ಚಿಕ್ಕಮಗಳೂರು: ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಗೆಲ್ಲಲಿದ್ದು, ಡಬಲ್ ಇಂಜಿನ್ ಸರ್ಕಾರ, ಸುಭದ್ರ ಸರ್ಕಾರ ಬರಲಿದೆ ಎಂದು ಬಿಜೆಪಿ ಅಭ್ಯರ್ಥಿ ಸಿ.ಟಿ. ರವಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಇಂದು ಮತ ಚಲಾಯಿ ಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿ, ಜಿಲ್ಲೆ ಸೇರಿದಂತೆ ರಾಜ್ಯ ದ ಉದ್ದಗಲಕ್ಕೆ ಜನರು ಉತ್ಸಾಹ ದಿಂದ ಮತ ಚಲಾಯಿಸಿದ್ದಾರೆ. ಅವರಿಗೆ ಧನ್ಯವಾದ ತಿಳಿಸುತ್ತೇನೆ. ಚಿಕ್ಕಮಗಳೂರಿನಲ್ಲಿ ಅತೀ ಹೆಚ್ಚು ಮತಗಳಿಂದ ಗೆದ್ದು ಬರುತ್ತೇವೆ ಎಂದು ತಿಳಿಸಿದರು.
ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎನ್ನುವಂತೆ ಕಾಂಗ್ರೆಸ್ನವರು ಬಿಜೆಪಿಯನ್ನು ವಿರೋಧಿಸಬೇಕು ಎನ್ನುವ ಕಾರಣಕ್ಕೆ ಹೊಸ ಹೊಸ ಪದಗಳನ್ನ ಸೃಷ್ಠಿ ಮಾಡುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲೂ ಇಂತ ಹದ್ದೇ ಆರೋಪಗಳನ್ನು ಮಾಡಿದ್ದರು. ಆದರೆ ಜನರ ಜೀವ ಉಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ವ್ಯಾಕ್ಸಿನ್ಗಳನ್ನು ತಯಾರಿಸಿ ೧೪೦ ಕೋಟಿ ಜನರ ಜೀವಕ್ಕೆ ಭರವಸೆ ಆದರು ಎಂದರು.
ರಷ್ಯಾ ಉಕ್ರೇನ್ ಯುದ್ಧದ ಸಂದ ರ್ಭದಲ್ಲೂ ಇಂತಹದ್ದೇ ಆರೋಪ ಮಾಡಿದ್ದರು. ಆದರೆ ೨೨ ಸಾವಿರ ಜನ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಮೂಲಕ ದೇಶಕ್ಕೆ ಭರವಸೆ ಮೋದಿ ಆವರದಾರು. ಸರ್ವನಾಶ ವಾಗುತ್ತಿರುವುದು ಕಾಂಗ್ರೆಸ್ ಎಂದರು.
ಜನರಿಗೆ ವಿಶ್ವಾಸ ಇರುವುದು ಮೋದಿ ಅವರ ಮೇಲೆ. ಕಾಂಗ್ರೆಸ್ ಅವರಪ್ಪನಾಣೆ ಅಧಿಕಾರಕ್ಕೆ ಬರು ವುದಿಲ್ಲ. ಗೋಹತ್ಯೆ ನಿಷೇಧ ಹಿಂಪ ಡೆಯುತ್ತೇವೆ ಎಂದಿದ್ದಾರೆ. ಮೀಸ ಲಾತಿ ರದ್ದುಪಡಿಸುವುದಾಗಿ ಹೇಳಿ ದ್ದಾರೆ. ಬಜರಂಗದಳ ನಿಷೇಧಿಸುತ್ತೇವೆ ಎಂದು ಹೇಳಿದ್ದಾರೆ. ಅದೆಲ್ಲ ಮಾಡ ಲು ಕಾಂಗ್ರೆಸ್ ಇದ್ದರೆ ತಾನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.