News Kannada
Thursday, March 30 2023

ಚಿಕಮಗಳೂರು

ಚಿಕ್ಕಮಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Chikkamagaluru: Protest demanding fulfilment of various demands
Photo Credit : News Kannada

ಚಿಕ್ಕಮಗಳೂರು: ಉದ್ಯೋಗ ಭದ್ರತೆ, ಮಾಸಿಕ ಪಿಂಚಣಿ, ಪಿಎಫ್, ಇಎಸ್‌ಐ ಸೌಲಭ್ಯ, ವಾರ್ಷಿಕ ರಜೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ಕಾರ್ಯ ಕರ್ತರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.

ಎಐಟಿಯುಸಿ ನೇತೃತ್ವದಲ್ಲಿ ನಗರದ ಹನುಮಂತಪ್ಪ ವೃತ್ತದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ನೂರಾರು ಬಿಸಿಯೂಟ ಕಾರ್ಯಕರ್ತರು ಎಂಜಿ ರಸ್ತೆ ಮೂಲಕ ಆಜಾದ್ ಪಾರ್ಕ್ ತಲುಪಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರು ಮಾತನಾಡಿ, ರಾಜ್ಯದ ೧.೨೦ ಲಕ್ಷ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಿ ಬಡಿಸುತ್ತಿರುವ ಕಾರ್ಯಕರ್ತರನ್ನು ಕಳೆದ ೨೦ ವರ್ಷದಿಂದ ಯಾವುದೇ ಉದ್ಯೋಗ ಭದ್ರತೆ ನೀಡದೆ ಸರಕಾರ ದುಡಿಸಿಕೊಳ್ಳುತ್ತಿದೆ ಎಂದು ದೂರಿದರು.

೬೦ ವರ್ಷ ತುಂಬಿದ ಕಾರ್ಯಕರ್ತರನ್ನು ಏಕಾಏಕಿ ನಿವೃತ್ತಿ ನೆಪ ಹೇಳಿ ಹೊರದಬ್ಬಲಾಗುತ್ತಿದೆ. ಮಾಸಿಕ ಪಿಂಚಣಿ ಇಲ್ಲ, ವೈದ್ಯಕೀಯ ಸೌಲಭ್ಯಗಳಿಲ್ಲ, ಪಿಎಫ್, ಇಎಸ್‌ಐ ಹೀಗೇ ಯಾವುದೇ ಸೌಲಭ್ಯಗಳಿಲ್ಲದ ಅವರು ವೃದ್ಧಾಪ್ಯದಲ್ಲಿ ಬೀದಿಗೆ ಬೀಳುವಂತಾಗಿದೆ ಎಂದರು.

೬೦ ವರ್ಷ ತುಂಬಿದ ಕಾರ್ಯಕರ್ತರಿಗೆ ನಿವೃತ್ತಿ ಉಪಧನ ನೀಡಿ ಪಿಂಚಣಿ ನೀಡಬೇಕು. ಇಎಸ್‌ಐ ವ್ಯಾಪ್ತಿಗೆ ತರಬೇಕು, ಪಿಎಫ್ ಜಾರಿಗೆ ತರಬೇಕು. ಕನಿಷ್ಠ ವೇತನದಡಿ ಅವರನ್ನು ತರಬೇಕು. ಮಾಸಿಕ ೩ ರಜೆ ನೀಡಬೇಕು. ಉದ್ಯೋಗ ಭದ್ರತೆ, ವಿಮೆ ಯೋಜನೆ, ತಮಿಳುನಾಡು ಮಾದರಿಯಲ್ಲಿ ವೇತನ ಶ್ರೇಣಿ ನಿಗಧಿ ಪಡಿಸಬೇಕು ಎಂದು ಆಗ್ರಹಿಸಿದರು.

ಎಐಟಿಯುಸಿ ಅಧ್ಯಕ್ಷ ಜಿ.ರಘು ಮಾತನಾಡಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಧಿಕಾರ ಪಡೆದಿದ್ದು, ಬಿಸಿ ಯೂಟ ಕಾರ್ಯಕರ್ತರಿಗೆ ಸೌಲಭ್ಯ ಕಲ್ಪಿಸಿಕೊಡುವಲ್ಲಿ ವಿಫಲವಾಗಿವೆ. ಆಡಳಿತ ಪಕ್ಷ ಉತ್ಸವಗಳ ಹೆಸರಿನಲ್ಲಿ ಕೋಟ್ಯಂತರ ರೂ. ವ್ಯಯ ಮಾಡುತ್ತಿದ್ದು, ಇದನ್ನು ಪ್ರಶ್ನಿಸಬೇಕಾದ ಪ್ರತಿ ಪಕ್ಷಗಳು ಸತ್ತು ಹೋಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನ ಕಾರ್ಯದರ್ಶಿ ಎಸ್.ವಿಜಯಕುಮಾರ್ ಮಾತನಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ ನೀಡುವ ವೇತನದಲ್ಲಿ ಕೇಂದ್ರ ಸರಕಾರ ಶೇ.೬೦ರಷ್ಟು, ರಾಜ್ಯ ಸರಕಾರ ಶೇ.೪೦ರಷ್ಟು ಅನುದಾನ ನೀಡಬೇಕಿದೆ. ಆದರೆ, ಕೇಂದ್ರ ಸರಕಾರ ತನ್ನ ಪಾಲಿನ ಶೇ.೬೦ರಷ್ಟು ಅನುದಾನವನ್ನು ೧೦ವರ್ಷದಿಂದ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಫೆಡರೇಶನ್ ತಾಲೂಕು ಅಧ್ಯಕ್ಷೆ ಇಂಧುಮತಿ, ಕಡೂರು ಪುಷ್ಪ ಆಯಾ ತಾಲೂಕಿನ ಅಧ್ಯಕ್ಷರು ಉಪಸ್ಥಿತರಿದ್ದರು.

See also  ಹೊಸದಿಲ್ಲಿ: ದಟ್ಟ ಹೊಗೆ ಹೊದಿಕೆಯಡಿಯಲ್ಲಿ ದೆಹಲಿ ತತ್ತರಿಸುತ್ತಿದೆ,'ತೀವ್ರವಾಗಿದೆ' ಗಾಳಿಯ ಗುಣಮಟ್ಟ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು