News Kannada
Friday, March 31 2023

ಚಿಕಮಗಳೂರು

ಚಿಕ್ಕಮಗಳೂರು: ಜಾತಿ ನೋಡಿ ಕೆಲಸ ಮಾಡುವವನು ನಾನಲ್ಲ – ಶಾಸಕ ಸಿ.ಟಿ.ರವಿ

I am not someone who works on the basis of caste: MLA CT Ravi
Photo Credit : News Kannada

ಚಿಕ್ಕಮಗಳೂರು: ಜಾತಿ ನೋಡಿ ಕೆಲಸ ಮಾಡುವವನು ನಾನಲ್ಲ. ಪಕ್ಷ ಬೇಧ, ಹಾಗೂ ಜಾತಿ ಬೇದವಾಗಿ ಅಭಿವೃದ್ಧಿ ಕೆಲಸ ಮಾಡಿದವರಿಗೆ ಮತದಾರರು ಮನ್ನಣೆ ನೀಡಬೇಕೆಂದು ಶಾಸಕ ಸಿ.ಟಿ.ರವಿ ಮನವಿ ಮಾಡಿದರು.

ಅವರು ಟಿಪ್ಪು ನಗರದ ವಾರ್ಡ್‌ಗೆ ೯೦ ಲಕ್ಷ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ ಚಿಕ್ಕಮಗಳೂರು ನಗರದ ಅಭಿವೃದ್ಧಿಗಾಗಿ ೭೦ ಕೋಟಿ ವಿಶೇಷ ಅನುದಾನವನ್ನು ತಂದು ನಗರದ ಎಲ್ಲಾ ವಾರ್ಡ್‌ಗಳಲ್ಲಿಯೂ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದ್ದು, ತೇಗೂರು ರಸ್ತೆಬಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ೬೩೦ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಮೊದಲನೇ ಕಾಮಗಾರಿಯ ಉದ್ಘಾಟನೆಯನ್ನು ಮೇ ತಿಂಗಳಿನಲ್ಲಿ ನೆರೆವೇರಿಸಲಾಗುವುದು, ಕಡೂರು, ಚಿಕ್ಕಮಗಳೂರು ರಸ್ತೆ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ಚಿಕ್ಕಮಗಳೂರು, ಬೇಲೂರು, ಹಾಸನ ಚತುಸ್ಪದ ರಸ್ತೆ ಕಾಮಗಾರಿ ಟೆಂಡರ್ ಪ್ರಕ್ರಿಯೇ ಪ್ರಾರಂಭವಾಗಿದೆ . ಚಿಕ್ಕಮಗಳೂರಿನಿಂದ ಹಾಸನ ರೈಲ್ವೆ ಯೋಜನೆ ಕಾಮಗಾರಿ ಪ್ರಾರಂಭದ ಹಂತದಲ್ಲಿದೆ ಎಂದರು.

ಮೂರು ಹೆಲಿಕ್ಯಾಫ್ಟರ್‌ಗಳು ಏಕ ಕಾಲದಲ್ಲಿ ನಿಲ್ದಾಣವಾಗುವ ೭೫ ಕೋಟಿ ರೂ ವೆಚ್ಚದಲ್ಲಿ ಲಘು ವಿಮಾನ ನಿಲ್ದಾಣ ಜಿಲ್ಲೆಗೆ ಮಂಜೂರು ಮಾಡಲಾಗಿದೆ, ನೂತನ ವಿಶ್ವ ವಿದ್ಯಾಲಯ ಮತ್ತು ಟೆಕ್ಸ್ ಟೈಲ್ ಪಾರ್ಕ್ ನಿಮಾಣ ಮಾಡಲಾ ಗುವುದು ಇದರಿಂದ ಜಿಲ್ಲೆಯ ಅನೇಕ ಜನರಿಗೆ ಉದ್ಯೋಗ ಸಿಗುತ್ತದೆ, ಸ್ಲಮ್ ಬೋರ್ಡ್‌ನಿಂದ ಈಗಾಗಲೆ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ ಅಭಿವೃದ್ಧಿಯಲ್ಲಿ ಮುನ್ನಡೆಯನ್ನು ಸಾಧಿಸಿರುವ ಶಾಸಕ ಸಿ.ಟಿ.ರವಿ ರವರು ಮುಂದಿನ ಮುಖ್ಯ ಮಂತ್ರಿಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಇದ್ದಾರೆ, ಯಾವುದೇ ಬೇಧ-ಭಾವ ತೊರದೆ ನಗರದ ೩೫ ವಾರ್ಡ್‌ಗಳಿಗು ವಿವಿಧ ಕಾಮಗಾರಿಗಳಿಗೆ ಅನುದಾನವನ್ನು ನೀಡಿದ್ದಾರೆ, ಟಿಪ್ಪು ನಗರದ ವಾರ್ಡ್‌ಗಳಿಗೆ ೯೦ ಲಕ್ಷ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಇಂದು ಚಾಲನೆಯನ್ನು ನೀಡಲಾಗಿದೆ, ಸಾರ್ವಜನಿಕರಿಗೆ ಅನುಕೂಲ ಆಗುವಂತೆ ನಗರದ ೪ ಮುಖ್ಯ ರಸ್ತೆಗಳಾದ ರಾಮನಹಳ್ಳಿ, ಕಡೂರು, ಬೇಲೂರು ಮತ್ತು ಮೂಗ್ತಿಹಳ್ಳಿ ರಸ್ತೆ ನಾಲ್ಕು ಪಥದ ರಸ್ತೆಯನ್ನಾಗಿಸಿ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ವೆಂಕಟೇಶ್, ನಗರಸಭೆ ಸದಸ್ಯರಾದ ಜಾವಿದ್, ಸುಜಾತಶಿವಕುಮಾರ್, ಮಾಜಿ ಅಧ್ಯಕ್ಷ ಮುತ್ತಯ್ಯ, ನರಸಿಂಹ, ಉಪಾಧ್ಯಕ್ಷ ಅಬ್ಸರ್ ಅಹಮದ್, ಶಂಕರ್ ಮತ್ತಿತರರು ಹಾಜರಿದ್ದರು.

See also  ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ ವರ್ಷದ ಮೊದಲ ವರ್ಷಧಾರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು