News Kannada
Saturday, March 25 2023

ಚಿಕಮಗಳೂರು

ಚಿಕ್ಕಮಗಳೂರು: ಬಂಡಿಹಳ್ಳಿ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಶಾಸಕ ಶಂಕುಸ್ಥಾಪನೆ

Foundation stone laid for bandihalli concrete road
Photo Credit : News Kannada

ಚಿಕ್ಕಮಗಳೂರು: ಚಿಕ್ಕಮಗಳೂರು ಬದಲಾಗುತ್ತಿದೆ ನೀವೂ  ನಮ್ಮ ಬೆಂಬಲಕ್ಕೆ ನಿಂತಲ್ತುಲಿ  ಕೆಲಸ ಮಾಡುವ ಹುಮ್ಮಸ್ಸು ಬರುತ್ತದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ಅವರು ನಗರ ಹೊರ ವಲಯದ ಬಂಡಿಹಳ್ಳಿಯಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದರು.

ಕಾಂಕ್ರಿಟ್ ರಸ್ತೆ ಬೇಕೆಂಬುದು ಬಂಡಿಹಳ್ಳಿ ಗ್ರಾಮದ ಬಹುದಿನಗಳ ಬೇಡಿಕೆ ಆಗಿತ್ತು. ಈಗ ೧೦ ಲಕ್ಷ ರೂ. ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ಬಂಡಿಹಳ್ಳಿ-ಕುರುವಂಗಿ ಸಂಪರ್ಕ ರಸ್ತೆಗೂ ೫೦ ಲಕ್ಷ ರೂ.ಗಳನ್ನು ಮಂಜೂರು ಮಾಡಿಸಿದ್ದೇನೆ ಎಂದು ಹೇಳಿದರು.

ಸಮುದಾಯ ಭವನ ಬೇಕೆಂದು ಗ್ರಾಮಸ್ಥರು ಕೇಳಿದ್ದೀರಿ ಇದಕ್ಕೆ ಮೊದಲ ಕಂತಾಗಿ ೧೦ ಲಕ್ಷ ರೂ. ಅನುದಾನ ನೀಡುತ್ತೇವೆ. ಮುಂದುವರಿದ ಕಾಮಗಾರಿಗೆ ಮತ್ತೆ ಹಣ ಬಿಡುಗಡೆಗೊಳಿಸುತ್ತೇವೆ ಎಂದರು. ನೀವೂ ರೀತಿ ನಮ್ಮನ್ನು ನಂಬಿ ದ್ದೇವೆ ಎನ್ನುವ ಮನಸ್ಥಿತಿ ಇಟ್ಟುಕೊಳ್ಳಬೇಕು. ಯಾರೋ ಕುಣಿಸಿದರೆಂದು ನೀವೂ ಕುಣಿದರೆ ನಮಗೆ ಬೇಜಾರಾಗುತ್ತದೆ. ಇದೇ ಮಾತನ್ನ ನಮ್ಮ ಪಕ್ಕದ ಕನ್ನೇನಹಳ್ಳಿಗೆ ಹೇಳುವುದಿಲ್ಲ ಎಂದರು.

ಎಲ್ಲರೂ ಹಾಗೇ ಇರುತ್ತಾರೆ ಎಂದು ಹೇಳುವುದಿಲ್ಲ. ಯಾರೋ ಕೆಲವರು ಮಾಡುವ ಕೆಲಸಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದರು. ನಾವೆಲ್ಲಾ ಹಿಂದುತ್ವ, ದೇಶ ಎಂಬ ಸಿದ್ಧಾಂತಕ್ಕಾಗಿ ರಾಜಕಾರಣ ಮಾಡುತ್ತೇವೆ. ಜಾತಿ ನಮ್ಮ ಸಿದ್ಧಾಂತವಲ್ಲ. ಅಭಿವೃದ್ಧಿ ನಮ್ಮ ಸಿದ್ಧಾಂತ. ನಾವು ಹೋರಾಟ ಮಾಡಿದ ಕಾರಣಕ್ಕೆ ೬೩೦ ಕೋಟಿ ರೂ.ನ ಮೆಡಿಕಲ್ ಕಾಲೇಜು ಬರಲು ಸಾಧ್ಯವಾಗಿದೆ ಎಂದರು.

ಇದೇ ವೇಳೆ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಿ, ಗ್ರಾಮಕ್ಕೆ ಸಮುದಾಯ ಭವನ ನಿರ್ಮಾಣವಾಗಬೇಕು, ಬೊಮ್ಮನ ಕಟ್ಟೆ ಹೊಡೆದು ಅಕ್ಕಪಕ್ಕದ ಜಮೀನಿಗೆ ನೀರು ನುಗ್ಗಿ ರೈತರಿಗೆ ನಷ್ಟವಾಗುತ್ತಿರುವುದರಿಂದ ನಾಲೆ ನಿರ್ಮಿಸಬೇಕು. ಗ್ರಾಮಕ್ಕೆ ಸಿಮೆಂಟ್ ರಸ್ತೆ, ನಗರ ಸಾರಿಗೆ ಬಸ್ಸು ಸೌಲಭ್ಯ ಕಲ್ಪಿಸಬೇಕು ಎಂದು ಕೋರಿದರು.

ಜಿ.ಪಂ.ಮಾಜಿ ಸದಸ್ಯ ಬೀಕನಹಳ್ಳಿ ಸೋಮಶೇಖರ್ ಸ್ವಾಗತಿಸಿದರು. ಮುಖಂಡರು ಗಳಾದ ಕೋಟೆ ರಂಗನಾಥ್, ತಾ.ಪಂ.ಮಾಜಿ ಅಧ್ಯಕ್ಷ ನೆಟ್ಟೆಕರೆಹಳ್ಳಿ ಜಯಣ್ಣ, ಕನಕರಾಜ್ ಅರಸ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಯತೀಶ್, ಸದಸ್ಯ ಪುಟ್ಟಸ್ವಾಮಿ ಶೆಟ್ಟಿ, ಇತರರು ಇದ್ದರು.

See also  ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಿಷ್ಟಾವಂತರು: ಸಿ.ಟಿ.ರವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು