ಕಾರವಾರ: ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಜೂ.7 ರಿಂದ 11 ರವರೆಗೆ ಪಟ್ಟಣದ ಜೈಹಿಂದ್ ಮೈದಾನದಲ್ಲಿ ಅಂಕೋಲಾ ಸಿರಿ ಉತ್ಸವ ನಡೆಯಲಿದೆ ಎಂದು ಲಕ್ಷ್ಮಣ ಪಟಗಾರ ಹೇಳಿದರು.
ಅವರು ಪಟ್ಟಣದ ಖಾಸಗಿ ಹೊಟೇಲಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಅಂಕೋಲಾ ಇದು ಅನೇಕ ಸಾಂಸ್ಕ್ರತಿಕ ಕಲೆಗಳಿಗೆ ಪ್ರಸಿದ್ದಿ ಪಡೆದಿದ್ದು ಇಲ್ಲಿನ ಜನ ಸಾಂಸ್ಕ್ರತಿಕ ಉತ್ಸವಗಳಿಗೆ ಉತ್ತಮ ಪ್ರೋತ್ಸಾಹ ಕೊಡುತ್ತಿದ್ದಾರೆ.
ಅಂಕೋಲಾ ಸಿರಿ ಉತ್ಸವದಲ್ಲಿ ವಸ್ತು ಪ್ರದರ್ಶನ, ಮಾರಾಟ ಮಳಿಗೆ, ಅಮ್ಯೂಸಮೆಂಟ್ ಇವುಗಳ ಜೊತೆ ಪ್ರತಿದಿನ ವೇದಿಕೆಯಲ್ಲಿ ನಿರೀಕ್ಷೆಗೂ ಮೀರಿದ ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದರು.
ಪತ್ರಕರ್ತ ನೀಲಕಂಠ ಬಲೇಗಾರ ಮಾತನಾಡಿ ಶ್ರೀ ಮಂಜುನಾಥ ಟಿವಿ ಚಾನೆಲ್ ಕಳೆದ 10 ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅಂಕೋಲಾದಲ್ಲಿ ಚಾನೆಲ್ ವಿಸ್ತರಣೆಯ ಉದ್ದೇಶ ಹೊಂದಿದ್ದು ಅದರ ಪ್ರಯುಕ್ತ ಹಮ್ಮಿಕೊಂಡ ಅಂಕೋಲಾ ಸಿರಿ ಉತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ ಸ್ವಾಗತಿಸಿದರು. ಸುದ್ದಿಗೋಷ್ಠಿಯಲ್ಲಿ ವಿಶಾಲ ಜಿ ನಾಯ್ಕ, ಮಂಜುನಾಥ ಗಾಂವಕರ ಉಪಸ್ಥಿತರಿದ್ದರು.