News Kannada
Sunday, September 24 2023
ಚಿಕಮಗಳೂರು

ಚಿಕ್ಕಮಗಳೂರು: ಪರಿಸರದ ವಿನಾಶದಿಂದಾಗಿ ಭೂಮಂಡಲದ ತಾಪಮಾನ ಹೆಚ್ಚಳ

Chikkamagaluru: The rise in the temperature of the earth due to environmental destruction
Photo Credit : News Kannada

ಚಿಕ್ಕಮಗಳೂರು: ಪರಿಸರದ ವಿನಾಶ ದಿಂದಾಗಿ ಭೂಮಂಡಲದ ತಾಪಮಾನ ಹೆಚ್ಚಳವಾಗುತ್ತಿದೆ. ಇದರ ಪರಿಣಾಮವಾಗಿ ಓಜೋನ್ ಪದರ ಕ್ಷೀಣಿಸುತ್ತಿದೆ. ಇದರಿಂದಾಗಿ ಭೂಮಂಡಲದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಆತಂಕ ವ್ಯಕ್ತಪಡಿಸಿದರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಪರಿಸರದ ಶಕ್ತಿ ಅಗಾಧವಾದದ್ದು ಮತ್ತು ವಿಶೇಷವಾದದ್ದು, ಇಂತಹ ಅಭೂತಪೂರ್ವ ನಿಸರ್ಗದ ಶಕ್ತಿಯನ್ನು ಕಳೆಗುಂದಿಸಬಾರದು, ಬದಲಾಗಿ ಶಕ್ತಿಯನ್ನು ಇಮ್ಮಡಿಗೊಳಿಸಿ ಮುಂದಿನ ಪೀಳಿಗೆಗೂ ಉತ್ತಮ ಪರಿಸರ ಉಳಿಸುವ ಹೊಣೆಗಾರಿಕೆ ಹಾಗೂ ಕರ್ತವ್ಯದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂಬುದಾಗಿ ತಿಳಿಸಿದರು.

ಎಲ್ಲರೂ ಪರಿಸರ ಸ್ನೇಹಿ ಹವ್ಯಾಸಗಳನ್ನು ರೂಢಿಸಿಕೊಳ್ಳೋಣ. ಮನೆಯಿಂದ ಹೊರಹೋಗುವಾಗ ಒಂದು ಕೈಚೀಲವನ್ನು ತೆಗೆದುಕೊಂಡು ಹೋಗಿ. ಪ್ಲಾಸ್ಟಿಕ್ ಕವರ್ ಪಡೆದುಕೊಳ್ಳಬೇಡಿ. ಕಸವನ್ನು ನಿಗದಿತ ಸ್ಥಳದಲ್ಲಿಯೇ ವಿಲೇ ಮಾಡಿ. ನೀರನ್ನು ಮಿತವಾಗಿ ಬಳಸಿ. ಗಿಡಗಳನ್ನು ನೆಡಲು ಸ್ಥಳೀಯ ಸಂಸ್ಥೆಗಳು ಹೆಚ್ಚಿನ ರೀತಿಯಲ್ಲಿ ಕಾಳಜಿ ವಹಿಸಿ ಪ್ರೋತ್ಸಾಹಿಸಬೇಕು, ಹಾಗೂ ಪರಿಸರದ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಬಿಸಲೆಹಳ್ಳಿ ಸೋಮಶೇಖರ್, ಜಿಲ್ಲಾ ಕಸಾಪ ಸಂಚಾಲಕ ಕೆ. ಎಸ್. ಗುರುವೇಶ್, ಪರಿಸರ ಉಳಿಸುವ ಬಗ್ಗೆ ಮಾತನಾಡಿದರು. ಇಂದಿನ ದಿನವೇ ಪರಿಸರ ಕಾಳಜಿಯ ಬಗ್ಗೆ ಸಂಕಲ್ಪ ಮಾಡಿ ನಾಳೆ ನಿಮ್ಮೆದುರೇ ಉತ್ತಮ ಫಲಿತಾಂಶ ಪಡೆಯಬಹುದು ಎಂದು ತಾಲೂಕು ಕಸಾಪ ಕೋಶಾಧ್ಯಕ್ಷ ಹೆಚ್. ಜಿ. ಈಶ್ವರಪ್ಪ ತಿಳಿಸಿದರು.

ಖಜಾಂಚಿ ಕಳಾವಾಸೆ ರವಿ, ನಗರಘಟಕ ಕಾರ್ಯದರ್ಶಿ ಸಚಿನ್, ಕಸಾಪ ಸಂಚಾಲಕಿ ವೀಣಾ ಅರವಿಂದ್, ವೇದಮೂರ್ತಿ, ಶ್ರೀನಿವಾಸ ಪದ್ಮಾವತಿ, ಶ್ರೀನಿವಾಸಮೂರ್ತಿ, ಅಜ್ಜಂಪುರ ಎಸ್. ಶೃತಿ, ಪೃಥ್ವಿ ಸೂರಿ, ಬೆನೆಡಿಕ್ಟ್ ಜೇಮ್ಸ್ ಹಾಗೂ ಇತರರು ಉಪಸ್ಥಿತರಿದ್ದರು.

See also  ಚಿಕ್ಕಮಗಳೂರು: ಸಿ.ಟಿ.ರವಿಗೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ ಮುತಾಲಿಕ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು