ಚಿಕ್ಕಮಗಳೂರು: ಸದಾ ಕಾಫಿ ಸುವಾಸನೆ ಬೀರುತ್ತಿದ್ದ ಚಿಕ್ಕಮಗಳೂರಲ್ಲೂ ಕೂಡ ಇದೀಗ
ಗಾಂಜಾ ಘಾಟು ಎದ್ದಿದೆ. ವಿಶಾಖಪಟ್ಟಣಂದಿಂದ ರಾಜ್ಯಕ್ಕೆ ಗಾಂಜಾ ತರುತ್ತಿದ್ದ ಐವರು
ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸತತ 11 ತಿಂಗಳಿನಿಂದ ಆರೋಪಿಗಳ ಲೋಕೇಶನ್ ಟ್ರ್ಯಾಕ್ ಮಾಡ್ತಿದ್ದ ಸಿಇಎನ್ ಪೊಲೀಸ್ರು,
ವಿಶಾಖಪಟ್ಟಣಂ ನಿಂದ ಕಾಫಿ ನಾಡಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ವಿಷಯ ತಿಳಿದ
ತಕ್ಷಣವೇ ಕಾಯಾರ್ಚರಣೆಗಿಳಿದಿದ್ದಾರೆ.
ಕಾರ್ಯಾಚರಣೆಯಲ್ಲಿ ಒಟ್ಟು ಐವರನ್ನು ಬಂಧಿಸಿದ್ದು ಇದರಲ್ಲಿ ಚಿಕ್ಕಮಗಳೂರಿನ ಇಬ್ಬರು,
ಮಂಡ್ಯ ಮೂಲದ ಓರ್ವ ವ್ಯಕ್ತಿಯನ್ನು ಸಿಇಎನ್ ಪೊಲೀಸರು ಬಂಧಿಸಿ, 120 ಕೆಜಿ ಗಾಂಜಾ
ವಶಪಡಿಸಿಕೊಂಡಿದ್ದಾರೆ. ಇನ್ನು ಆರೋಪಿಗಳು 2020 ಸೆಪ್ಟೆಂಬರ್ನಲ್ಲಿ ಗಾಂಜಾ ಕೇಸ್
ನಲ್ಲಿ ಅರೆಸ್ಟ್ ಆಗಿದ್ರು ಎನ್ನಲಾಗಿದೆ. ಪೊಲೀಸರ ಮಿಂಚಿನ ಕಾರ್ಯಾಚರಣೆಗೆ ಎಸ್ಪಿ
ಅಕ್ಷಯ ಶ್ಲಾಘಿಸಿದ್ದಾರೆ.
ಹೊರ ರಾಜ್ಯದಿಂದ ಗಾಂಜಾ ತಂದು ಮಾರಾಟ ಮಾಡುತಿದ್ದ ಐವರ ಬಂಧನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.