ಉತ್ತರಕನ್ನಡ: ಜಿಲ್ಲೆಯ ಭಟ್ಕಳದ ಮುರುಡೇಶ್ವರದಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗನನ್ನು ರಕ್ಷಿಸಲಾಗಿದೆ. ಯುವಕನನ್ನು ಮಂಗಳೂರು ಮೂಲದ ಉದಯ್ ಕುಮಾರ್ ಎಂದು ಗುರುತಿಸಲಾಗಿದೆ.
ಈತ ಈಜಲು ಹೋಗಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗುತ್ತಿದ್ದಾಗ ಸ್ಥಳೀಯರಾದ ಜಯರಾಮ, ಸತೀಶ್, ಸಚಿನ್ ಮತ್ತು ಪಾಂಡುರಂಗ ಎಂಬುವರು ಸೇರಿ ರಕ್ಷಿಸಿದ್ದಾರೆ.