News Kannada
Sunday, March 26 2023

ಉತ್ತರಕನ್ನಡ

ಕಾರವಾರ: ಖಾರ್ಲ್ಯಾಂಡ್ ತಡಗೋಡೆಯಿಂದ ರೈತರಿಗೆ ಅನುಕೂಲ- ರೂಪಾಲಿ ನಾಯ್ಕ

Karwar: Farmers will benefit from Kharland's wall: Rupali Naik
Photo Credit : News Kannada

ಕಾರವಾರ: ಖಾರ್ಲ್ಯಾಂಡ್‌ ಒಡ್ಡು ನಿರ್ಮಾಣದಿಂದ ಉಪ್ಪು ನೀರಿನ ಸಮಸ್ಯೆ ನಿವಾರಣೆಯಾಗಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ ಎಂದು ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದರು.

ತಾಲ್ಲೂಕಿನ ಗೊಟೆಗಾಳಿ ಗ್ರಾಮ ಪಂಚಾಯತ ಭೈರಾದಲ್ಲಿ ಕಾರಪೋಯ ಹಳ್ಳಕ್ಕೆ ಹಾಗೂ ಕಟ್ಟೆಹಳ್ಳಕ್ಕೆ ಸ್ವೆಡ್ ನಿರ್ಮಾಣ ಕದ್ರಾ, ಮಲ್ಲಾಪುರ, ಕೆರವಡಿ‌ ಹಾಗೂ ದೇವಳಮಕ್ಕಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಕಾರವಾರ-ಅಂಕೋಲಾ ತಾಲ್ಲೂಕಿನಲ್ಲಿ ಕಾಳಿ ಮತ್ತು ಗಂಗಾವಳಿ ನೀರು ಇದ್ದರೂ ಕುಡಿಯುವ ‌ನೀರಿನ ಸಮಸ್ಯೆ ಇದೆ. ಅದಕ್ಕಾಗಿ ಖಾರ್ಲ್ಯಾಂಡ್‌ ಒಡ್ಡು ನಿರ್ಮಾಣ ಮಾಡಬೇಕು ಎಂದು ಶಾಸಕಾಂಗ ಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಆಗ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಕರಾವಳಿ ಜಿಲ್ಲೆಗೆ 300 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಿದ್ದರು. ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಖಾರ್ಲ್ಯಾಂಡ್‌ ತಡೆಗೋಡೆ ನಿರ್ಮಾಣಕ್ಕೆ ಅನುದಾನವನ್ನು ಒದಗಿಸಿದ್ದರು. ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಹಲವಾರು ಕಡೆಗಳಲ್ಲಿ ಖಾರ್ಲ್ಯಾಂಡ್‌ ಒಡ್ಡು ನಿರ್ಮಾಣವಾಗುತ್ತಿದೆ ಎಂದರು.

ಹಲವು ವರ್ಷಗಳ ನಂತರ ಖಾರ್ಲ್ಯಾಂಡ್‌ ತಡೆಗೋಡೆ ನಿರ್ಮಾಣವಾಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ಕೃಷಿ ಚಟುವಟಿಕೆ ನಡೆಸಲೂ ಕೂಡ ಅನುಕೂಲವಾಗಲಿದೆ.

ಕದ್ರಾ ಗ್ರಾಮ ಪಂಚಾಯತಿಯಲ್ಲಿ ವಿವಿಧ ಕಾಮಗಾರಿಗಳ ಭೂಮಿ ಪೂಜೆ:
ಬಿಜೆಪಿ ಸರ್ಕಾರ ಬಂದ ಮೇಲೆ ಯಾವ ಸರ್ಕಾರವೂ ಮಾಡದಷ್ಟು ಯೋಜನೆ ಜಾರಿಗೊಳಿಸಿದೆ. ಬಸವ ವಸತಿ ಯೋಜನೆ ಅಡಿಯಲ್ಲಿ ಈ ಭಾಗದಲ್ಲಿ 17 ಮನೆಗಳಿಗೆ ಮಂಜೂರಾತಿ ನೀಡಿದ್ದೇವೆ. ಇನ್ನೂ ಮಂಜೂರಾತಿ ನೀಡುತ್ತಿದ್ದೇವೆ. ಕದ್ರಾ ಡ್ಯಾಂ ಈಚೆ ಕಡೆ ಇರುವವರಿಗೆ ಸ್ವತ ಮನೆ ಕಟ್ಟಿಸಿಕೊಡಬೇಕೆಂದು ಯಡಿಯೂರಪ್ಪ ಅವರು ಮತ್ತು ಬಸವರಾಜ ಬೊಮ್ಮಾಯಿ ಅವರು ಅನುಮತಿ ನೀಡಿದರೂ ಅರಣ್ಯಭೂಮಿ ಆಗಿದ್ದರಿಂದ ಸಮಸ್ಯೆ ಉಂಟಾಗಿದೆಯೇ ಹೊರತೂ ನಿಮ್ಮನ್ನು ಅನಾಥರನ್ನಾಗಿಸಬೇಕೆಂಬ ಉದ್ದೇಶ ನಮ್ಮದಲ್ಲ. ಕಾಂಗ್ರೆಸ್ ಆಡಳಿತ ಇದ್ದಾಗ 70 ವರ್ಷಗಳಿಂದ ಆಗದ ಕೆಲಸ ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಗುತ್ತಿದೆ.

ಆದರೆ ಕೆಲವರ ಕೆಟ್ಟ ರಾಜಕಾರಣದಿಂದ ಅಭಿವೃದ್ಧಿಗೂ ತೊಂದರೆ ಉಂಟಾಗುತ್ತಿದೆ. ಬಡವರ ಹೊಟ್ಟೆಯ ಮೇಲೆ ಬರೆ ಎಳೆಯುವುದು ಹೇಡಿತನ. ಯಾರು ಏನೇ ಮಾಡಲಿ ನನ್ನ ಕ್ಷೇತ್ರದಲ್ಲಿ ಇರುವವರನ್ನು ಕಾಯುವುದು ನನ್ನ ಧರ್ಮ ಎಂದು ಹೇಳಿದರು.

ಮಲ್ಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಮಗಾರಿಗಳ ಭೂಮಿ ಪೂಜೆ:

ಹಲವು ದಿನಗಳ ಕನಸಾಗಿದ್ದ ರಸ್ತೆಗಳಿಗೆ ಅನುದಾನವನ್ನು ನೀಡಲಾಗಿದೆ. ಮಲ್ಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಸ್ತೆಗಳು ಬೇಕೆಂದು ಸಾರ್ವಜನಿಕರು ನೀಡಿದ ಮನವಿಯಂತೆ ಅನುದಾನವನ್ನು ಒದಗಿಸಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ.

ಕೋವಿಡ್‌ ಹಾಗೂ ಪ್ರವಾಹದ ಕಾರಣಕ್ಕೆ ಎರಡು ವರ್ಷ ಅನುದಾನದ ಕೊರತೆಯಿಂದ ಕಾರ್ಯ ನಿರ್ವಹಿಸಲು ಕಷ್ಟವಾಗಿತ್ತು. ಅದರ ನಡುವೆಯೂ ಇಷ್ಟೇಲ್ಲ ಅಭಿವೃದ್ಧಿ ಕೆಲಸಗಳಾಗಿವೆ. ಮುಂದಿನ ದಿನದಲ್ಲಿ ಸ್ಥಳೀಯ ಯುವಕರಿಗೆ ಕೈಗಾದಲ್ಲಿ ಉದ್ಯೋಗ ಲಭಿಸಲಿದೆ. ಅದಕ್ಕಾಗಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ಸಂಸದರಾದ ಅನಂತಕುಮಾರ ಹೆಗಡೆ ಅವರು ಸಭೆಯನ್ನು ನಡೆಸಲಿದ್ದಾರೆ ಎಂದರು.

See also  ಕಾರವಾರ: ಸಮುದ್ರ ತೀರದಲ್ಲಿ ಸೀಗರ್ಲ್ ಹಕ್ಕಿಗಳ ಕಲರವ

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ್ ಗುನಗಿ, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ‌ಸದಸ್ಯರು, ಮುಖಂಡರು, ಊರ ನಾಗರಿಕರು, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು