ಚಿಕ್ಕಮಗಳೂರು : ಮುಲ್ಲಾ ನಮಾಜ್ ಮಾಡುವುದಾದರೆ ಯತಿಯಾಗಿರುವ ನನಗೂ ಕೂಗಲು ಅವಕಾಶ ಮಾಡಿಕೊಡಿ. ಅವರು ಅಲ್ಲಾಹುನನ್ನು ಕೂಗುವುದಾದರೆ ನಾವು ರಾಮನನ್ನು ಕೂಗುತ್ತೇವೆ. ಮುಸ್ಲಿಮರಿಗೆ ಒಂದು ನ್ಯಾಯ, ಹಿಂದೂಗಳಿಗೆ ಒಂದು ನ್ಯಾಯ ಎಷ್ಟು ಸರಿ ಎಂದು ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ಪ್ರಶ್ನಿಸಿದರು.
ಸಖರಾಯಪಟ್ಟಣದಲ್ಲಿ ಮೈಕ್ ಬ್ಯಾನ್ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಶ್ರೀಗಳು, ನಮ್ಮ ಮಠದಲ್ಲಿ ಕಾಳಿ ಕೂಗು ಕೂಗುತ್ತಿದ್ದೇವೆ. ಮಸೀದಿಗಳಲ್ಲಿ ಐದು ಬಾರಿ ಕೂಗುವುದಕ್ಕೆ ನ್ಯಾಯಾಲಯ ನಿಷೇಧ ಹೇರಿದೆ.
ಆದರೂ ಅದನ್ನು ತಪ್ಪಿಸಲು ಆಗುತ್ತಿಲ್ಲ. ಹೀಗಾಗಿ ಈ ನೆಲದ ಕಾನೂನಿನ ಶಕ್ತಿ ಎಷ್ಟು ಎಂಬುದನ್ನು ತೋರಿಸಿಕೊಡುವ ದೃಷ್ಟಿಯಿಂದ ನಾವು ಕಾರ್ಯನಿರ್ವಹಿಸಬೇಕಿದೆ. ಈ ಬಗ್ಗೆ ಎಲ್ಲ ಹಿಂದೂ ಸಂಘಟಕರು ಒಂದಾಗಿ ಅಭಿಯಾನ ಆರಂಭಿಸಬೇಕು. ಜತೆಗೆ ಸರಕಾರ ಸೂಕ್ತ ತೀರ್ಮಾನ ತೆಗೆದುಕೊಂಡು ಮಸೀದಿಗಳಿಂದ ಮೈಕ್ ತೆಗೆಯಲು ಮುಂದಾಗಬೇಕು ಎಂದರು.