News Karnataka Kannada
Wednesday, April 24 2024
Cricket
ಚಿಕಮಗಳೂರು

ಹೊರ ರಾಜ್ಯದಿಂದ ಗಾಂಜಾ ತಂದು ಮಾರಾಟ ಮಾಡುತಿದ್ದ ಐವರ ಬಂಧನ

Karnataka Police
Photo Credit :

‌ಚಿಕ್ಕಮಗಳೂರು: ಸದಾ ಕಾಫಿ ಸುವಾಸನೆ ಬೀರುತ್ತಿದ್ದ ಚಿಕ್ಕಮಗಳೂರಲ್ಲೂ ಕೂಡ ಇದೀಗ
ಗಾಂಜಾ ಘಾಟು ಎದ್ದಿದೆ.  ವಿಶಾಖಪಟ್ಟಣಂದಿಂದ ರಾಜ್ಯಕ್ಕೆ ಗಾಂಜಾ ತರುತ್ತಿದ್ದ ಐವರು
ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸತತ 11 ತಿಂಗಳಿನಿಂದ ಆರೋಪಿಗಳ ಲೋಕೇಶನ್ ಟ್ರ್ಯಾಕ್ ಮಾಡ್ತಿದ್ದ ಸಿಇಎನ್ ಪೊಲೀಸ್ರು,
ವಿಶಾಖಪಟ್ಟಣಂ ನಿಂದ ಕಾಫಿ ನಾಡಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ವಿಷಯ ತಿಳಿದ
ತಕ್ಷಣವೇ ಕಾಯಾರ್ಚರಣೆಗಿಳಿದಿದ್ದಾರೆ.
ಕಾರ್ಯಾಚರಣೆಯಲ್ಲಿ ಒಟ್ಟು ಐವರನ್ನು ಬಂಧಿಸಿದ್ದು ಇದರಲ್ಲಿ ಚಿಕ್ಕಮಗಳೂರಿನ ಇಬ್ಬರು,
ಮಂಡ್ಯ ಮೂಲದ ಓರ್ವ ವ್ಯಕ್ತಿಯನ್ನು ಸಿಇಎನ್ ಪೊಲೀಸರು ಬಂಧಿಸಿ, 120 ಕೆಜಿ ಗಾಂಜಾ
ವಶಪಡಿಸಿಕೊಂಡಿದ್ದಾರೆ. ಇನ್ನು ಆರೋಪಿಗಳು 2020 ಸೆಪ್ಟೆಂಬರ್​ನಲ್ಲಿ ಗಾಂಜಾ ಕೇಸ್
ನಲ್ಲಿ ಅರೆಸ್ಟ್ ಆಗಿದ್ರು ಎನ್ನಲಾಗಿದೆ. ಪೊಲೀಸರ ಮಿಂಚಿನ ಕಾರ್ಯಾಚರಣೆಗೆ ಎಸ್​ಪಿ
ಅಕ್ಷಯ ಶ್ಲಾಘಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು