News Kannada
Wednesday, October 04 2023
ಶಿವಮೊಗ್ಗ

ಶಿವಮೊಗ್ಗ: ಮಲ್ಲಿಗೇನ ಹಳ್ಳಿಯಲ್ಲಿ ಅಕ್ರಮ ಮನೆ ತೆರವು ಕಾರ್ಯಚರಣೆ, ಮನೆಗಳು ನೆಲಸಮ!

s
Photo Credit : By Author

ಶಿವಮೊಗ್ಗ: ಮಲ್ಲಿಗೇನ ಹಳ್ಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ಅಪ್ಪರ್ ತುಂಗ ಜಾಗವನ್ನ ಇಲ್ಲಿನ ಹಕ್ಲಿಪಿಕ್ಕಿ ಜನ ಅಕ್ರಮ ಮನೆ ನಿರ್ಮಿಸಿಕೊಂಡಿದ್ದು ಅವರನ್ನ ತೆರವುಗೊಳಿಸಲು ಯುಟಿಪಿ ಇಲಾಖೆ ಅನೇಕ ಬಾರಿ ನೋಟೀಸ್ ನೀಡಲಾಗುತ್ತು.

ಆದರೆ ನೋಟೀಸ್ ಗೆ ಉತ್ತರ ನೀಡಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 1-16 ಕ್ಕೆ ಪ್ರತಿಭಟನ ನಿರತ ಡಿಎಸ್ ಎಸ್ಅಂಬೇಡ್ಕರ್ ವಾದದ ಹಾಲೇಶಪ್ಪ, ಜಗ್ಗು ಅವರೊಂದಿಗೆ ಮಾತನಾಡಿದ ಎಕ್ಸಿಕ್ಯೂಟಿವ್ ಇಂಜಿನಿಯರ್ ಹರೀಶ್ ನೀವು ತಡೆ ನೀಡಲು ಕೋರ್ಟ್ನಿಂದ ಯಾವ ಆದೇಶವೂ ತಂದಿಲ್ಲ ಹಾಗಾಗಿ ತೆರವುಗೊಳಿಸುತ್ತಿದ್ದೇವೆ ಎಂದರು.

ನಮಗೆ 6 ತಿಂಗಳು ಕಾಲಾವಕಾಶಕೊಡಿ ಕಾಲಾವಕಾಶ ನೀಡಿದ ನಂತರ ವಸತಿ ಸಚಿವರಿಂದಲೇ ಅನುಮತಿ ತರಲಿದ್ದೇವೆ ಎಂದರು. ಇಲ್ಲ ನಿಮಗೆ ಸಾಕಷ್ಟು ಕಾಲಾವಕಾಶ ನೀಡಲಾಗಿದೆ ಕೋರ್ಟ್ ನಿಂದ ತಡೆಯಾಜ್ಞೆನೂ ತಂದಿಲ್ಲ. ನಮ್ಮ ತೆರವು ಕಾರ್ಯಾಚರಣೆ ಮುಂದುವರೆಸುತ್ತೇವೆ ಎಂದು ಹೇಳಿ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿದರು.

ಪ್ರತಿಭಟನ ನಿರತ ಹಾಲೇಶಪ್ಪ, ಮೀನು, ಎಂಬುವರನ್ನ ವಶಕ್ಕೆ ಪಡೆಯಲಾಯಿತು. ಜಗ್ಗು ಎಂಬುವರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದು ಪೊಲೀಸರು ಅವರನ್ನೂ ವಶಕ್ಕೆ ಪಡೆಯಲಾಯಿತು. ನಾಲ್ಕು ಮನೆಗಳನ್ನ ತೆರವುಗೊಳಿಸಲಾಯಿತು. ಮತ್ತೆ 15ದಿನದ ಒಳಗೆ ತಮ್ಮ ಮನೆಗಳನ್ನ ತಾವಾಗಿಯೇ ತೆರವು ಗೊಳಿಸಿಕೊಳ್ಳ ಬೇಕು ಇಲ್ಲವಾದರೆ ಇಲಾಖೆ ತೆರವುಗೊಳಿಸಲಿದೆ ಎಂದು ಸೂಚಿಸಲಾಯಿತು.

See also  ಪಾಂಡವಪುರ: ಖ್ಯಾತ ಸ್ಯಾಕ್ಸೋ ಫೋನ್ ಕಲಾವಿದ ನಿಂಗರಾಜು ನಿಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು