News Kannada
Sunday, June 04 2023
ಉತ್ತರಕನ್ನಡ

ಕಾರವಾರ: ಮೀನುಗಾರಿಕೆ ವೇಳೆ ನೌಕಾನೆಲೆ ಸಿಬ್ಬಂದಿಗಳಿಂದ ದೌರ್ಜನ್ಯ

Naval personnel assaulted while fishing
Photo Credit : By Author

ಕಾರವಾರ: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ಸಂದರ್ಭಲ್ಲಿ ಸ್ಥಳೀಯ ಮೀನುಗಾರರು ನೌಕಾನೆಲೆ ಸಿಬ್ಬಂದಿಗಳು ತೊಂದರೆ ನೀಡುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿ ಮುದಗಾ ಹಾಗೂ ಹಾರವಾಡ ಭಾಗದ ಮೀನುಗಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

ಮೀನುಗಾರರು ಜಿಲ್ಲಾಡಳಿಕ್ಕೆ ಸಲ್ಲಿಸಿದ ಮನವಿಯಲ್ಲಿ ಮೀನುಗಾರರು ಪ್ರತಿನಿತ್ಯ ಮೀನು ಹಿಡಿಯಲು ಸಮುದ್ರಕ್ಕೆ ಹೋಗಿ, ಮೀನು ಹಿಡಿದು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ನೌಕಾನೆಲೆ ಸಿಬ್ಬಂದಿಗಳು ಮೀನು ಹಿಡಿಯಲು ಹೋದಾಗ ನಮ್ಮ ದೋಣಿಗಳನ್ನು ದೂಡಿ ಪಲ್ಪಿ ಮಾಡುವುದು, ಮೀನಿನ ಬಲೆ ಕತ್ತರಿಸುವುದು ಹಾಗೂ ಮೀನುಗಾರರ ಮೇಳೆ ದೌರ್ಜನ್ಯ ಮಾಡುವುದು ಮಾಡುತ್ತಿದ್ದಾರೆ.

ಈ ಬಗ್ಗೆ ಈ ಹಿಂದೆಯೂ ದೂರು ನೀಡಲಾಗಿದೆ. ಮೀನುಗಾರಿಕೆ ನಡೆಸುತ್ತಿರುವ ಸಂದರ್ಭದಲ್ಲಿ ನೌಕಾನೆಲೆ ಸಿಬ್ಬಂದಿಗಳು ಅವಾಚ್ಯವಾಗಿ ಬೈದು, ಬಲೆ ಕತ್ತರಿಸುತ್ತಾರೆ. ದಿನದಿಂದ ದಿನಕ್ಕೆ ನೌಕಾನೆಲೆ ಸಿಬ್ಬಂದಿಗಳ ದೌರ್ಜನ್ಯ ಹೆಚ್ಚುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮಕಗಳನ್ನು ಕೈಗೊಳ್ಳದೆ ಇದ್ದರೇ, ಮುದಗಾ ಹಾರವಾಡ ನಿರಾಶ್ರಿತ ಮೀನುಗಾರರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಮನವಿ ಸ್ವೀಕರಿಸಿ, ಈ ಬಗ್ಗೆ ಸಂಬಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭದಲಿ ಮೀನುಗಾರಿಕಾ ಸಂಘಟನೆಯ ದೇವಾನಂದ ಶ್ರೀಕಾಂತ ದುರ್ಗೇಕರ್, ಜಗದೀಶ್ ಬೊಬ್ರುಕರ್, ದಿನಕರ ಮಾಜಾಳಿಕರ್, ಭಗಿರಥ ಬೊಬ್ರುಕರ್ ಹಾಗೂ ಇನ್ನಿತರರು ಇದ್ದರು.

See also  ಕಾರವಾರ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸೈಕಲ್ ರ‍್ಯಾಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು