದರ್ಶಿ ಸೂರಜ್ ಹೆಗಡೆ, ಖಜಾಂಚಿ ಆರ್.ವಿ.ಭಟ್, ಡಾ.ಸಚಿನ್ ನಾಯ್ಕ, ಕಿಶೋರ್ ಬಾಂದೇಕರ್, ಕೆ.ಎಂ.ಶೆಟ್ಟಿ, ಮಹಾಬಲ ಶೆಟ್ಟಿ, ವಿನೋದ ನಾಯ್ಕ, ಆನಂದ ಥಾಮ್ಸೆ, ಜಗದೀಶ್ ಓಲೇಕಾರ್, ವಿಷ್ಣು ತೋಡ್ಕರ್, ಶಿವಪ್ರಸಾದ್ ನಾಯ್ಕ ಸಹ ಇದ್ದರು

See also  ಕಾರವಾರ: ದೇಶವಿಭಜನೆಯ ದುರಂತ ಘಟನೆಗಳ ಛಾಯಾಚಿತ್ರ ಪ್ರದರ್ಶನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು