News Kannada
ಶಿವಮೊಗ್ಗ

ಶಿವಮೊಗ್ಗ: ಬಿಜೆಪಿ ಕಚೇರಿ ಬಳಿ ನೂತನ ಕಾರ್ಯಾಲಯ ಉದ್ಘಾಟಿಸಿದ ಆಯನೂರು ಮಂಜುನಾಥ್

Shimoga: Ayanur Manjunath inaugurates new office near BJP office
Photo Credit : By Author

ಶಿವಮೊಗ್ಗ: ಎಂ ಎಲ್ ಸಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬೆನ್ಬಲ್ಲೇ ಆಯನೂರು ಮಂಜುನಾಥ್. ಬಿಜೆಪಿ ಕಚೇರಿ ಬಳಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿದ್ದಾರೆ.

ನೀತಿ ಸಂಹಿತೆ ಕಾರಣ ಸರ್ಕಾರಿ ಕಚೇರಿ ಬಂದ್ ಆಗಿದೆ.ಕಾರ್ಯಚಟುವಟಿಕೆ ಮುಂದುವರಿಸಲು ಖಾಸಗಿ ಕಚೇರಿ ಆರಂಭಿಸಿದ್ದೇನೆ. ಶಾಸಕರ ಕಾರ್ಯಾಲಯ ಅಂತಾನೇ ಬೋರ್ಡ್ ಹಾಕಿದ್ದೇನೆ ಎಂದರು.

ರಾಜೀನಾಮೆ ನೀಡುವವರೆಗೆ ಶಾಸಕರ ಕಾರ್ಯಾಲಯ ಆಗಿರುತ್ತೆ. ನನ್ನ ನಿರ್ಧಾರಕ್ಕೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ. ಎಲ್ಲ ವರ್ಗದವರು ನನ್ನ ನಿರ್ಧಾರವನ್ನು ಸ್ವಾಗತಿಸಿದ್ದಾರೆ

ಶಾಂತಿಯೆಡೆಗೆ ನನ್ನ ನಿಲುವಿಗೆ ಬೆಂಬಲ ಸಿಕ್ಕಿದೆ. ಕೆಲ ದಿನ ಕಾದು ನಾನು ರಾಜೀನಾಮೆ ನೀಡ್ತೇನೆ. ಪಕ್ಷಗಳ ಅಭ್ಯರ್ಥಿ ಚಿತ್ರಣ ನೋಡಿ ರಾಜೀನಾಮೆ ನೀಡ್ತೇನೆ. ಸ್ಪಷ್ಟ ಚಿತ್ರಣಕ್ಕೆ ಕಾಯ್ತಾ ಇದ್ದೇನೆ. ಎಲ್ಲ ಪಕ್ಷಗಳ ಹೆಜ್ಜೆ ನೋಡಿ ಅಧ್ಯಯನ ಮಾಡಿ ರಾಜೀನಾಮೆ ನೀಡುತ್ತೇನೆ ಎಂದರು.

ಕಾದು ನೋಡುವ ತಂತ್ರಕ್ಕೆ ಆಯನೂರು ಮೊರೆ ಹೋಗಿರುವುದು ಸ್ಪಷ್ಟವಾಗಿದೆ. ಪಕ್ಷದಿಂದ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರಾ? ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಆಯನೂರು ಪಕ್ಷದಿಂದ ತೀರ್ಮಾನ ಅಂತಿಮವಾಗುವವರೆಗೆ ಕಾಯಿರಿ ಎಂದು ಹಿತೈಷಿಗಳು ಸಲಹೆ ನೀಡಿದ್ದಾರೆ. ಹೀಗಾಗಿ ಕಾಯುತ್ತಿದ್ದೇನೆ ಎಂದರು.

ಬಿಜೆಪಿಯಿಂದಲೇ ಸ್ಪರ್ಧಿಸಬೇಕು ಅಂತ ಈಗಲೂ ಇಚ್ಛೆ ಹೊಂದಿದ್ದೇನೆ.  ಸ್ಪರ್ಧಿಸುವುದು ನಿಶ್ಚಿತ, ಯಾವುದೇ ಬದಲಾವಣೆಯಿಲ್ಲ. ಈಶ್ವರಪ್ಪ ಬಿಟ್ಟ ಬೇರೆಯವರಿಗೆ ಟಿಕೆಟ್ ನೀಡಿದರೆ ಆಗ ನೋಡೋಣ ಎಂದರು.

ನನ್ನ ಶಾಂತಿ ಮಂತ್ರ ಏಕಾಏಕಿ ಉದ್ಭವಿಸಿದ್ದಲ್ಲ. ಇದು ನನ್ನೊಬ್ಬನದೆ ಪ್ರಕರಣವಲ್ಲ. ಬದಲಾವಣೆ ಗಾಳಿ ಅನೇಕ ಕಡೆ ಬೀಸುತ್ತಿದೆ. ಮುಖಂಡರು ಸ್ಪಂದಿಸಿದರೆ ಪಕ್ಷಕ್ಕೆ ಡ್ಯಾಮೇಜ್ ಆಗಲ್ಲ. ನಾನ್ಯಾವುದೇ ಬ್ಲ್ಯಾಕ್ ಮೇಲ್ ಮಾಡುತ್ತಿಲ್ಲ. ಬ್ಲ್ಯಾಕ್ ಮೇಲ್ ಗೆ ಒಳಗಾಗುವ ನಾಯಕರು ಜಿಲ್ಲೆಯಲ್ಲಿಲ್ಲ ಎಂದು ಹೇಳಿದರು.

ಕಟೀಲ್ ಫ್ಲೆಕ್ಸ್ ಸಂಬಂಧ ಮಾತಾಡಿದ್ದರು. ಹರಕು ಬಾಯಿ ಅಂತಹ ಫ್ಲೆಕ್ಸ್ ಬೇಡ ಅಂದಿದ್ರು. ಟಿಕೆಟ್ ಕುರಿತು ಚರ್ಚೆಯಾಗಿಲ್ಲ. ಅದಾದ ಮೂರು ದಿನಗಳಲ್ಲಿ ಪಾಲಿಕೆ ಅವರೇ ತೆಗೆದಿದ್ದಾರೆ.  ಸರ್ಕಾರಿ ಕಚೇರಿ ಮುಚ್ಚಿದ್ದರಿಂದ ಖಾಸಗಿ ಕಚೇರಿ ತೆರೆದಿದ್ದೇನೆ ಎಂದರು.

See also  ಶಿವಮೊಗ್ಗ: ಚಂದ್ರಶೇಖರ್ ಸಾವು ಮೇಲ್ನೋಟಕ್ಕೆ ಕೊಲೆಯಂತಿದೆ- ಬಿ.ಎಸ್.ಯಡಿಯೂರಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

190
Ismail M Kutty

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು