News Kannada
Tuesday, October 03 2023
ಚಿಕಮಗಳೂರು

ಒಡಿಶಾ ರೈಲು ದುರಂತ ಪ್ರಕರಣ; ಕೊಲ್ಕತ ತಲುಪಿದ ಕಳಸದ 110 ಪ್ರಯಾಣಿಕರು

Odisha train tragedy case; 110 passengers from Kalasa reach Kolkata
Photo Credit : News Kannada

ಚಿಕ್ಕಮಗಳೂರು: ಒಡಿಶಾ ಬಹನಾಗ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಮೂಲದವರು ಸುರಕ್ಷಿತವಾಗಿ ಕೊಲ್ಕತ್ತ ತಲುಪಿರುವ ಮಾಹಿತಿ ಲಭ್ಯವಾಗಿದೆ.

ಕೋರಮಂಡಲ್ ಎಕ್ಸ್ ಪ್ರೆಸ್, ಬೈಯಪ್ಪನಹಳ್ಳಿ ಸರ್‌ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಹೌರಾ ಎಕ್ಸ್ ಪ್ರೆಸ್ ಮತ್ತು ಗೂಡ್ಸ್ ರೈಲುಗಳ ಮಧ್ಯೆ ನಿನ್ನೆ ಅಫಘಾತ ಸಂಭವಿಸಿತ್ತು. ಎಕ್ಸ್ ಪ್ರೆಸ್ ರೈಲು ಡಿಕ್ಕಿಯಾದ ರಭಸಕ್ಕೆ ಪ್ರಯಾಣಿಕರಿದ್ದ ರೈಲಿನ ಹಲವು ಬೋಗಿಗಳು ಹಳಿ ತಪ್ಪಿ, ಭೀಕರ ಅಪಘಾತದಲ್ಲಿ ಹಲವರು ಮೃತಪಟ್ಟಿದ್ದಾರೆ. ಈ ದುರಂತ ನಡೆದ ಸಂದರ್ಭದಲ್ಲಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕಳಸದ ೧೧೦ ಮಂದಿ ಸುಮೇದ್ ಸಿಖರ್ಜಿ ಯಾತ್ರೆಗೆಂದು ಹೊರಟಿದ್ದು, ಅಪಘಾತದಲ್ಲಿ ೧೧೦ ಮಂದಿಯೂ ಬಚಾವ್ ಆಗಿದ್ದರು. ಸದ್ಯ ೧೧೦ ಮಂದಿ ಚಿಕ್ಕಮಗಳೂರು ಮೂಲದವರು ಸುರಕ್ಷಿತವಾಗಿ ಕೊಲ್ಕತಕ್ಕೆ ತಲುಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಎರಡು ಬಸ್, ಒಂದು ಟಿಟಿ ಮೂಲಕ ಜಾರ್ಖಂಡ್ ಕಡೆ ಪಯಣ ಮಾಡಲಿದ್ದು, ಮಧ್ಯ ರಾತ್ರಿ ಸುಮಾರು ೧೨ ಕ್ಕೆ ಸಮ್ಮೇದ್ ಸಿಖರ್ಜಿಯನ್ನು ಯಾತ್ರಾರ್ಥಿಗಳು ತಲುಪಲಿದ್ದಾರೆ. ಹಾಗೂ ಯಾತ್ರಾರ್ಥಿಗಳು ಎರಡು ದಿನ ಅಲ್ಲೆ ಉಳಿಯಲಿದ್ದಾರೆ ಎನ್ನಲಾಗಿದೆ.

ಹೌರಾ ಎಕ್ಸ್ ಪ್ರೆಸ್ ನಲ್ಲಿದ್ದ ಕಳಸ ಮೂಲದವರು ಬಚಾವ್ ಆಗಿದ್ದೇಗೆ: ಬೆಂಗಳೂರಿನಿಂದ ಹೌರಾ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದ ೧೧೦ ಜನ ಯಶವಂತಪುರಕ್ಕೆ ಬರುವ ಮುನ್ನ ನೆಲಮಂಗಲದಲ್ಲಿ ಬೋಗಿ ಬದಲಿಸಿದ್ದ ಕಾರಣ ಕೊನೆಯ s೫, s೬, s೭ ಬೋಗಿ ರೈಲಿನ ಮೊದಲ ಬೋಗಿಗೆ ಶಿಫ್ಟ್ ಆಗಿದ್ದರು. ಮೊದಲ ಬೋಗಿಗೆ ಶಿಫ್ಟ್ ಆದ ಹಿನ್ನೆಲೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

See also  ಪ್ರಧಾನಿಯಿಂದ ಧಾರವಾಡದಲ್ಲಿ ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಉದ್ಘಾಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು