News Kannada
Friday, September 22 2023
ಶಿವಮೊಗ್ಗ

ಶಿವಮೊಗ್ಗ: ಅಡಿಕೆ ವ್ಯಾಪಾರಕ್ಕೆ ತಂದ ಹಣ ಕಳವು, ದೂರು ದಾಖಲು

Shimoga: Complaint lodged against theft of money brought for sale of arecanut
Photo Credit : By Author

ಶಿವಮೊಗ್ಗ: ಅಡಿಕೆ ವ್ಯಾಪಾರಕ್ಕೆ ತಂದ ಹಣವನ್ನ ವಾಹನದ ಚಾಲಕನೇ ಲಫ್ಡಾಯಿಸಿರುವ ಘಟನೆ ನಡೆದಿದೆ. ಚನ್ನಗಿರಿಯ ಕೆರೆಬಿಳಚಿ ಗ್ರಾಮದಿಂದ ಶಿಕಾರಿಪುರದ ಜಟ್ ಪಟ್ ನಗರಕ್ಕೆ ಬಂದ ವೇಳೆ ಇದ್ದ ಹಣ ನಮಾಜ್ ಮುಗಿಸಿಕೊಂಡು ಬರುವದರೊಳಗೆ ಹಣನೂ ಇಲ್ಲ ಜೊತೆಗೆ ಚಾಲಕನೂ ಪರಾರಿ ಆಗಿದ್ದಾನೆ.

ಚನ್ನಗಿರಿ ತಾಲೂಕು ಕೆರೆಬಿಳಚಿ ಗ್ರಾಮದ ನಿವಾಸಿ ಮೊಹ್ಮದ್ ಇಮ್ರಾನ್ ತನ್ನ ವಾಹನದ ಚಾಲಕ ಮೊಹ್ಮದ್ ಮುಮಿಯಾಜ್ ಮತ್ತು ಸ್ನೇಹಿತ ಅಮ್ಜದ್ ಜೊತೆ ಹೂಂಡೈ ಕ್ರೇಟಾ ಕಾರಿನಲ್ಲಿ ಅಡಿಕೆ ಕಣ ನೋಡಲು ಶಿಕಾರಿಪುರದ ಜಟ್ ಪಟ್ ನಗರದ ನಿವಾಸಿ ಆಸೀಫ್ ಮನೆಗೆ ಬರುತ್ತಾರೆ.

ಆಸೀಫ್ ಮನೆಯ ಒಳಗೆ ಬಂದ ಇಮ್ರಾನ್ ಜೊತೆಯಲ್ಲಿ ತಂದಿದ್ದ 8.50 ಲಕ್ಷ ರೂ ಸೀಟಿನ ಕೆಳಗೆ ಇಟ್ಟಿದ್ದು ಚಾಲಕ ಮುಮಿಯಾಜ್ ಗೆ ನಮಾಜ್ ಮುಗಿಸಿ ಬರುವೆ ಹಣ ಇಟ್ಟಿದ್ದೇನೆ ಜೋಪಾನ ಎಂದು ತಿಳಿಸಿ ಹೋಗಿದ್ದಾರೆ.

ಸ್ನೇಹಿತನೊಂದಿಗೆ ಮಾತನಾಡಿ, ನಮಾಜ್ ಮುಗಿಸಿ ಕಾರಿನ ಬಳಿ ಬಂದು ನೋಡಿದಾಗ ಮುಮಿಯಾಜ್ ಕಾರಿನ ಬಳಿ ಇರಲಿಲ್ಲ. ಸೀಟಿನ ಕವರ್ ಕೆಳಗೆ ಇಟ್ಟ 8.50 ಲಕ್ಷ ರೂ ಸಹ ಇರಲಿಲ್ಲ. ಊಟಕ್ಕೆ ಹೋಗಿರ ಬಹುದು ಎಂದು ಅನೇಕ ಹೊತ್ತಿನ ವರೆಗೆ ಕಾದರೂ ಆತ ಬರುವ ಲಕ್ಷಣ ಕಂಡು ಬರಲಿಲ್ಲ.

ಆತನ ಮೊಬೈಲ್ ಗೆ ಕರೆ ಮಾಡಿದರೆ ಸ್ವಿಚ್ ಬರುತ್ತಿತ್ತು. ನಂತರ ಆಸೀಫ್ ಮನೆಯಲ್ಲಿದ್ದ ಕೆಎ-02-ಕೆಎ-6796 ಕ್ರಮ ಸಂಖ್ಯೆಯ ಬೈಕ್ ಸಹ ಕಾಣುತ್ತಿರಲಿಲ್ಲ. ಎಲ್ಲಿ ಹುಡುಕಿದರೂ ಕಾಣದ ಕಾರಣ ಚಾಲಕನ ಊರಾದ ಮಲೇಬೆನ್ನೂರಿಗೆ ಹೋಗಿ ಬಂದರೂ ಆತನ ಪತ್ತೆಯಾಗಲಿಲ್ಲ. ನಂತರ ಶಿಕಾರಿಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

See also  ಭಾರತದ ಸ್ಟಾರ್ಟಪ್ ಪರಿಸರ ವ್ಯವಸ್ಥೆಯು ಆಕರ್ಷಣೆಯ ಕೇಂದ್ರ: ಥಾವರ್ ಚಂದ್ ಗೆಹ್ಲೋಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು