ಶಿವಮೊಗ್ಗ : ರಾಜ್ಯದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಸಂಘರ್ಷ ತಾರಕಕ್ಕೇರಿದೆ. ಇತ್ತ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಸಂಘರ್ಷ ತಾರಕಕ್ಕೇರಿದೆ. ನಿನ್ನೆ 13 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆ ಬರೆಯದೇ ವಾಪಾಸ್ ಆಗಿದ್ದರು. ಇಂದು ಮತ್ತಿಬ್ಬರು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೇ ವಾಪಾಸ್ ಆಗಿದ್ದಾರೆ.
ಶಿವಮೊಗ್ಗದ ಬಿ.ಎಚ್.ರಸ್ತೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಿನ್ನೆ ನಾವು ಪರೀಕ್ಷೆ ಬರೆಯದಿದ್ದರೂ ಬರೆಯದೇ ಇದ್ದರೂ ಪರವಾಗಿಲ್ಲ. ಹಿಜಾಬ್ ತೆಗೆಯೋದಿಲ್ಲ ಎಂಬುದಾಗಿ 13 ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿ, ಶಾಲೆಯಿಂದ ಮನೆಗೆ ವಾಪಾಸ್ ಆಗಿದ್ದರು. ಈ ಬಳಿಕ ಇಂದೂ ಪರೀಕ್ಷೆ ಬಹಿಷ್ಕರಿಸಿದ ಇಬ್ಬರು ವಿದ್ಯಾರ್ಥಿನಿಯರು, ಮನೆಗೆ ವಾಪಾಸ್ ಆಗಿದ್ದಾರೆ.
ನಮ್ಮ ಮನೆಯಲ್ಲಿ ಹಿಜಾಬ್ ಧರಿಸಿಯೇ ಶಾಲೆಗೆ ಹೋಗುವಂತೆ ತಿಳಿಸಿದ್ದಾರೆ. ಎಕ್ಸಾಂಗೆ ಕೂರಿಸದೇ ಇದ್ದರೂ ಪರವಾಗಿಲ್ಲ, ಮನೆಗೆ ಹೋಗುತ್ತೇವೆ ಎಂಬುದಾಗಿ ಹೇಳು, ಶಿವಮೊಗ್ಗದ ಬಿ.ಎಚ್.ರಸ್ತೆಯ ಕರ್ನಾಟಕ ಪಬ್ಲಿಕ್ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಇಂದು ಮನೆಗೆ ವಾಪಾಸ್ ಆಗಿರೋ ಘಟನೆ ನಡೆದಿದೆ. ಅಲ್ಲದೇ ಏನ್ ಆಗುತ್ತೋ ನೋಡೇ ಬೀಡೋಣ ಎಂದು ವಿದ್ಯಾರ್ಥಿನಿಯರು ಹೇಳಿ ತೆರಳಿದ್ದಾರೆ.