News Kannada
Friday, March 31 2023

ಚಿಕಮಗಳೂರು

ಬೀರೂರು ನಾಡಕಚೇರಿಯಲ್ಲಿ ಮರೀಚಿಕೆಯಾದ ಮೂಲ ಸೌಕರ್ಯ

amenities in Birur Nadaoffice
Photo Credit : News Kannada

ಬೀರೂರು: ಸರ್ಕಾರ ರೈತರು ಮತ್ತು ಸಾರ್ವಜನಿಕರಿಗಾಗಿ ಎಲ್ಲಾ ಸರ್ಕಾರಿ ಸೌಲಭ್ಯಗಳು ಒಂದೇ ಸೂರಿನಡಿ ಸಿಗಲು ನಾಡಕಚೇರಿ ಪ್ರಾರಂಭಿಸಿದೆ. ಆದರೆ ಕೂಡ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಾತ್ಸರ ಮನೋಭಾವದಿಂದ ಇಲ್ಲಿನ ಕಟ್ಟಡ ಬೀಳುವ ಹಂತ ತಲುಪಿದ್ದು, ಮೂಲಭೂತ ಸೌಕರ್ಯ ಮರೀಚಿಕೆಯಾಗಿದೆ. ಹಾಗಾಗಿ ಪ್ರತಿನಿತ್ಯ ಜನ ಸಂಕಟ ಅನುಭವಿಸುವಂತಾಗಿದೆ.

ಇದು ಬೀರೂರಿನ ರಾಷ್ಟ್ರೀಯ ಹೆದ್ದಾರಿಯ ಹೃದಯ ಭಾಗದಲ್ಲಿರುವ ನಾಡಕಚೇರಿ ದುರಂತ ಕಥೆ. ಅಂದಿನ ಬ್ರಿಟಿಷ್ ಸರ್ಕಾರ ೧೮೯೯ರಲ್ಲಿ ಮುಸಾಪುರ್ ಖಾನ್ ಯೋಜನೆಯಡಿ ಸಾರ್ವಜನಿಕರಿಗೆ ವಸತಿ ಕಲ್ಪಿಸುವ ಮಂದಿರವಾಗಿ ಈ ಕಟ್ಟಡ ನಿರ್ಮಾಣವಾಗಿತ್ತು.

ನಂತರದ ದಿನಗಳಲ್ಲಿ ಮಹಿಳಾ ಹಾಸ್ಟೆಲ್, ಪೊಲೀಸ್ ಠಾಣೆ, ಬಿಇಒ ಕಚೇರಿ, ರೈಲ್ವೆ ನಿಲಾ,ಕಂದಾಯ ಇಲಾಖೆ ನಂತರ ಸರ್ಕಾರ ಹೊಸ ಯೋಜನೆ ಆರಂಭಿಸಿದಾಗ ಅಟಲ್ ಜಿ ಜನಸ್ನೇಹಿ ಕೇಂದ್ರವೂ ಇಲ್ಲಿ ಆರಂಭ ವಾಯಿತು.

೧೮೯೯ರಲ್ಲಿ ಕಟ್ಟಿದ ಈ ಕಟ್ಟಡ ಸದ್ಯ೧೨೪ವರ್ಷ ಪೂರೈಸಿ, ಕಟ್ಟಡ ಸೋರುತ್ತದ್ದು,ಬೀಳುವ ಹಂತ ತಲುಪಿದೆ. ಅಧಿಕಾರಿಗಳು ಮತ್ತು ಸರ್ಕಾರ ಮಾತ್ರ ಇತ್ತ ಗಮನ ಕೂಡ ಹರಿಸಿಲ್ಲ. ಈ ನಾಡಕಛೇರಿಯಲ್ಲಿ ಬೀರೂರು ಹೋಬಳಿಯ ಹುಲ್ಲೇಹಳ್ಳಿ, ಬಿ.ಕೋಡಿಹಳ್ಳಿ, ಚಿಕ್ಕಿಂಗಳ, ಜೋಡಿ ತಿಮ್ಮಾಪುರ, ಎಮ್ಮೆದೊಡ್ಡಿಗೆ ಗ್ರಾಮ ಪಂಚಾಯಿತಿಗಳ ಗ್ರಾಮ ಲೆಕ್ಕಿಗ, ಕಂದಾಯ ಅಧಿಕಾರಿ, ವಿಷಯ ನಿರ್ವಾಹಕ ಕೊಠಡಿ, ಗಣಕಯಂತ್ರ ಕೊಠಡಿ ಸೇರಿದಂತೆ ಉಪತಹಸೀಲ್ದಾರ್ ಕಚೇರಿಯ ಪುಟ್ಟಕೊಠಡಿಗಳಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ಇದೆ.

ನಾಡಕಚೇರಿಯಲ್ಲಿ ಸರ್ಕಾರ ಸಾರ್ವಜನಿಕರು ಮತ್ತು ರೈತರಿಗೆ ಬೇಕಾದ ೪೮-೫೦ ಸೇವೆಗಳು ಪಿಂಚಣಿಯಿಂದ ಪಹಣಿವರೆಗೆ ಸೌಲಭ್ಯ ಪಡೆಯಲು ಪ್ರತಿನಿತ್ಯ ಅರ್ಜಿ ಸಲ್ಲಿಸಲು ಬರುತ್ತಾರೆ. ಇಲ್ಲಿಗೆ ಬರುವ ಹಿರಿಯರು, ವೃದ್ಧರು ಅರ್ಜಿ ಸಲ್ಲಿಸುವುದು ತಡವಾದರೆ ಕುಡಿಯಲು ನೀರು ಇಲ್ಲದೆ, ಶೌಚಾಲಯವೂ ಇಲ್ಲದೆ ಜನ ಬಯಲು ಶೌಚವನ್ನೆ ಆಶ್ರಹಿಸಬೇಕಾದ ಸ್ಥಿತಿ ಇದೆ.

ಹೆಣ್ಣುಮಕ್ಕಳಿಗಂತು ತೊಂದರೆ ತಪ್ಪಿದ್ದಲ್ಲ. ಕಸವನ್ನು ಎಲ್ಲೆಂದರಲ್ಲಿ ಹಾಕುವುದರಿಂದ ಸ್ವಚ್ಚ ಭಾರತಕ್ಕೆ ಅವಮಾನವಾಗುವಂತಿದೆ ಇಲ್ಲಿನ ಸ್ಥಿತಿ. ಈ ಕಚೇರಿಯಲ್ಲಿ ಸರಿಯಾದ ಕಪಾಟುಗಳಿಲ್ಲದೆ ಕಡತಗಳು ನೆಲದ ಮೇಲೆಯೆ ಧೂಳು ಹಿಡಿದು ಬಿದ್ದಿವೆ.

ಒಟ್ಟಾರೆ ಏನಾದರೂ ಆಗಲಿ ಪ್ರತಿನಿತ್ಯ ಅತ್ಯವಶ್ಯಕ ದಾಖಲೆ ಮತ್ತು ಸರ್ಕಾರಿ ಕಡತ ಹಾಗೂ ಅರ್ಜಿ ಸಲ್ಲಿಕೆ ಮಾಡುವವ ಕಚೇರಿಗಳಿಗೆ ಉತ್ತಮ ಸುಸಜ್ಜಿತ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡಿದಾಗ ಮಾತ್ರ ಸಾರ್ವಜನಿಕರಿಗೆ ಉಪಯೋಗವಾಗಲಿದೆ ಎನ್ನುತ್ತಾರೆ ನಾಗರೀಕರು. ಜಿಲ್ಲಾಧಿಕಾರಿಗಳು ಕೂಡಲೇ ಈ ಸಮಸ್ಯೆ ಬಗ್ಗೆ ಬಗೆಹರಿಸುವಿರಾ ಎನ್ನುವುದನ್ನು ಕಾದು ನೋಡಬೇಕಿದೆ.

See also  ಚಿಕ್ಕಮಗಳೂರು: ರಾಜ್ಯ ಸರ್ಕಾರ ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ- ಡಿ.ಕೆ.ಶಿವಕುಮಾರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು