News Kannada
Wednesday, May 31 2023
ಚಿಕಮಗಳೂರು

ಗ್ರಾಮಕ್ಕೆ ಇದುವರೆಗೂ ಭೇಟಿ ನೀಡದ ರಾಷ್ಟ್ರೀಯ ಪಕ್ಷಗಳ ಪ್ರತಿನಿಧಿಗಳಿಗೆ ಚುನಾವಣೆಯಲ್ಲಿ ತಕ್ಕ ಉತ್ತರ!

Bengaluru: Win the best picture prize in the polls
Photo Credit : News Kannada

ಚಿಕ್ಕಮಗಳೂರು: ಚುನಾವಣೆ ದಿನಾಂಕ ನಿಗದಿಯಾದ ದಿನದಿಂದಲೂ ಗ್ರಾಮಕ್ಕೆ ಇದುವರೆಗೂ ಭೇಟಿ ನೀಡಲು ಯಾವುದೇ ರಾಜಕೀಯ ಪಕ್ಷದ ನಾಯಕರೂ ಬಂದಿಲ್ಲ ಎಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಂಡುಗುಳಿ ಗ್ರಾಮಸ್ಥರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಪ್ರತಿಷ್ಠಿತ ಕಣವಾದ ಜೋಗಣ್ಣನಕೆರೆ ಕ್ಷೇತ್ರದ ಯಾವುದೇ ಭಾಗಕ್ಕೂ ಇದುವರೆಗೂ ಯಾವುದೇ ಪಕ್ಷದ ನಾಯಕರು ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಗ್ರಾಮದಲ್ಲಿ ಚುನಾವಣೆ ನಿಗದಿಯಾದ ದಿನದಿಂದಲೂ ಯಾವೊಬ್ಬ ಯಾವುದೇ ಪಕ್ಷದ ರಾಜಕೀಯ ಮುಖಂಡರು ಗ್ರಾಮಕ್ಕೆ ಬಂದು ಗ್ರಾಮದ ಸಮಸ್ಯೆ, ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿಲ್ಲ ನಮ್ಮ ಗ್ರಾಮವನ್ನು ಬಿಟ್ಟು ಎಲ್ಲಾ ಕಡೆ ವಿವಿಧ ಪಕ್ಷದ ಮುಖಂಡರು ಸಂಚರಿಸಿ ಗ್ರಾಮದ ಕುಂದು ಕೊರತೆ  ಆಲಿಸುತ್ತಾ ಬರುತ್ತಿದ್ದು ಅಲ್ಲದೆ ವಿವಿಧ ಪಕ್ಷದ ನಾಯಕರು ನಾವೇನಾದರೂ ಈ ಬಾರಿ ಶಾಸಕರಾದರೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡುತ್ತಿದ್ದಾರೆ.

ನಮ್ಮ ಗ್ರಾಮದ ಬಳಿ ಯಾವುದೇ ರಾಜಕೀಯ ನಾಯಕರು ಕೂಡ ಬಂದು ಮುಕ್ತವಾಗಿ ಗ್ರಾಮಸ್ಥರ ಬಳಿ ಬೆರೆತಿಲ್ಲ. ನಾವು ಯಾವುದೇ   ತಮ್ಮ ಮತವನ್ನು ಯಾವುದೇ ನಿಗದಿತ ಪಕ್ಷಕ್ಕೆ ಸೀಮಿತಗೊಳಿಸಿಲ್ಲ. ನಮ್ಮ ಗ್ರಾಮದ ಕಷ್ಟಗಳಿಗೆ ಸ್ಪಂದಿಸಲು ಬರದಂತಹ ಯಾವು ದೇ ರಾಷ್ಟ್ರೀಯ ಪಕ್ಷಗಳಿಗೆ ನಮ್ಮ ಮತವನ್ನು ಕೊಡುವುದಿಲ್ಲ. ಬದಲಾಗಿ ಇಲ್ಲಿನ ಜನ ಹಾಗೂ ಗ್ರಾಮಸ್ಥರು ಸ್ವತಂತ್ರ ಅಥವಾ ನೂತನ ಪಕ್ಷದ ಅಭ್ಯರ್ಥಿಗಳಿಗೆ ನಮ್ಮ ಮತವನ್ನು ನೀಡುತ್ತೇವೆ ಎಂದು ಜನತೆ ಪ್ರತಿಕ್ರಿಯೆ ನೀಡಿದ್ದಾರೆ.

See also  ಮಂಗಳೂರು: ಅರ್ಕುಳದಲ್ಲಿ 26 ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಡಾ. ಭರತ್ ಶೆಟ್ಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು