ಕಾರವಾರ: ಅಂಕೋಲಾ ಬೆಳ್ಳಂಬಾರದಲ್ಲಿ ಮೀನುಗಾರಿಕಾ ಬೋಟ್ ಮುಳುಗಿ 1.50 ಕೋಟಿ ರೂ. ಹಾನಿಯಾದ ಘಟನೆ ಮಂಗಳವಾರ ನಡೆದಿದೆ. ಅರಬ್ಬೀ ಸಮಿದ್ರದಲ್ಲಿ ವೇಗವಾದ ಗಾಳಿ ಹಾಗೂ ದೊಡ್ಡ ತೆರೆಗೆ ಬೋಟ್ ಸಿಲುಕಿ ಹಾನಿ.ಬೋಟನ ತಳಭಾಗದಲ್ಲಿ ಇರುವ ಫೈಬರ್ ಕಿತ್ತು ಒಳ ನುಗ್ಗಿದ ನೀರಿನಿಂದ ಬಲೆ ಹಾಗೂ ಮೀನುಗಾರಿಕಾ ಸಲಕರಣೆ ಮುಳುಗಿ ಹಾನಿಯಾಗಿದೆ. ಚಂದ್ರಾವತಿ ಸುಭಾಶ್ ಖಾರ್ವಿ ಎನ್ನುವವರಿಗೆ ಸೇರಿದ ಬೋಟ್ ಜೈ ಶ್ರೀರಾಮ ಎನ್ನುವ ಹೆಸರಿನ ಬೋಟ ಹಾನಿಗೆ ಒಳಗಾಗಿದೆ.
ಮುಳುಗಡೆಯಾಡ ಬೋಟನ್ನು ಚಾಲಕ ಆನಂದು ಪುಂಡಲೀಕ ಕಾರ್ವಿ ಎನ್ನುವವರು ಬೋಟ ಚಲಾಯಿಸುತ್ತಿದ್ದರು. ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹತ್ತಿರದಲ್ಲೇ ಇದ್ದ ಇನ್ನೊಂದು ಬೋಟಿಯ ಗಿರಿಯಾ ಗಣಪತಿ ಕಾರ್ವಿ ಅವರ ಬೋಟ್, ಮುಳುಗಡೆಯಾದ ಬೋಟಿನಲ್ಲಿದ್ದ ಕಾರ್ಮಿಕರ ರಕ್ಷಣೆ ಮಾಡಿದ್ದಾರೆ.