ಚಿಕ್ಕಮಗಳೂರು: ಚುನಾವಣೆಯಲ್ಲಿ ಗೆದ್ದು ಶಾಸಕರಾದ ಹಿನ್ನೆಲೆ ಚಿಕ್ಕಮಗಳೂರು ಶಾಸಕ ಹೆಚ್ಡಿ ತಮ್ಮಯ್ಯ ತಮ್ಮ ಬೈಕಿನಲ್ಲಿ ತಾಲೂಕಿನ ಹಳ್ಳಿ- ಹಳ್ಳಿಗಳನ್ನು ಸುತ್ತಿ ಮತ ದಾರರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೆಚ್ಡಿ ತಮ್ಮಯ್ಯ ಮತ್ತು ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿಟಿ ರವಿಯವರ ನಡುವೆ ಭಾರೀ ಪೈಪೋಟಿ ನಡೆದಿತ್ತು. ಕೊನೆಗೆ ೫,೦೦೦ ಮತಗಳ ಅಂತರದಲ್ಲಿ ಸಿಟಿ ರವಿಯವರನ್ನು ಮಣಿಸಿ ತಮ್ಮಯ್ಯ ಮೊದಲ ಬಾರಿಗೆ ಗೆಲುವನ್ನು ಸಾಧಿಸಿದ್ದಾರೆ.
ಈ ಹಿನ್ನೆಲೆ ಹಳ್ಳಿ ಹಳ್ಳಿಗಳನ್ನು ಸುತ್ತಿ ತನಗೆ ಮತ ಹಾಕಿ ಗೆಲ್ಲಿಸಿದ ಮತದಾರರಿಗೆ ಧನ್ಯವಾದ ತಿಳಿಸುವ ಕಾರ್ಯವನ್ನು ತಮ್ಮಯ್ಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಸೇರಿದ ೨ ತಿಂಗಳಿಗೆ ಟಿಕೆಟ್ ತಂದು ಮೊದಲ ಬಾರಿ ಗೆದ್ದ ತಮ್ಮಯ್ಯ ತನ್ನ ಬೈಕಿನಲ್ಲಿ ವಿಲೇಜ್ ರೌಂಡ್ಸ್ ಹೊಡೆಯುತ್ತಿದ್ದಾರೆ. ಇವರಿಗೆ ತಾಲೂಕಿನ ಹಳ್ಳಿಗಳ ಯುವಕರು ಸಾಥ್ ನೀಡುತ್ತಿದ್ದಾರೆ.