ಕಾರವಾರ: ಹೊನ್ನಾವರ ಪಟ್ಟಣದಲ್ಲಿ ನೀರಿನ ಅಭಾವ ತೀವ್ರವಾಗಿರುವ ಬಗ್ಗೆ ವಾರ್ಡ್ ನಿವಾಸಿಗಳು ರೋಸಿ ಹೋಗಿರುವುದನ್ನು ಮನಗಂಡ ಬಾಳಾ ಬಾಳೇರಿ ಮತ್ತವರ ಸ್ನೇಹಿತರು ಉಚಿತವಾಗಿ ನೀರು ಸರಬರಾಜು ಮಾಡಿ ಮಾನವೀಯತೆ ಮೆರೆದಿದ್ದಾರೆ.
ಕಳೆದ ಆರೇಳು ದಿನವಾದರೂ ಪಂಚಾಯತಿಯಿಂದ ನೀರಿನ ಸರಬರಾಜು ಇಲ್ಲದೆ ಇರುವುದನ್ನು ಮನಗಂಡ ಗಿರೀಶ್ ತೇಲಂಗ್, ಗುರುದಾಸ್ ಶಾನಭಾಗ್, ಉಮೇಶ್ ಕಾಮತ್, ಚಂದನ್ ಪ್ರಭು, ನರೇಂದ್ರ ಕಾಮತ್ ಹಾಗೂ ಬಾಳಾ ಬಾಳೇರಿ ಮುಂದಾಳತ್ವದಲ್ಲಿ ಅವರ ಆಪ್ತ ಬಳಗದವರು ಸೇರಿ ಪಟ್ಟಣದ ಜನತೆಗೆ ನೀರು ಪೂರೈಸುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆದಿದ್ದಾರೆ.