ಕಾರವಾರ: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ ಸಂದರ್ಭಲ್ಲಿ ಸ್ಥಳೀಯ ಮೀನುಗಾರರು ನೌಕಾನೆಲೆ ಸಿಬ್ಬಂದಿಗಳು ತೊಂದರೆ ನೀಡುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿ ಮುದಗಾ ಹಾಗೂ ಹಾರವಾಡ ಭಾಗದ ಮೀನುಗಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಮೀನುಗಾರರು ಜಿಲ್ಲಾಡಳಿಕ್ಕೆ ಸಲ್ಲಿಸಿದ ಮನವಿಯಲ್ಲಿ ಮೀನುಗಾರರು ಪ್ರತಿನಿತ್ಯ ಮೀನು ಹಿಡಿಯಲು ಸಮುದ್ರಕ್ಕೆ ಹೋಗಿ, ಮೀನು ಹಿಡಿದು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ನೌಕಾನೆಲೆ ಸಿಬ್ಬಂದಿಗಳು ಮೀನು ಹಿಡಿಯಲು ಹೋದಾಗ ನಮ್ಮ ದೋಣಿಗಳನ್ನು ದೂಡಿ ಪಲ್ಪಿ ಮಾಡುವುದು, ಮೀನಿನ ಬಲೆ ಕತ್ತರಿಸುವುದು ಹಾಗೂ ಮೀನುಗಾರರ ಮೇಳೆ ದೌರ್ಜನ್ಯ ಮಾಡುವುದು ಮಾಡುತ್ತಿದ್ದಾರೆ.
ಈ ಬಗ್ಗೆ ಈ ಹಿಂದೆಯೂ ದೂರು ನೀಡಲಾಗಿದೆ. ಮೀನುಗಾರಿಕೆ ನಡೆಸುತ್ತಿರುವ ಸಂದರ್ಭದಲ್ಲಿ ನೌಕಾನೆಲೆ ಸಿಬ್ಬಂದಿಗಳು ಅವಾಚ್ಯವಾಗಿ ಬೈದು, ಬಲೆ ಕತ್ತರಿಸುತ್ತಾರೆ. ದಿನದಿಂದ ದಿನಕ್ಕೆ ನೌಕಾನೆಲೆ ಸಿಬ್ಬಂದಿಗಳ ದೌರ್ಜನ್ಯ ಹೆಚ್ಚುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮಕಗಳನ್ನು ಕೈಗೊಳ್ಳದೆ ಇದ್ದರೇ, ಮುದಗಾ ಹಾರವಾಡ ನಿರಾಶ್ರಿತ ಮೀನುಗಾರರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಮನವಿ ಸ್ವೀಕರಿಸಿ, ಈ ಬಗ್ಗೆ ಸಂಬಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲಿ ಮೀನುಗಾರಿಕಾ ಸಂಘಟನೆಯ ದೇವಾನಂದ ಶ್ರೀಕಾಂತ ದುರ್ಗೇಕರ್, ಜಗದೀಶ್ ಬೊಬ್ರುಕರ್, ದಿನಕರ ಮಾಜಾಳಿಕರ್, ಭಗಿರಥ ಬೊಬ್ರುಕರ್ ಹಾಗೂ ಇನ್ನಿತರರು ಇದ್ದರು.