ಕಾರವಾರ: ಹಿಂದುತ್ವ ಮತ್ತು ರಾಷ್ಟ್ರೀಯ ವಿಚಾರಧಾರೆಯ ಪಕ್ಷ ಬಿಜೆಪಿ. ಕಾಂಗ್ರೆಸ್ ಜಾತಿಧರ್ಮದ ಹೆಸರಲ್ಲಿ ಧರ್ಮ ಒಡೆದು ಅಧಿಕಾರಕ್ಕೆ ಬರುವಂತದ್ದಾಗಿದೆ ಎಂದು ಬಿಜೆಪಿ ಧುರೀಣ ನಾಗರಾಜ ಜೋಶಿ ಹೇಳಿದರು.
ಅವರು ಕಾರವಾರ ಪತ್ರಿಕಾಭವನದಲ್ಲಿ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಎಂದರೆ ಹಿಂದುತ್ವ. ಬಿಜೆಪಿ ಸಬಕಾ ಸಾಥ್ ಸಬ್ ಕಾ ವಿಕಾಸ ಆಗಿದೆ. ಆದರೆ ಕಾಂಗ್ರೆಸ್ ಮಾತ್ರಧರ್ಮದ ಹೆಸರಲ್ಲಿ ಧರ್ಮ ಒಡೆದು ಅಧಿಕಾರಕ್ಕೆ ಬರುವಂತದ್ದಾಗಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧಿಸುತ್ತೇವೆ. ಮತಾಂತರ ಕಾಯಿದೆ ಇತ್ಯಾದಿ ರದ್ದು ಪಡಿಸುತ್ತೆವೆ ಎಂದು ಹೇಳಿದೆ. ನಮ್ಮ ರಾಜ್ಯ ಕೇರಳರಾಜ್ಯದ ವಾತಾವರಣದಂತಾಗಬಾರದು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂದೆ ಬದುಕು ಕಷ್ಟವಿದೆ ಎಂದರು.
ಕಾಂಗ್ರೆಸ್ ನ ಸತೀಶ ಸೈಲ್ ಆಯ್ಕೆಯಾದರೆ ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಇತಿಹಾಸ ಮರುಕಳಿಸದಿರಲಿ, ರಣರಂಗವಾಗದಿರಲಿ. ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ, ಅಭಿವೃದ್ದಿ ಬಿಜೆಪಿಯಿಂದ ಮಾತ್ರ ಸಾಧ್ಯ. ರೂಪಾಲಿಯನ್ನು ಸೋಲಿಸಲು ಮೂರು ಮಾಜಿ ಶಾಸಕರು ಸಾಕಷ್ಟು ಪ್ರಯತ್ನದಲ್ಲಿದ್ದಾರೆ. ಯಾರೇ ಎಷ್ಟೇ ಪ್ರಯತ್ನಪಟ್ಟರೂ ಬಿಜೆಪಿಯಿಂದ ರೂಪಾಲಿ ನಾಯ್ಕ ಆಯ್ಕೆಯಾಗಲಿದ್ದಾರೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ರಾಜೇಶ ನಾಯಕ, ಮಹೇಂದ್ರ ಬಾನಾವಳಿಕರ, ಉದಯ ಬಿಣಗೆ, ನಾಗೇಂದ್ರ, ಬಾಲಚಂದ್ರ ಅಂಬಿಗ, ರಂಜನ್ ಇತರರು ಹಾಜರಿದ್ದರು.