News Karnataka Kannada
Thursday, April 25 2024
ಶಿವಮೊಗ್ಗ

ಸ್ಮಾರ್ಟ್ ಸಿಟಿ ಯೋಜನೆ ವಿಳಂಬ ಪಾದಚಾರಿಗಳಿಗೆ ಹಾಗೇ ವಾಹನ ಚಾಲಕರಿಗೆ ಸಂಕಷ್ಟ

Shimogga Smart City
Photo Credit :

ಶಿವಮೊಗ್ಗ:   ಇತ್ತೀಚೆಗೆ ಕೇಂದ್ರ ಸರಕಾರ ಶಿವಮೊಗ್ಗ ಸ್ಮಾರ್ಟ್‌ ಸಿಟಿ ಕಾಮಗಾರಿ ವಿಳಂಬಕ್ಕೆ ಚಾಟಿ ಬೀಸಿದ್ದು, ಅನುದಾನ ಕಡಿತಗೊಳಿಸುವುದಾಗಿ ಹೇಳಿತ್ತು. ಇದೆಲ್ಲದರ ಮಧ್ಯೆಯೂ ವಿವೇಚನಾರಹಿತ ಕಾಮಗಾರಿಗಳು ಮಾತ್ರ ಜನರ ನೆಮ್ಮದಿ ಕೆಡಿಸಿವೆ. ಎಂಜಿನಿಯರಿಂಗ್ ಡೇ ಆಚರಿಸುವ ಸಂದರ್ಭದಲ್ಲಿ ಶಿವಮೊಗ್ಗ ಸ್ಮಾರ್ಟ್‌ ಸಿಟಿ ಯೋಜನೆಯಿಂದ ಎಂಜಿನಿಯರ್‌ಗಳಿಗೆ ಮಾತ್ರ ಹಿಡಿಶಾಪ ಹಾಕಲಾಗುತ್ತಿದೆ.ಶಿವಮೊಗ್ಗದಲ್ಲಿ ಬಹುಕೋಟಿ ಸ್ಮಾರ್ಟ್‌ ಸಿಟಿ ಕಾಮಗಾರಿಗಳು ಎರಡು ವರ್ಷಗಳಿಂದ ಇಡೀ ನಗರವನ್ನೇ ಅಧ್ವಾನ ಮಾಡಿ ಹಾಕಿವೆ. ನಿಗದಿತ ಅವಧಿಯಲ್ಲಿ ಕಾಮಗರಿಗಳು ಪೂರ್ಣಗೊಳ್ಳದೇ, ಜನರನ್ನು ಸಂಕಷ್ಟಕ್ಕೆ ತಳ್ಳಿವೆ. ಎಲ್ಲಿ ಹೋದರೂ ಸಹ ಹದಗೆಟ್ಟ ರಸ್ತೆ, ಕಿತ್ತು ಹಾಕಿರುವ ಚರಂಡಿ, ಆಳುದ್ದದ ಗುಂಡಿಗಳನ್ನು ನೋಡಿ ಜನ ಹೈರಾಣಾಗಿದ್ದಾರೆ.

ಈ ಕುರಿತು ಮಾತನಾಡಿದ ಕಾಂಗ್ರೆಸ್ ಮುಖಂಡ ಹಾಗೂ ಪಾಲಿಕೆ ಸದಸ್ಯ ಹೆಚ್‌‌ಸಿ ಯೋಗೀಶ್‌, ಶಿವಮೊಗ್ಗದಲ್ಲಿ ಒಟ್ಟು 53 ಸ್ಮಾರ್ಟ್‌ ಸಿಟಿ ಕಾಮಗಾರಿಗಳು ನಡೆಯುತ್ತಿವೆ ಆದರೆ ಒಂದೂ ಕೂಡ ನಿಗದಿತ ಅವಧಿಯಲ್ಲಿ ಮುಗಿಯುತ್ತಿಲ್ಲ. ಕೇವಲ ಪಾರ್ಕ್‌ ಕೆಲಸಗಳನ್ನ ಮಾತ್ರ ಮುಗಿಸಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸ್ಮಾರ್ಟ್‌ ಸಿಟಿ ಯೋಜನೆ ನೆನೆಗುದಿಗೆ ಬೀಳಲು ಆಡಳಿತ ನಡೆಸುತ್ತಿರುವ ಬಿಜೆಪಿಯೇ ನೇರ ಹೊಣೆ. ಸ್ಮಾರ್ಟ್‌ ಸಿಟಿ ಯೋಜನೆಯ ಪ್ರಮುಖ ನಾಲ್ಕು ನಿರ್ದೇಶಕರೂ ಸಹ ಬಿಜೇಪಿಯವರೇ ಆಗಿದ್ದಾರೆ ಎಂದು ಯೋಗೀಶ್‌ ಹರಿಹಾಯ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು