ಚಿಕ್ಕಮಗಳೂರು: ಸರ್ಕಾರ ದಿಂದ ದೊರೆಯುವ ವಿವಿಧ ವೇತನಗಳ ಮಂಜೂರಾತಿ ಆದೇಶ ಹಾಗೂ ಇತ್ತೀಚೆಗೆ ಸಿಡಿಲಿಗೆ ಸಿಕ್ಕಿ ಮೃತರಾದ ಜಾನುವಾರುಗಳ ಮಾಲೀಕ ರುಗಳಿಗೆ ಪರಿಹಾರದ ಚೆಕ್ನ್ನು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ವಿತರಣೆ ಮಾಡಿದರು.
ಇದೇ ವೇಳೆ ಒಟ್ಟು ೪೦ ಮಂದಿ ಫಲಾನುಭವಿಗಳಿಗೆ ಪರಿಹಾರದ ಚೆಕ್ನ್ನು ಶಾಸಕರು ವಿತರಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ವಿನಾಯಕ್ ಸಾಗರ್, ಶಿರಸ್ತೇದಾರ್ ಐ.ಎಸ್.ಪ್ರಸನ್ನ, ಶ್ರೀನಿಧಿ, ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.