ಕಾರವಾರ: ಈಡಿಗ ಸಮುದಾಯದ ನಾಯಕರು ತಮ್ಮ ಸಮುದಾಯವನ್ನು ರಾಜಕೀಯವಾಗಿ ಜೊತೆಗೆ ತೆಗೆದುಕೊಂಡು ಹೋಗದಿದ್ದರೆ ಮುಂದೆ ಸೋಲು ಖಂಡಿತ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಪ್ರಣವಾನಂದ ಸ್ವಾಮಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದಲ್ಲಿರುವ ಈಡಿಗ ಸಮುದಾಯದ ನಾಯಕರು ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ ಎಂದರು. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 7 ಕ್ಷೇತ್ರದಲ್ಲಿ ಮಾತ್ರ ಈಡಿಗ ಸಮಾಜದವರಿಗೆ ನೀಡಿಲಾಗಿತ್ತು. ಅದರಲ್ಲಿ 4 ಸ್ಥಾನದಲ್ಲಿ ನಮ್ಮವರು ಗೆಲುವು ಸಾಧಿಸಿದ್ದಾರೆ. ಇದು ನಮ್ಮದೇ ವೈಫಲ್ಯ. ಹೀಗಾಗಿ ನಾವು ನಮ್ಮವರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಕೇಳಲು ಅನರ್ಹರಾಗಿದ್ದೇವೆ.
ನಮ್ಮ ಸಮುದಾಯದವರಿಗೆ ರಾಜಕೀಯವಾಗಿ ಜಾಗೃತಿ ಕಡಿಮೆಯಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಸೇರಿದಂತೆ ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಗ್ರಾಮ ಪಂಚಾಯಿತಿಗಳ ಚುನಾವಣೆಗಳಲ್ಲಿ ಈಡಿಗ ಸಮುದಾಯದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಸಂಘಟಿತರಾಗಬೇಕಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದಿನ ಅವಧಿಯಲ್ಲಿ ಕುರಿಬ ಸಮುದಾಯಕ್ಕೆ ರಾಯಣ್ಣ ಅಭಿವೃದ್ಧಿ ಪ್ರಧಿಕಾರ, ಕಾಗಿನೆಲೆ ಅಭಿವೃದ್ಧಿ ಪೀಠ, ರಾಜ್ಯದಾದ್ಯಂತ 800 ಕ್ಕು ಹೆಚ್ಚು ಕನಕ ಭವನಗಳು ಹಾಗೂ ಕುರುಬ ಸಮುದಾಯದವರಿಗೆ ಯುವಕರು ಕಲಿಯಲು ಸರಕಾರದಿಂದ ಐ.ಎ.ಎಸ್ ತರಬೇತಿ ಕೇಂದ್ರಗಳನ್ನು ನೀಡಿದ್ದರು. ಆದರೆ ನಮ್ಮ ನಾಯಕರು ಸಮುದಾಯಕ್ಕೆ ಏನು ಮಾಡಲಿಲ್ಲ. ಹೀಗಾಗಿ ನಮ್ಮವರು ಸಮುದಾಯನ್ನು ಜೊತೆಗೆ ತೆಗೆದುಕೊಂಡು ಹೋಗದಿದ್ದರೆ ಮುಂದಿನ ದಿನಗಳಲ್ಲಿ ಸೋಲು ಖಂಡಿತ ಎಂದರು.
ಕೆಲವು ಬೇಡಿಕೆಗಳ ಬಗ್ಗೆ ಮಾತನಾಡಿ, ಕಾಂಗ್ರೆಸ್ ಪಕ್ಷವು ಈ ಹಿಂದೆ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ 1.5 ಸಾವಿರ ಕೋಟಿ ನೀಡುತ್ತೇವೆ ಎಂದಿದ್ದರು. ಅದನ್ನು ಕೂಡಲೇ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿ ನಮ್ಮ ಸಮುದಾಯದವರಿಗೆ ಸರಕಾಎದಿಂದ ಐ.ಎ.ಎಸ್, ಕೆ.ಎ.ಎಸ್ ಹಾಗೂ ಪೊಲೀಸ್ ಹುದ್ದೆಗಳಿಗೆ ತರಬೇತಿ ಸಂಸ್ಥೆಗಳನ್ನು ನಿರ್ಮಿಸಬೇಕೆ. ಹಾಗೂ ಕುಲಕಸುಬಾದ ನೀರಾ ತೆಗೆಯಲು ಅವಕಾಶ ನೀಡಬೇಕು. ಇವುಗಳನ್ನೆಲ್ಲಾ ಕೇಳುವ ಸ್ಥಿತಿಯಲ್ಲಿ ನಾವಿಲ್ಲ. ಆದರೆ ಮುಂದೆ ಅವರಾಗಿಯೇ ಬಂದು ಕೊಡುವಂತೆ ಸಂಘಟಿತರಾಗಬೇಕು ಎಂದರು.