ಕಾರವಾರ: ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದರೂ, ಇನ್ನಷ್ಟು ಅಭಿವೃದ್ಧಿ ಸಾಧಿಸಬೇಕಾಗಿದೆ. ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯಾಗಿ ರೂಪಿಸಬೇಕಾಗಿದೆ ಇದಕ್ಕಾಗಿ ಮತ್ತೊಮ್ಮೆ ತಾವೆಲ್ಲರೂ ಆಶೀರ್ವಾದ ನೀಡಿ ಬೆಂಬಲಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ರೂಪಾಲಿ ಎಸ್ ನಾಯ್ಕ ಹೇಳಿದರು.
ಅಂಕೋಲಾ ಶ್ರೀ ಗೆಳೆಯರ ಬಳಗ ಅವರ್ಸಾ ಹಟ್ಟಿಕೇರಿ ತಂಡದ ಸದಸ್ಯರ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತೀಯ ಜನತಾ ಪಕ್ಷದ ಡಬಲ್ ಇಂಜಿನ್ ಸರ್ಕಾರ ರಾಜ್ಯದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದೆ. ಇತ್ತಿಚೆಗೆ ಹಟ್ಟಿಕೇರಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ಎಲ್ಲರ ಸಹಕಾರದಿಂದ ಅಭೂತಪೂರ್ವವಾಗಿ ನಡೆದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಶಿಸ್ತು ತತ್ವ ಸಿದ್ದಾಂತ ಹಾಗೂ ರೂಪಾಲಿ ಎಸ್.ನಾಯ್ಕ ಶಾಸಕರಾಗಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಚುನಾವಣೆಯಲ್ಲಿ ಅವರನ್ನು ಬೆಂಬಲಿಸಲು ಬಿಜೆಪಿ ಮುಖಂಡ ರಾಜೇಶ್ ಈರಾ ನಾಯ್ಕ ಅವರ ನೇತೃತ್ವದಲ್ಲಿ ಶ್ರೀ ಗೆಳೆಯರ ಬಳಗ ಅವರ್ಸಾ ಹಟ್ಟಿಕೇರಿ ತಂಡದ ಸದಸ್ಯರಾದ ಪ್ರಶಾಂತ್ ಕೆ ನಾಯ್ಕ, ದಿನೇಶ್ ಏನ್ ನಾಯ್ಕ, ಮಂಜುನಾಥ ಎಲ್ ನಾಯ್ಕ, ಶಾಂತು ಕೆ. ನಾಯ್ಕ. ಸಂತು ಎಲ್ ನಾಯ್ಕ, ಸೂರಜ್ ಎಲ್ ನಾಯ್ಕ, ಪ್ರಸಾದ್ ಆರ್ ನಾಯ್ಕ, ರಾಹುಲ್ ಎಸ್ ನಾಯ್ಕ, ಪಾಲ್ಗುಣ ಕೆ. ನಾಯ್ಕ, ಮಂಜುನಾಥ್ ಎಸ್ ನಾಯ್ಕ, ಸಾಗರ ಈಶ್ವರ್ ನಾಯ್ಕ, ಜಾನೇಶ್ವರ್ ಗೌಡ, ಸಂಜಯ ಆರ್. ನಾಯ್ಕ, ಸುಭಾಷ್ ಆರ್ ನಾಯ್ಕ, ಶಂಕರ್ ಎಲ್ ನಾಯ್ಕ, ಮಂಜುನಾಥ ಜೆ. ನಾಯ್ಕ, ನವೀನ್ ಈ. ನಾಯ್ಕ, ಸುರೇಶ್ ಪಿ ನಾಯ್ಕ, ರಾಜೇಂದ್ರ ನಾಯ್ಕ, ಮೆಣಸು ಪೀ. ನಾಯ್ಕ, ಲಿಂಗ ಪೀ ನಾಯ್ಕ, ಮುರಳಿ ಟಿ. ನಾಯ್ಕ, ಈಶ್ವರ್ ಕೆ, ನಾಯ್ಕ, ದಾಸ ಎಸ್. ನಾಯ್ಕ ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಪಕ್ಷದ ಪ್ರಮುಖರಾದ ಚಂದ್ರಕಾಂತ ನಾಯ್ಕ, ಪಿ.ಪಿ.ನಾಯ್ಕ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.