ಚಿಕ್ಕಮಗಳೂರು: ಪ್ರಪಂಚದಲ್ಲೇ ಭಾರತದ ಸಂಸ್ಕೃತಿ ಮತ್ತು ಸಂಸ್ಕಾರ ವಿಶಿಷ್ಟವಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ತಾಲೂಕಿನ ಕುಮಾರಗಿರಿ ಶ್ರೀಸುಬ್ರಮಣ್ಯಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸುಬ್ರ ಮಣ್ಯಸ್ವಾಮಿ ಅವತಾರೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂತಹ ಸಂಸ್ಕಾರ ಮತ್ತು ಸಂಸ್ಕೃತಿ ಯನ್ನು ನಮ್ಮ ದೇಶದಲ್ಲಿ ಮಾತ್ರ ಕಾಣಲು ಸಾಧ್ಯ. ನಾನು ಪ್ರಪಂಚದ ಹಲ ವಾರು ದೇಶಗಳಿಗೆ ಹೋಗಿ ಬಂದಿದ್ದೇನೆ. ನಮ್ಮ ದೇಶದಲ್ಲಿನ ಸಂಸ್ಕಾರ ಮತ್ತು ಸಂ ಸ್ಕೃತಿ ಎಲ್ಲೂ ಇಲ್ಲ ಎಂದು ಹೇಳಿದರು.
ಬ್ರಿಟಿಷರು ನಮ್ಮ ದೇಶವನ್ನು ಇನ್ನೂರು ವರ್ಷಗಳ ಕಾಲ ಆಳಿದರೂ ನಮ್ಮ ದೇಶದ ಸಂಸ್ಕಾರ ಇನ್ನೂ ಉಳಿದಿದೆ. ತಮಿಳು ಜನಾಂಗದವರು ಶ್ರೀ ಸುಬ್ರಮಣ್ಯಸ್ವಾಮಿಯ ಅವತಾರೋತ್ಸವ ನಡೆಸುವ ಮೂಲಕ ನಮ್ಮ ಸಂಸ್ಕಾರವನ್ನು ಉಳಿಸುತ್ತಿದ್ದಾರೆ ಎಂದು ತಿಳಿಸಿದರು.
ವಿವಿಧ ಸಮಾಜಗಳು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ದೇಶದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸಿ ಬೆಳೆಸುವಂತಾಗ ಬೇಕು. ನಮ್ಮ ದೇಶದ ಭವ್ಯವಾಗಿ ಬೆಳೆದಿದೆ ಎಂದರೇ ಅದಕ್ಕೆ ಕಾರಣ ನಮ್ಮ ಲ್ಲಿರುವ ಸಂಸ್ಕೃತಿ ಮತ್ತು ಸಂಸ್ಕಾರದಿಂದ ಎಂದು ಅಭಿಪ್ರಾಯಿಸಿದರು.
ನಮ್ಮ ದೇಶ ಉಳಿದಿರುವುದೇ ಸಾಂಸ್ಕೃತಿಕವಾಗಿ ಹಾಗೂ ವಿಶ್ವದಲ್ಲಿ ಸಂವೃದ್ಧವಾಗಿರುವ ದೇಶ ಎಂದರೇ ಅದು ನಮ್ಮ ಭಾರತ ದೇಶವಾಗಿದ್ದು, ಸುಂದರ ದೇಶದಲ್ಲಿ ಜನಿಸಿರುವ ನಾವೆಲ್ಲರೂ ಪುಣ್ಯವಂತರು. ಅದರಲ್ಲೂ ನಮ್ಮ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಿಸಿರುವ ನಾವೆಲ್ಲರೂ ಪುಣ್ಯವಂತರು ಎಂದರು.
ಚಿಕ್ಕಮಗಳೂರು ಕ್ಷೇತ್ರದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ ಹಾಗೂ ಕುಮಾರಗಿರಿ ಶ್ರೀಸುಬ್ರಮಣ್ಯ ದೇವಸ್ಥಾನದ ಅಭಿವೃದ್ದಿಗೆ ಬೇಕಾದ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಶ್ರೀ ಸುಬ್ರಮಣ್ಯ ಸ್ವಾಮಿ ಅವತಾರೋತ್ಸವ ಕಾರ್ಯಕ್ರಮಕ್ಕೆ ಶುಭ ಕೋರಿದ ಅವರು, ಚಿಕ್ಕಮಗಳೂರು ಕ್ಷೇತ್ರದ ಜೊತೆಗೆ ನಗರಸಭೆ ವತಿಯಿಂದ ನಡೆಯುವ ನಗರದ ಅಭಿವೃದ್ದಿಗೆ ಶಾಸಕರು ಸಹಕಾರ ನೀಡುವಂತೆ ಇದೇ ವೇಳೆ ಮನವಿ ಮಾಡಿದರು.ಶ್ರೀ ಕುಮಾರಗಿರಿ ಶ್ರೀಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಎಸ್.ವಿಜಯಕುಮಾರ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇ ಗೌಡ, ನಗರಸಭೆ ಸದಸ್ಯರಾದ ಗುರುಮಲ್ಲಪ್ಪ, ರಮೇಶ್, ರಘು, ಶಂಕರ್, ಕೃಷ್ಣ, ಆರ್ಮುಗಮ್ ಸೇರಿದಂತೆ ಅನೇಕರು ಇದ್ದರು.