News Karnataka Kannada
Friday, April 26 2024
ಚಿಕಮಗಳೂರು

ರಸ್ತೆಯ ಬದಿಗಳಲ್ಲಿ ವಿದ್ಯುತ್ ದೀಪ, ಹಂಪುಗಳನ್ನು ಅಳವಡಿಸಲು ಒತ್ತಾಯ

Demand for installation of electric lights, humps on roadsides
Photo Credit : News Kannada

ಚಿಕ್ಕಮಗಳೂರು: ನಗರದ ಆಜಾದ್‌ಪಾರ್ಕ್ ರಸ್ತೆಯಿಂದ ಹಿರೇಮಗಳೂರುವರೆಗೆ ಅಪಘಾತ ವಲಯವಾದ ಕಾರಣ ಎರಡು ಬದಿಗಳಲ್ಲಿ ವಿದ್ಯುತ್ ದೀಪ, ತಿರುವಿನಲ್ಲಿ ಹಂಪುಗಳು ಹಾಗೂ ರಸ್ತೆಯ ಬದಿಗಳಲ್ಲಿ ರೇಡೀಯಂ ಅಳವಡಿಸಬೇಕು ಎಂದು ಜಿಲ್ಲಾ ಹಳ್ಳ್ಳಿಕಾರ ಯುವಕರ ಸಂಘವು ಶಾಸಕ ಹೆಚ್.ಡಿ. ತಮ್ಮಯ್ಯ ಅವರಿಗೆ ಒತ್ತಾಯಿಸಿದರು.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ಪದಾಧಿಕಾರಿಗಳು ಆಜಾದ್ ಪಾರ್ಕ್‌ನಿಂದ ಹಿರೇಮಗಳೂರು ಮಾರ್ಗವಾಗಿ ದಿನನಿತ್ಯ ಅನೇಕ ವಾಹನಗಳು ಸಂಚರಿಸುವ ಹಿನ್ನೆಲೆಯಲ್ಲಿ ಮೂಲಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಕೋಟೆ ಸೋಮಣ್ಣ ನಗರದ ಆಜಾದ್‌ಪಾರ್ಕ್‌ನಿಂದ ಹಿರೇ ಮಗಳೂರುವರೆಗೆ ಅತಿಹೆಚ್ಚು ಅಪಘಾತಗಳು ನಡೆದಿದೆ. ಈಗಾಗಲೇ ಈ ರಸ್ತೆಯಲ್ಲಿ ಪೆಟ್ಟು ಬಿದ್ದು ನಾಲ್ಕೈದು ಜನರ ಸಾವು ಕೂಡಾ ಸಂಭವಿಸಿರುವ ಕಾರಣ ಸಾರ್ವಜನಿಕರು ಜೀವವನ್ನು ಕೈಯಲ್ಲಿಡಿದುಕೊಂಡು ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.

ನಗರದೊದಳಗೆ ವೇಗವಾಗಿ ಬರುವಂತಹ ವಾಹನಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಆಜಾದ್ ಪಾರ್ಕ್‌ನಿಂದ ಹಿರೇಮಗಳೂರುವರೆಗೆ ರಸ್ತೆಯ ಎರಡು ಬದಿಗಳಲ್ಲಿ ವಿದ್ಯುತ್ ದೀಪಗಳು, ರೇಡಿಯಂ ಅಳವಡಿ ಸುವುದು ಹಾಗೂ ದೋಣಿಖಣದಿಂದ ಎಲ್‌ಐಸಿ ಕಚೇರಿ ಕಡೆಗೆ ತಿರುಗುವ ಎರಡು ಬದಿಗಳಲ್ಲಿ ಹಂಪುಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖವಾಗಿ ಬೇಲೂರು ರಸ್ತೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಸಮೀಪ ಬಹಳ ವರ್ಷಗಳ ಹಿಂದೆ ಬಸ್ ತಂಗುದಾಣ ನಿರ್ಮಿಸಲಾಗಿತ್ತು. ಆದರೆ ರಸ್ತೆ ಅಗಲೀಕರಣ ವೇಳೆಯಲ್ಲಿ ತೆರವು ಮಾಡಲಾಗಿದೆ. ಇದರಿಂದ ಸಾರ್ವಜನಿಕರು ಬಿಸಿಲು ಹಾಗೂ ಮಳೆಯಿಂದ ತೀವ್ರ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಬಸ್ ತಂಗುದಾಣ ನಿರ್ಮಾಣ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಪ್ರಕೃತಿ ಸೌಂದರ್ಯಕ್ಕೆ ಮತ್ತು ಪ್ರವಾಸಿಗರಿಗೆ ಚಿಕ್ಕಮಗಳೂರು ಅತ್ಯಂತ ಪ್ರಿಯವಾದ ಜಾಗವಾದ ಕಾರಣ ರಾತ್ರಿ ಸಮಯದಲ್ಲಿ ನಗರದೊಳಗೆ ಬರುತ್ತಿದ್ದಂತೆ ಕತ್ತಲೆ ಆವರಿಸಿರುವ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆಯೂ ಸೂಕ್ತ ನಿರ್ದೇಶನ ನೀಡಿ ನಗರವನ್ನು ಸುಂದರೀಕರಣಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಸಿ.ಹೆಚ್.ಶ್ರೀನಿವಾಸ್, ಶಿವಕುಮಾರ್, ಹಿರೇಮಗಳೂರು ಸೋಮಣ್ಣ, ಮುಖಂಡರುಗಳಾದ ಶ್ರೀಧರ್ ಡಿ.ಪಾಪಣ್ಣ, ಜಗದೀಶ್ ಕೋಟೆ, ಅನಂತ, ರಾಘವೇಂದ್ರ, ಜಯದೇವ ರಾಜ್‌ಅರಸ್, ಮೋಹನ್ ಮತ್ತಿತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು