News Karnataka Kannada
Friday, April 26 2024
ಉತ್ತರಕನ್ನಡ

ಮಾಜಿ ಸಚಿವರ ಚಾಲಕನ ಬಳಿ ಪತ್ತೆಯಾದ ಹಣ ಯಾರದ್ದು ಎಂದು ತನಿಖೆ ನಡೆಸಿ : ರೂಪಾಲಿ ನಾಯ್ಕ

Clash between MLAs
Photo Credit : News Kannada

ಕಾರವಾರ: ಕಳೆದ ಕೆಲವು ದಿನಗಳ ಹಿಂದೆ ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರ ಚಾಲಕನ ಬಳಿ ಪತ್ತೆಯಾಗಿದ್ದ ಹಣ ಯಾರದ್ದು ಎಂದು ಸೂಕ್ತ ತನಿಖೆಯಾಗಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಒತ್ತಾಯ ಮಾಡಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಪರ ಬ್ಯಾಟಿಂಗ್ ಮಾಡಲು ಅದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಅವರು ನೀಡಿರಬಹುದು ಎನ್ನುವ ಬಗ್ಗೆ ಊಹಾಪೋಹಗಳೆದ್ದೀವೆ ಎಂದು ಅವರು ತಿಳಿಸಿದರು.

ಬಿಜೆಪಿ ಕಾರ್ಯಕರ್ತರು ತಮ್ಮ ಬಳಿ ಇದ್ದಾರೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರು ಹೇಳಿಕೊಳ್ಳುತ್ತಿದ್ದಾರೆ. ಅಷ್ಟಿದ್ದಾಗ ಅವರಿಗೆ ಬಿಜೆಪಿ ಏಕೆ ಟಿಕೆಟ್ ಸಿಗಲಿಲ್ಲ. ಸುಳ್ಳು ಹೇಳುವ ಮನಸ್ಥಿತಿಯನ್ನು ಅಸ್ನೋಟಿಕರ್ ಸುಧಾರಿಸಿಕೊಳ್ಳಬೇಕು ಎಂದು ಅವರು ವಾಗ್ದಾಳಿ ನಡೆಸಿದರು.

ಸಮಾಜದ ಸೇವಕನ ಮುಖವಾಡ ಹಾಕಿಕೊಂಡಿರುವವ ಡೊಂಬರಾಟ ಕೆಲವು ದಿನದಲ್ಲಿ ಮುಗಿಯಲಿದೆ. ಪ್ರತಿಸಲ ಭ್ರಷ್ಟಾಚಾರದ ಆರೋಪದ ಹಾಕಿಹಾಕಿ ಅವರೇ ಸುಸ್ತಾಗಿದ್ದಾರೆ. ಅವರ ಮೇಲೆ ಐದು ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕಿದ್ದೇವೆ ಎಂದರು. ಸಮಾಜ ಸೇವಕರೊಬ್ಬರು 13ಕ್ಕೂ ಹೆಚ್ಚು ಪ್ರಕರಣಗಳಿರುವ ಸೈಲ್ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಅವರ ಭ್ರಷ್ಟಾಚಾರದ ಬಗ್ಗೆ ಸಮಾಜ ಸೇವಕರು ಏಕೆ ಮಾತನಾಡುತ್ತಿಲ್ಲ ಎಂದು ರೂಪಾಲಿ ಪ್ರಶ್ನಿಸಿದರು.

ನನ್ನ ಮೇಲೆ ಪದೇಪದೇ ಭ್ರಷ್ಟಾಚಾರ ಆರೋಪ ಮಾಡಿದರೆ ನನ್ನ ಬಗ್ಗೆ ಜನರಿಗೆ ತಿರಸ್ಕಾರದ ಮನೋಭಾವ ಬೆಳೆಯುತ್ತದೆ ಇದರಿಂದ ತಮ್ಮ ಬೆಳೆ ಬೇಯಿಸಿಕೊಳ್ಳಬಹುದು ಎಂದು ಸಮಾಜ ಸೇವಕರು ಊಹಿಸಿದ್ದರು. ನಮಗೂ ಒಂದು ಕಾಲ ಬರಲಿದೆ ಆಗ ನಾವು ಸೂಕ್ತ ಉತ್ತರ ಕೊಡುತ್ತೇವೆ ಎಂದರು.

ಭ್ರಷ್ಟಾಚಾರ, ಭ್ರಷ್ಟಾಚಾರ ಎಂದು ಆರೋಪ ಮಾಡುತ್ತಲೇ ಇದ್ದಾರೆ. ಅವರ ಬಗ್ಗೆ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿದ್ದೇವೆ. ಸುಮಾರು ಹತ್ತು ತಿಂಗಳಾಯಿತು ಆದರೆ ಇದುವರೆಗೆ ಅವರು ನ್ಯಾಯಾಲಯಕ್ಕೆ ದಾಖಲೆಗಳನ್ನು ಪೂರೈಸಲಿಲ್ಲ ಎಂದು ಅವರು ಹೇಳಿದರು.

ಅಸ್ನೋಟಿಕರ್ ಅವರ ಮನಸ್ಥಿತಿ ಹೇಗಿಯದೆಂದರೆ ಒಂದು ಕಡೆ ಹೋಗಿ ಗಂಗಾಧರ ಭಟ್ ಅವರಿಗೆ ಮತ ಹಾಕಿ ಎನ್ನುತ್ತಾರೆ. ಮತ್ತೊಂದು ಕಡೆ ಹೋಗಿ ನಾನು ಮೊದಲು ಜೆಡಿಎಸ್ನಲ್ಲಿದ್ದೆ ಹಾಗಾಗಿ ಚೈತ್ರಾ ಕೋಠಾರಕರ್ ಅವರಿಗೆ ಮತಹಾಕಿ ಎನ್ನುತ್ತಾರೆ ಮತ್ತೊಂದು ಕಡೆ ಹೋಗಿ ಸೈಲ್ ಅವರಿಗೆ ಮತಹಾಕಿ ಎನ್ನುತ್ತಾರೆ. ಒಬ್ಬ ಮಹಿಳೆಯನ್ನು ಸೋಲಿಸಲು ಅವರು ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವುದು ಅವರಿಗೇ ಗೊತ್ತಿಲ್ಲ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು