News Kannada
Saturday, September 23 2023
ಶಿವಮೊಗ್ಗ

ಶಿವಮೊಗ್ಗ: ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಮಹಿಳಾ ಕಾನ್ಸ್ ಟೇಬಲ್

Husband kills wife, cooks her in kadai
Photo Credit :

ಶಿವಮೊಗ್ಗ: ಜಾತಕ ಸರಿಯಿಲ್ಲವೆಂದು ಯುವಕನ ಮನೆಯವರು ಮದುವೆಗೆ ಒಪ್ಪದ ಕಾರಣ ಯುವತಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ ಟೇಬಲ್ ಕಲ್ಲಾಪುರದ ಸುಧಾ(29) ಮೃತಪಟ್ಟವರು.

ಅರಣ್ಯ ಇಲಾಖೆ ನೌಕರ ಬೆಳಗಾವಿಯ ಪ್ರವೀಣ್ ಅವರನ್ನು ಆರು ವರ್ಷಗಳಿಂದ ಸುಧಾ ಪ್ರೀತಿಸಿದ್ದರು. ಜಾತಿ ಬೇರೆಯಾಗಿದ್ದರು ಇವರ ಪ್ರೀತಿಗೆ ಅಡ್ಡಿಯಾಗಿರಲಿಲ್ಲ. ಆದರೆ, ಪ್ರವೀಣ್ ಅವರ ತಾಯಿ ಯುವತಿಯ ಜಾತಕವನ್ನು ಜ್ಯೋತಿಷಿಗೆ ತೋರಿಸಿದಾಗ ಯುವತಿಗೆ ಕುಜದೋಷವಿದ್ದು, ಆಕೆಯೊಂದಿಗೆ ಮದುವೆ ಮಾಡಿದರೆ ಮಗನ ಆಯಸ್ಸು ಕಡಿಮೆಯಾಗಲಿದೆ. ಆತ ಸಾಯುತ್ತಾನೆ ಎಂದು ತಿಳಿಸಿದ್ದಾರೆ.

ಇದರಿಂದಾಗಿ ಪ್ರವೀಣ್ ಮನೆಯವರು ಮದುವೆಗೆ ಒಪ್ಪಿರಲಿಲ್ಲ. ಪ್ರವೀಣ್ ಕೂಡ ದೂರವಾಗ ತೊಡಗಿದ್ದ. ಇದರಿಂದಾಗಿ ಮನನೊಂದ ಸುಧಾ ಮೇ 31ರಂದು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಭದ್ರಾವತಿ ಹಳೆನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

See also  ರಾಹುಲ್ ವಿರುದ್ಧ ಇ.ಡಿ ಕ್ರಮ: ಬಿಹಾರ ರಾಜ್ಯಪಾಲರನ್ನು ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು