News Kannada
Wednesday, March 29 2023

ಚಿಕಮಗಳೂರು

ಚಿಕ್ಕಮಗಳೂರು: ಭಾರತ ಯುವಶಕ್ತಿಯನ್ನು ಹೊಂದಿರುವ ದೇಶ – ಸಿ.ಟಿ.ರವಿ

India is a country with a youth power: C.T. Ravi
Photo Credit : News Kannada

ಚಿಕ್ಕಮಗಳೂರು: ಭಾರತ ಯುವಶಕ್ತಿಯನ್ನು ಹೊಂದಿರುವ ದೇಶವಾಗಿದ್ದು, ಎಲ್ಲರೂ ಕೌಶಲ್ಯಧಾರಿತರಾದರೇ, ಭಾರತದ ಅಭಿವೃದ್ಧಿಯ ನಾಗಾಲೋಟವನ್ನು ಹಿಡಿದು ನಿಲ್ಲಿಸುವ ಸಾಮರ್ಥ್ಯ ಯಾವ ದೇಶಕ್ಕೂ ಇಲ ವಾಗಲಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ನಗರದ ಐಡಿಎಸ್‌ಜಿ ಕಾಲೇಜು ಆವರಣದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೇಶ ಕೌಶಲ್ಯಾಧಾರಿತವಾಗಿತ್ತು. ಆದರೆ, ಪ್ರತೀ ವೃತ್ತಿಗೆ ಗೌರವದ ಕೊರತೆ ಇತ್ತು. ವೃತ್ತಿ ಯಲ್ಲೂ ಶ್ರೇಷ್ಠ ಮತ್ತು ಕನಿಷ್ಟ ಎಂಬ ಭಾವತೆ ಇತ್ತು. ಇದನ್ನು ದೂರಮಾಡಿ ಕಾಯಕವೇ ಕೈಲಾಸ ಎಂಬಂತೆ ಎಲ್ಲಾ ವೃತ್ತಿಗೂ ಸಾಮಾಜಿಕ ಗೌರವ ತಂದುಕೊಟ್ಟಿದ್ದರೇ, ಆರ್ಥಿಕ ಭರ ವಸೆ ಮೂಡಿಸಿದ್ದರೇ ಕೌಶಲ್ಯ ತರಬೇತಿ ನೀಡುವ ಅವಶ್ಯಕತೆ ಇರುತ್ತಿರಲಿಲ್ಲ ಎಂದು ಅಭಿ ಪ್ರಾಯಿಸಿದರು.

ಮೂಲ ವೃತ್ತಿದಾತರು ವೃತ್ತಿ ಗೌರವವಿಲ್ಲದ ಕಾರಣದಿಂದ ತಮ್ಮ ಮಕ್ಕಳು ಆ ವೃತ್ತಿಯನ್ನು ಮುಂದೂವರೆಸಬೇಕೆಂದು ಭಯಸುವುದಿಲ್ಲ. ಮೂಲ ವೃತ್ತಿಯಿಂದ ವಿಮುಖರಾಗುತ್ತಿದ್ದಾರೆ ಎಂದ ಅವರು ಎಲ್ಲಾ ವೃತ್ತಿಗಳಿಗೂ ಸಾಮಾಜಿಕ ಗೌರವ ಮತ್ತು ಆರ್ಥಿಕ ಬಲ ತುಂಬಿದ್ದರೇ ಪ್ರತಿಯೊಬ್ಬರಿಗೂ ಸಹಜ ಉದ್ಯೋಗ ದೊರೆಯುತ್ತಿತ್ತು ಎಂದರು.

ಇಂದು ಜಾಗತಿಕವಾಗಿ ಮತ್ತು ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಸರ್ಕಾರಿ ಉದ್ಯೋಗ ವ್ಯಮೋಹ ಹೆಚ್ಚುತ್ತಿದ್ದು ಎಲ್ಲರಿಗೂ ಸರ್ಕಾರಿ ಉದ್ಯೋಗ ನೀಡಲು ಸಾಧ್ಯವಿಲ್ಲ, ಹಾಗಾದರೇ ಬದುಕಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ ಅವರು, ವಿಶ್ವಾಸದಿಂದ ಬದುಕು ವಂತೆ ಮಾಡುವುದೇ ಕೌಶಲ್ಯಾಭಿವೃದ್ಧಿ ತರಬೇತಿಯಾಗಿದೆ ಎಂದರು.

ತರಬೇತಿ ಪಡೆದುಕೊಂಡವರಲ್ಲಿ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ. ಕೌಶಲ್ಯದ ಉದ್ಯೋಗಗಳಿಂ ದ ಎಲ್ಲಿಬೇಕಾದರೂ ಬದುಕಬಹುದು, ಆದರೆ, ಮಾನಸಿಕವಾಗಿ ತಯಾರಿಯಾಗಬೇಕು ಎಂದ ಅವರು ಎಲ್ಲಾ ಉದ್ಯೋಗಗಳು ಗೌರವದ ಉದ್ಯೋಗಗಳೇ ಎಂಬ ಭಾವನೆ ತುಂಬಬೇಕು ಎಂದರು.

ಭಾರತ ಯುವಶಕ್ತಿಯನ್ನು ಹೊಂದಿರುವ ದೇಶವಾಗಿದ್ದು, ಎಲ್ಲರೂ ಕೌಶಲ್ಯಧಾರಿತರಾದರೇ, ಭಾರತವನ್ನು ಹಿಡಿದು ನಿಲ್ಲಿಸುವ ಸಾಮರ್ಥ್ಯ ಯಾವ ದೇಶಕ್ಕೂ ಇಲ್ಲ. ದೊಡ್ಡ ಕನಸ್ಸು ಕಾಣಿ ಆ ಕಡೆಗೆ ಹೆಜ್ಜೆ ಹಾಕಿ ಎಂದ ಅವರು ಉದ್ಯೋಗಕ್ಕೆ ಅರ್ಜಿ ಹಾಕುವ ಬದಲು ಅನುಭವ ಪ ಡೆದು ಇನ್ನೊಬ್ಬರಿಗೆ ಉದ್ಯೋಗ ನೀಡಿ ಎಂದು ತಿಳಿಸಿದರು.

ಐಡಿಎಸ್‌ಜಿ ಕಾಲೇಜು ಪ್ರಾಂಶುಪಾಲ ರಮೇಶ್ ಮಾತನಾಡಿ, ದೇಶದಲ್ಲಿ ಯುವ ಜನತೆ ಸಂಖ್ಯೆ ಹೆಚ್ಚಿದ್ದು, ಯುವ ಜನತೆ ಸದೃಢರಾಗಿ ಅವರು ತಮ್ಮ ಕಾಲಮೇಲೆ ತಾವು ನಿಂತಾಗ ದೇಶ ಸದೃಢವಾಗುತ್ತದೆ ಎಂದರು. ಉದ್ಯೋಗ ಮೇಳದಲ್ಲಿ ೩,೫೦೦ ಉದ್ಯೋಗ ವಕಾಶಗಳು ಇದ್ದು, ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದ ಅವರು, ಉದ್ಯೋಗಮೇಳಗಳು ನಡೆಯುತ್ತಿರಬೇ ಕು. ಆಗ ವಿದ್ಯಾರ್ಥಿಗಳಲ್ಲಿ ವಿಶ್ವಾಸ ಮೂಡಿಸುತ್ತದೆ ಎಂದು ಅಭಿಪ್ರಾಯಿಸಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ರಾಜೇಶ್, ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ಪ್ರಶಾಂತ್ ಹಾಗೂ ಐಡಿಎಸ್‌ಜಿ ಕಾಲೇಜು ಸಿಬ್ಬಂದಿಗಳು ಹಾಗೂ ಉದ್ಯೋಗ ಆಕಾಂಕ್ಷಿಗಳು ಇದ್ದರು.

See also  ಬೆಂಗಳೂರು: ಭಾರೀ ಜನಸಮೂಹವನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ ಪೊಲೀಸರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು