News Kannada
Friday, June 09 2023
ಚಿಕಮಗಳೂರು

ಚಿಕ್ಕಮಗಳೂರು: ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು

Emphasis on holistic development of villages
Photo Credit : News Kannada

ಚಿಕ್ಕಮಗಳೂರು: ಅಭಿವೃದ್ಧಿ ವಿಷಯದಲ್ಲಿ ನಾನು ಯಾವತ್ತೂ ಹಿಂದೆ ಬಿದ್ದಿಲ್ಲ, ಯಾವ ಊರಲ್ಲೂ ಜನ ಬೆಟ್ಟು ಮಾಡಿ ತೋರಿಸದ ಹಾಗೆ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ತಾಲೂಕಿನ ಉಂಡಾಡಿಹಳ್ಳಿಯಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಅಗ್ನಿ ಬನ್ನಿ ರಾಯಸ್ವಾಮಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉಂಡಾಡಿಹಳ್ಳಿ ಗ್ರಾಮಸ್ಥರ ನನ್ನ ಸಂಬಂಧಇಂದು ನಿನ್ನೆಯದಲ್ಲ, ಅದು ಅವಿನಾಭಾವ ಸಂಬಂಧ.ಅದನ್ನು ಯಾರೂ ಮುರಿಯಲು ಸಾಧ್ಯವಿಲ್ಲ. ನನ್ನ ಕಾಲೇಜು ದಿನಗಳಿಂದಲೂ ಬೆಸೆದ ಈ ಸಂಬಂಧ ಇನ್ನೂ ಗಟ್ಟಿಯಾಗೇ ಉಳಿದಿದೆ ಎಂದರು.
ಉಂಡಾಡಿಹಳ್ಳಿಯ ಗ್ರಾಮ ಠಾಣಾ ವಿಷಯದಲ್ಲಿ ಯಾರಿಗೂ ಅನ್ಯಾಯವಾಗಲು ನಾನು ಬಿಡುವುದಿಲ್ಲ, ಹಾಗಾಗಿ ಆ ವಿಷಯದಲ್ಲಿ ಯಾರೂ ಹೆದರಬೇಕಾಗಿಲ್ಲ. ಉಂಡಾಡಿಹಳ್ಳಿಯ ಜನ ಏನು ಕೇಳಿದರು ಆಗಲ್ಲ ಅಥವಾ ಇಲ್ಲ ಎನ್ನದೆ ಅವರು ಕೇಳಿದ್ದನ್ನೆಲ್ಲ ಮಾಡಿಕೊಟ್ಟಿದ್ದೇನೆ ಎಂದು ತಿಳಿಸಿದರು.
ಗ್ರಾಮದಲ್ಲಿ ಹೊಸ ಸಮುದಾಯ ಭವನದ ನಿರ್ಮಾಣಕ್ಕೆ ಈಗಾಗಲೇ ೩೦ ಲಕ್ಷರೂ.ಅನುದಾನ ಬಿಡುಗಡೆ ಮಾಡಿದ್ದೇನೆ,ಇನ್ನೂ ಐವತ್ತು ಲಕ್ಷ ಬೇಕಾದರೂ ಕೊಡುತ್ತೇನೆ. ಜನ ಮೆಚ್ಚುವಂತೆ ಸುಸಜ್ಜಿತವಾಗಿ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು. ಕಳೆದ ತಮ್ಮ ೫ ವರ್ಷದಅವಧಿಯಲ್ಲಿ ಬೀಕನಹಳ್ಳಿ ಗ್ರಾಮ ಪಂಚಾಯಿತಿಒಂದಕ್ಕೇ ೨೪ ಕೋಟಿ ೯೮ ಲಕ್ಷರೂ.ಅನುದಾನವನ್ನು ನೀಡಿದ್ದೇನೆಎಂದು ತಿಳಿಸಿದರು.

ಹಿಂಡಿಯನ್ನು ದುಡಿಯುವ ಎತ್ತಿಗೆ ಜಾಸ್ತಿ ಹಾಕಬೇಕು.ಕಳ್ಳ ಎತ್ತಿಗೆ ಹಾಕಿದರೆ ಉಪಯೋಗವಿಲ್ಲ. ದುಡಿಯುವ ಎತ್ತಿಗೆ ಹಾಕಿದರೆ ಅದು ಇನ್ನಷ್ಟು ಹೆಚ್ಚು ಕೆಲಸ ಮಾಡುತ್ತದೆ. ಅದೇರೀತಿ ಕೆಲಸ ಮಾಡುವವರಿಗೇ ಓಟು ಹಾಕಬೇಕು ಎಂದು ಕಿವಿ ಮಾತು ಹೇಳಿದರು.

ಬಾಚಿಕೊಂಡು ತಿನ್ನುವವರಿಗೆ ಮತಕೊಟ್ಟರೆ, ಊರಿಗೆಕೆಟ್ಟ ಹೆಸರು ಬರುತ್ತದೆ. ನಾನು ಕಳ್ಳೆತ್ತೋ ಅಥವಾ ದುಡಿಯುವ ಎತ್ತೋ ಎಂದು ನೀವು ತುಂಬಾ ವರ್ಷ ದಿಂದ ನೋಡಿದ್ದೀರಿ ಹಾಗಾಗಿ ಮತ್ತೆ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದಜಯಬಸವ ತಪೋ ವನ ವಿಶ್ವಧರ್ಮ ಪೀಠದ ಶ್ರೀ ಜಯ ಬಸ ನಂದ ಸ್ವಾಮೀಜಿ, ನವ ಚಿಕ್ಕಮಗಳೂರಿನ ನಿರ್ಮಾತೃ ಸಿ.ಟಿ.ರವಿ ಎಂದರೆ ತಪ್ಪಾಗ ಲಾರದು, ಅವರು ಮತ್ತೆ ಆಯ್ಕೆಯಾಗಬೇಕು ಎಂದು ಸಲಹೆ ಮಾಡಿದರು.

ಉಂಡಾಡಿಹಳ್ಳಿಯಿಂದ ತಮ್ಮ ಮಠಕ್ಕೆ ತೆರಳುವ ರಸ್ತೆಯ ಅಭಿವೃದ್ಧಿಗೆ ಅನುದಾನ ನೀಡಿದ ಹಿನ್ನೆಲೆಯಲ್ಲಿ ಶಾಸಕರಿಗೆ ಧನ್ಯವಾದ ಅರ್ಪಿಸಿದರು.
ಜಿ.ಪಂ. ಮಾಜಿಉಪಾಧ್ಯಕ್ಷ ಸೋಮಶೇಖರ್, ಸಿಡಿಎ ಮಾಜಿ ಅಧ್ಯಕ್ಷ ರಂಗನಾಥ್, ಗ್ರಾ.ಪಂ. ಮಾಜಿಅಧ್ಯಕ್ಷೆ ಭಾಗೀರತಿ ಜಯಣ್ಣ, ನಾಗರಾಜ್, ಗ್ರಾಮದ ಗೌಡರಾದ ತಿಮ್ಮೇಗೌಡ, ಗೌರೇಗೌಡ ಉಪಸ್ಥಿತರಿದ್ದರು.

ಸಮಾರಂಭದ ನಂತರ ಶ್ರೀಅಗ್ನಿ ಬನ್ನಿರಾಯ ಸ್ವಾಮಿಯ ಉತ್ಸವ ಗ್ರಾಮದಲ್ಲಿ ನಡೆಯಿತು.

See also  ಚುರ್ಚೆಗುಡ್ಡದಲ್ಲಿ ಕಾಡ್ಗಿಚ್ಚು: ಬೆಂಕಿ ಆರಿಸಲು ನಿರಂತರ ಕಾರ್ಯಾಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು