News Kannada
Saturday, September 30 2023
ಶಿವಮೊಗ್ಗ

ಶಿವಮೊಗ್ಗ: ತಂದೆ-ಮಗನಿಗೆ ಚಾಕುವಿನಿಂದ ಇರಿದ ಕಾಂಟ್ರ್ಯಾಕ್ಟರ್

Restaurant manager shot dead in Hyderabad
Photo Credit :

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಗ್ರಾಮದಲ್ಲಿ ತಂದೆ ಹಾಗೂ ಮಗ ಇಬ್ಬರಿಗೂ ಕಾಂಟ್ರ್ಯಾಕ್ಟರ್ ಓರ್ವರು ಚಾಕುವಿನಿಂದ ಇರಿದ ಘಟನೆ ನಡೆದಿದೆ.

ಹಾರ್ಡ್ ವೇರ್ ಉದ್ಯಮಿ ದಯಾನಂದ ಹಾಗೂ ಅವರ ಮಗ ರಾಘವೇಂದ್ರ ಎಂಬುವವರಿಗೆ ಕಾಂಟ್ರ್ಯಾಕ್ಟರ್ ಕೋಟೇಶಪ್ಪ ಎಂಬಾತ ಮನ ಬಂದಂತೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ದಯಾನಂದ ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಾಳು ಮಗ ರಾಘವೇಂದ್ರ ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಯಾನಂದ್ ಶಿರಾಳಕೊಪ್ಪದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು. ಕಾಮಗಾರಿ ಜವಾಬ್ದಾರಿಯನ್ನು ಕಾಂಟ್ರ್ಯಾಕ್ಟರ್ ಕೋಟೇಶಪ್ಪನಿಗೆ ನೀಡಿದ್ದರು. ಆದರೆ ಕೋಟೇಶಪ್ಪ ಸರಿಯಾಗಿ ಕಾಮಗಾರಿ ನಿರ್ವಹಿಸದ ಹಿನ್ನೆಲೆಯಲ್ಲಿ ಬೇರೆಯವರಿಗೆ ಕಟ್ಟಡ ನಿರ್ಮಾಣ ಜವಾಬ್ದಾರಿ ವಹಿಸಿದ್ದರು. ಇದರಿಂದ ಕೋಟೇಶಪ್ಪ, ದಯಾನಂದ್ ವಿರುದ್ಧ ಕೋಪಗೊಂಡಿದ್ದ ಎನ್ನಲಾಗಿದೆ.

ಬೆಳಿಗ್ಗೆ ದಯಾನಂದ್ ಹಾಗೂ ಅವರ ಮಗ ಹಾರ್ಡ್ ವೇರ್ ಅಂಗಡಿ ತೆಗೆಯುತ್ತಿದ್ದಂತೆ ಏಕಾಏಕಿ ದಾಳಿ ನಡೆಸಿದ ಕೋಟೇಶಪ್ಪ, ದಯಾನಂದ್ ಹಾಗೂ ಅವರ ಮಗ ರಾಘವೇಂದ್ರ ಮೇಲೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ರಾಜ್ಯೋತ್ಸವ ನಿಮಿತ್ತ ರಾಜ್ಯಾದ್ಯಂತ ಏಕಕಾಲದಲ್ಲಿ ಮೊಳಗಿದ ವಿಶೇಷ ಗೀತಗಾಯನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು