News Kannada
Thursday, June 01 2023
ಚಿಕಮಗಳೂರು

ಚಿಕ್ಕಮಗಳೂರು: ಹೃದಯವನ್ನು ಮುಟ್ಟುವುದೇ ಕಾವ್ಯದ ಗುರಿಯಾಗಿರಬೇಕು- ವೀರಭದ್ರಪ್ಪ

Chikkamagaluru: The aim of poetry should be to touch the heart: Veerabhadrappa
Photo Credit : News Kannada

ಚಿಕ್ಕಮಗಳೂರು: ಕಾವ್ಯಕ್ಕೆ ಯಾವುದೇ ಮೈಲಿಗೆಯಿಲ್ಲ. ಮನಸ್ಸು ಹೃದಯಗಳನ್ನು ಮುಟ್ಟುವುದೇ ಅದರ ಗುರಿಯಾಗಿರಬೇಕು. ಬಿಚ್ಚು ಮನಸ್ಸಿನಿಂದ, ಸ್ವಚ್ಛ ಭಾವದಿಂದ ಬರೆದಾಗ ಜೀವ ತುಂಬುವ ಕಾವ್ಯ ಹುಟ್ಟಲು ಸಾಧ್ಯ ಎಂದು ಶಂಕರಘಟ್ಟದ ಕುವೆಂಪು ವಿದ್ಯಾ ವಿದ್ಯಾಲಯ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಹೇಳಿದರು.

ತಾಲ್ಲೂಕಿನ ಖಾಂಡ್ಯ ಸಮೀಪದ ಶ್ರೀ ಮಾರ್ಖಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕುವೆಂಪು ವಿದ್ಯಾವಿದ್ಯಾಲಯದ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಕಾವ್ಯ ಕಮ್ಮಟ ಉದ್ಘಾಟನಾ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ಅವರು ಮಾತನಾಡುತ್ತಿದ್ದರು.

ಯುವ ಬರಹಗಾರರಿಗೆ ಆಪ್ತವಾಗಿಯೂ, ಮುಕ್ತವಾಗಿಯೂ ಚಿಂತಿಸಿ ಕಾವ್ಯ ರಚನೆಗೆ ಇಳಿಯಬೇಕೆಂಬ ಸೂಚನೆ ನೀಡುವುದೇ ಕಾವ್ಯ ಕಮ್ಮಟದ ಉದ್ದೇಶ. ಸಾಹಿತ್ಯದ ಆಸಕ್ತಿ ಇರುವ ಯುವ ಮನಸ್ಸುಗಳು ಒಂದೆಡೆ ಕಲೆತು ಕಾವ್ಯದ ಒಳ-ಹೊರಗುಗಳ ಚರ್ಚೆ ಮಾಡಲು ಹುಟ್ಟಿಕೊಂಡಿದ್ದೆ ’ಕಾವ್ಯ ಕಮ್ಮಟ’ ಎಂದು ವಿವರಿಸಿದರು.

ಪ್ರಸ್ತುತ ಯುವಜನರಲ್ಲಿ ಸಾಹಿತ್ಯದ ಆಸಕ್ತಿ ಕಡಿಮೆ ಆಗುತ್ತಿದೆ. ಹೊಸ ತಲೆಮಾರು ಕಾವ್ಯದಿಂದ ದೂರ ಸರಿಯುತ್ತಿದೆ ಎಂಬ ಕೂಗಿನ ನಡುವೆಯೂ ಕಾವ್ಯ ಕಮ್ಮಟ ಮೂಲಕ ಹೊಸ ಭರವಸೆ, ಹೊಸ ಬೆಳಕು ಕನ್ನಡ ಸಾಹಿತ್ಯಕ್ಕೆ ಗೋಚರಿಸುತ್ತಿದೆ ಎಂದರೆ ತಪ್ಪಾಗಲಾರದು. ಕಾವ್ಯ ಕಾಜಾಣ, ಕಥಾ ಕಮ್ಮಟ ಹೊಸ ತಲೆಮಾರಿನ ಬರಹಗಾರರು, ಕವಿಯತ್ರಿಯರು ಹುಟ್ಟಲು ಸಹಕಾರಿಯಾಗಿದೆ ಎಂದರು.

ಕನ್ನಡ ಭಾಷೆಯ ಬೆಳವಣಿಗೆಗಾಗಿ ಕುವೆಂಪು ಅವರು ಸಾಹಿತ್ಯದ ಮೂಲಕ ನಾಡಿಗೆ ಅಪಾರವಾದ ಕೊಡುಗೆ ನೀಡಿರುವ ಪರಿಣಾಮ ಇಂದು ವಿಶ್ವದ ಅನೇಕ ಯೂವನಿರ್ಸಿಟಿಗಳಲ್ಲಿ ಕನ್ನಡಿಗರು ರಾರಾಜಿಸುತ್ತಿಸತ್ತಿದ್ದಾರೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಕುವೆಂಪು ಅವರ ಎಲ್ಲಾದರೂ ಇರು, ಎಂತಾದರೂ ಇರು, ನೀ ಕನ್ನಡವಾಗಿರು ಸಾಲುಗಳನ್ನು ಮನದಟ್ಟು ಮಾಡಿಕೊಂಡಿರಬೇಕು ಎಂದರು.

ಖ್ಯಾತ ಚುಟುಕು ಕವಿ ಹೆಚ್.ಡುಂಡಿ ರಾಜ್ ಮಾತನಾಡಿ ಶಾಸ್ತ್ರೀಯವಾಗಿ ಸಾಹಿತ್ಯ ಓದದವರೂ ಕಮ್ಮಟದ ಭಾಗವಾಗಬಹುದು. ಇದರಿಂದ ಸೃಜನಶೀಲ ಬರಹಗಾರನೊಬ್ಬ ಹುಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಭಿನ್ನ ವ್ಯಕ್ತಿತ್ವ, ಆಲೋಚನೆಗಳ ಪರಿಚಂi ವಾಗುತ್ತದೆ. ಹೊಸ ಗ್ರಹಿಕೆ, ಆಳವಾದ ವಿಚಾರಧಾರೆ ತೆರೆದುಕೊಳ್ಳಲು ಇಂತಹ ಕಮ್ಮಟಗಳು ನೆರವಾಗುವ ಜೊತೆಗೆ ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರಯೋಗಕ್ಕೆ ನಾಂದಿಯಾಡುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಕಥಾ ಕಮ್ಮಟದ ಸ್ಪೂರ್ತಿಯಿಂದ ರಾಜ್ಯಮಟ್ಟದ ಕಾವ್ಯ ಕಮ್ಮಟ ಕಾರ್ಯಕ್ರಮವನ್ನು ಆಯೋಜಿಸಿ ಯುವಪ್ರತಿಭೆಗಳಿಗೆ ಅನಾವರಣ ಗೊಳಿಸಲು ಮುಂದಾಗುತ್ತಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ ಅನೇಕ ಮಂದಿ ಸಾಹಿತ್ಯಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಲು ಮುಂದಾಗಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಕಸಾಪವು ಸಂಘಟ ನೆಯ ಮೂಲಕ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಯುವಕ, ಯುವತಿಯರಿಗೆ ಸಾಹಿತ್ಯದ ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸ ಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಗೌರವಾಧ್ಯಕ್ಷ ಜಿ.ಬಿ.ಪವನ್, ತಾಲ್ಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇ ಖರ್, ಸಾಹಿತಿಗಳಾದ ನಾಗರಾಜ್‌ರಾವ್ ಕಲ್ಕಟ್ಟೆ, ಸವಿತಾ ನಾಗಭೂಷಣ್, ಶ್ರೀನಿವಾಸಮೂರ್ತಿ, ನಾಗರತ್ನ, ಸರೋಜಾ, ಶೋಭಾ ಮತ್ತಿತರರು ಉಪಸ್ಥಿತರಿದ್ದರು.

See also  ಚಿಕ್ಕಮಗಳೂರು: ಬಿ.ಎಸ್.ಪಿ ಅಭ್ಯರ್ಥಿಯ ಬಿರುಸಿನ ಪ್ರಚಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು