News Kannada
Monday, December 11 2023
ಚಿಕಮಗಳೂರು

ಪ್ರಧಾನ ಮಂತ್ರಿಗಳ ಸ್ವನಿಧಿ ಯೋಜನೆಯಿಂದ ಪತ್ರಿಕಾ ವಿತರಕರಿಗೆ ಸಾಲ -ಸಂಸದೆ ಶೋಭಾ ಕರಂದ್ಲಾಜೆ ಕರೆ

Mp Shobha Karandlaje calls for loans to newspaper distributors from PM's SVANidhi Yojana
Photo Credit : News Kannada

ಚಿಕ್ಕಮಗಳೂರು: ಪತ್ರಿಕಾ ವಿತರಕರಿಗೆ ಪ್ರಧಾನ ಮಂತ್ರಿ ಗಳ ಸ್ವನಿಧಿ ಯೋಜನೆಯಿಂದ ಹತ್ತು ಸಾವಿರದಿಂದ ಒಂದು ಲಕ್ಷ ವರಗೆ ಬಡ್ಡಿ ರಹಿತ ಸಾಲವನ್ನು ಕೊಡಲಾಗುವುದು ಇದರ ಸದುಪಯೋಗ ಪಡಿಸಿಕೊಳ್ಳಲು ಪತ್ರಿಕಾ ವಿತರಕರಿಗೆ ಸಂಸದರಾದ ಶೋಭಾ ಕರಂದ್ಲಾಜೆ ತಿಳಿಸಿದರು.

ನಗರದ ಪತ್ರಿಕಾ ವಿತರಕರನ್ನು ಬೆಳಿಗ್ಗೆ ಐದು ಗಂಟೆಗೆ ಭೇಟಿ ಮಾಡಿ ಮಾತನಾಡಿದರು ಚಿಕ್ಕಮಗಳೂರು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾದ ಶ್ರೀಧರ್ ಮಾತನಾಡಿ ಮಳೆ ಗಾಳಿ ಚಳಿಯನ್ನು ಲೆಕ್ಕಿಸದೆ ಪತ್ರಿಕೆಯನ್ನು ವಿತರಣೆ ಮಾಡುತ್ತಿದ್ದಾರೆ.

ವಿತರಕರಿಗೆ ಇನ್ನಷ್ಟು ಸೌಲಭ್ಯಗಳನ್ನು ಸಿಗುವಂತೆ ಮಾಡಬೇಕು ಎಂದು ಸಂಸದರಿಗೆ ತಿಳಿಸಿದರು. ವಿತರಕ ನಂಜುಂಡ ಮಾತನಾಡಿ ಪತ್ರಿಕೆಯನ್ನು ಜೋಡಿಸಲು ಸೂಕ್ತವಾದ ಸ್ಥಳವನ್ನು ಗುರುತಿಸಿ ನಮಗೆ ನಗರ ಸಭೆ ಹಾಗೂ ಜಿಲ್ಲಾಡಳಿತ ವತಿಯಿಂದ ಶೆಡ್ ಅಥವಾ ಮಳಿಗೆಗಳನ್ನು ನಿರ್ಮಾಣ ಮಾಡಿಕೋಡಬೇಕೆಂದು ಹೇಳಿದರು.

ನಗರ ಸಭೆ ವತಿಯಿಂದ ಸೂಕ್ತವಾದ ಸ್ಥಳವನ್ನು ಗುರುತಿಸಿಕೊಟ್ಟರೆ ಸಂಸದರ ನಿಧಿಯಿಂದ ಪತ್ರಿಕಾ ವಿತರಕರಿಗೆ ಶೆಡ್ ನಿರ್ಮಿಸಿ ಕೊಡಲಾಗುವುದು ಎಂದು ಸಂಸದರು ಹೇಳಿದರು.

ವಿತರಕರಾದ ವಿಜಯ್ ಮಾತನಾಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ಪತ್ರಕರ್ತರ ಸಹಾಯದಿಂದ ಪತ್ರಿಕಾ ವಿತರಕರಿಗೆ ನೀವೆಶನಗಳನ್ನು ಮಂಜುರು ಮಾಡಿ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ .. ನಮ್ಮ ಜಿಲ್ಲೆಯಲ್ಲಿ ನಗರಸಭೆ ಹಾಗೂ ಜಿಲ್ಲಾಡಳಿತ ವತಿಯಿಂದ ವಿತರಕರಿಗೆ ನಿವೇಶನಗಳನ್ನು ಮಂಜುರು ಮಾಡಿಸಿ ಕೊಡುವಂತೆ ಸಂಸದರಿಗೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ರಾದ ವರಸಿದ್ದಿ ವೇಣುಗೋಪಾಲ್ , ವಿತರಕರಾದ ಶ್ರೀದರ್ , ನಂಜುಂಡ , ವಿಜಯ್ ,ಗಜೇಂದ್ರ , ಮೋಹನ್, ಸುರೇಶ ,ಷಣ್ಮುಖ ,ಅಜಯ್ , ರಕ್ಷಿತ್ ಇದ್ದರು.

See also  ಜಿಂಕೆ: ಸೆರ್ವಿಡೇ ಕುಟುಂಬಕ್ಕೆ ಸೇರಿದ ಗೊರಸುಳ್ಳ ಸಸ್ತನಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು