News Kannada
Sunday, March 26 2023

ಶಿವಮೊಗ್ಗ

ಶಿವಮೊಗ್ಗ: ಅಭಿಮಾನಿಗಳ ಮನೆ ಗೋಡೆಗಳ ಮೇಲೆ ಬರಹ ಬರೆಯುವ ಕಾರ್ಯಕ್ರಮಕ್ಕೆ ಚಾಲನೆ

Shimoga: A programme to write on the walls of fans' houses has been launched
Photo Credit : By Author

ಶಿವಮೊಗ್ಗ:  ಶಿವಮೊಗ್ಗದ ರಸ್ತೆ ಬದಿಯಲ್ಲಿ “ಕಾಂಗ್ರೆಸ್‌ ಗ್ಯಾರಂಟಿ” ಬಗ್ಗೆ ಮಾಹಿತಿಯಿದ್ದ ಬ್ಯಾರಿಕೇಡ್‌ಗೆ ಬಣ್ಣ ಹಚ್ಚಿ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಪಕ್ಷದ ಅಭಿಮಾನಿಗಳ ಮನೆ ಗೋಡೆಗಳ ಮೇಲೆ ಬರಹ ಬರೆಯುವ ಕಾರ್ಯಕ್ರಮಕ್ಕೆ  ಸಾಂಕೇತಿಕವಾಗಿ ಚಾಲನೆ ನೀಡಿದರು.

ಬೆಲೆ ಏರಿಕೆಯಿಂದ ಬರಡಾಗಿರುವ ರಾಜ್ಯದ ಜನರ ಬದುಕಿನಲ್ಲಿ ಕಾಂಗ್ರೆಸ್‌ನ ಪ್ರತಿ ಮನೆಗೆ 200 ಯೂನಿಟ್‌ ವಿದ್ಯುತ್‌ ನೀಡುವ ಗೃಹಜ್ಯೋತಿ, ಪ್ರತಿ ಮನೆ ಯಜಮಾನಿಗೆ ಮಾಸಿಕ 2000 ರೂ ನೀಡುವ ಗೃಹಲಕ್ಷ್ಮಿ ಗ್ಯಾರಂಟಿ ಬಣ್ಣ ತುಂಬಲಿದೆ ಎಂಬ ಬರಹಗಳನ್ನು ಗೋಡೆಗಳ ಮೇಲೆ ಬರೆಯಲಾಯಿತು.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ಮೊಹಮ್ಮದ್ಹ್ಯಾರಿಸ್ ನಲಪಾಡ್ ರವರ ಮಾರ್ಗದರ್ಶನದಂತೆ ಶಿವಮೊಗ್ಗ ಜಿಲ್ಲೆಯ ಎಲ್ಲಾ ವಾರ್ಡ್ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಮನೆ ಮನೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ತೆರಳಿ ಕಾಂಗ್ರೆಸ್ ಪಕ್ಷದ ಶ್ರೀಸಾಮಾನ್ಯ ನೆರವಿನ ಹಸ್ತದ ಎರಡು ಪ್ರಮುಖ ಯೋಜನೆಗಳನ್ನು ತಿಳಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಪಕ್ಷದ ಅಭಿಮಾನಿಗಳ ಮನೆ ಗೋಡೆಗಳ ಮೇಲೆ ಬರಹ ಬರೆಯುವ ಕಾರ್ಯಕ್ರಮವನ್ನು ಇಂದಿನಿಂದ ಪ್ರಾರಂಭಿಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿಯ ಕಾರ್ಯಧ್ಯಕ್ಷರಾದ ಸಲೀಮ್ ಮಹಮ್ಮದ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ ಪ್ರವೀಣ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್ ಸುಂದರೇಶ್ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್‍.ಪಿ. ಗಿರೀಶ್ , ಕಾಂಗ್ರೆಸ್ ಪಕ್ಷದ ಪ್ರಮುಖರಾದ ಕೆ ರಂಗನಾಥ್, ಎಚ್ ಸಿ ಯೋಗೀಶ್ ಶಿವಮೊಗ್ಗ ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್ ದಕ್ಷಿಣ ಬ್ಲಾಕ್ ಯು ಕಾಂಗ್ರೆಸ್ ನ ಎಸ್ ಕುಮಾರೇಶ್ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ,ಯುವ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

See also  ಶಿವಮೊಗ್ಗ: ಮೆಗ್ಗಾನ್ ನಲ್ಲಿ ಡ್ಯೂಟಿ ವೈದ್ಯರ ಮೇಲೆ ಹಲ್ಲೆ, ಓರ್ವ ಪೊಲೀಸರ ವಶಕ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

190
Ismail M Kutty

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು