ಕಾರವಾರ: ತಾಲೂಕಿನ ಅಂಬ್ರಾಯಿ ಬಳಿಯ ಸಾತಗೇರಿಯ 40 ಅಡಿ ಆಳದ ಬಾವಿಯಲ್ಲಿ ಶನಿವಾರ ಬಿದ್ದಿದ್ದ ಎತ್ತನ್ನು ಅಗ್ನಿಶಾಮಕ ದಳದ ಸಿಬ್ಬಂದಿಯು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
ಸಾತಗೇರಿಯಲ್ಲಿರುವ 40 ಅಡಿ ಆಳದ ನೀರಿಲ್ಲದ ಬಾವಿಯಲ್ಲಿ ಎತ್ತು ಬಿದ್ದಿದ್ದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ರಕ್ಷಣೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಬಳಿಕ ಸ್ಥಳಕ್ಕಾಮಿಸಿದ ಸಿಬ್ಬಂದಿಯು ಎತ್ತನ್ನು ರಕ್ಷಿಸಿದ್ದಾರೆ. ಹಗ್ಗದ ಸಹಾಯದಿಂದ ಬಾವಿಗೆ ಇಳಿದ ಓರ್ವ ಸಿಬ್ಬಂದಿಯು ಎತ್ತಿಗೆ ಹಗ್ಗವನ್ನು ಕಟ್ಟಿ ಮೇಲಕ್ಕೆ ಬಂದಿದ್ದಾರೆ. ಬಳಿಕ ಸಾರ್ವಜನಿಕರ ಸಹಾಯದಿಂದ ಎತ್ತನ್ನು ಮೇಲಕ್ಕೆತ್ತಿದ್ದಾರೆ.
ಕಾರ್ಯಾಚರಣೆಯಲ್ಲಿ ಕಾರವಾರ ಅಗ್ನಿಶಾಮಕ ದಳದ ಅಧಿಕಾರಿ ಮದನ ಕೆ. ನಾಯ್ಕ, ಸಪ್ನಿಲ ಜಿ. ಪೆಡ್ನೆಕರ ಸಿಬ್ಬಂದಿ ಸುನಿಲ ನಾಯ್ಕ, ನಂದೀಶ ಹರಿಕಾಂತ್ರ, ವೀರಬದ್ರಯ್ಯ ಚಕ್ಕಮಠ, ನಾಗರಾಜ .ಜಿ. ನಾಯ್ಕ ಹಾಗೂ ಅರುಣ ಕುಮಾರ ಇದ್ದರು.